ಗರಗ ಖಾದಿ ಕೇಂದ್ರದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು : ನಾಗೇಶ ಹೆಗಡ್ಯಾಳ
ಧಾರವಾಡ : ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಭಾರತದ ಹೆಮ್ಮೆಯ ಖಾದಿ ಧ್ವಜ ತಯಾರಿಕಾ ಕೇಂದ್ರದಲ್ಲಿ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಇತಿಹಾಸದ ಸಂಪನ್ಮೂಲ ಉಪನ್ಯಾಸಕರಾದ ನಾಗೇಶ ಹೆಗಡ್ಯಾಳ ಅವರು ಮಾತನಾಡಿ ” ಖಾದಿ ನೂಲುವ ನೇಕಾರರ ಸಮಸ್ಯೆಗಳನ್ನು ಆಲಿಸಿ, ಖಾದಿ ಕೇಂದ್ರದ ಅಭಿರುದ್ಧಿಗೆ ಸರಕಾರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು. ಸ್ವಾತಂತ್ರ್ಯ ಬಂದಾಗಿನಿಂದ ಖಾದಿ ಧ್ವಜ ತಯಾರಿಸಿಕೊಂಡು ಬಂದಿರುವ ಗರಗ ಕೇಂದ್ರ ಕನ್ನಡಿಗರ ಹೆಮ್ಮೆಯಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಹರಘರ ತಿರಂಗಾ ಕಾರ್ಯಕ್ರಮ ಮಾಡಿದಾಗ ಯಾವುದೇ ಬಟ್ಟೆಯಿಂದ ಧ್ವಜ ತಯಾರಿಸಲು ಅನುಮತಿ ನೀಡಿತು. ಆಗ ಖಾದಿ ಕೇಂದ್ರದ ನೂಲುವ ನೇಕಾರರು ಉದ್ಯೋಗ ಕಳೆದುಕೊಂಡರು.ಖಾದಿ ಧ್ವಜ ಭಾರತದ ಹೆಮ್ಮೆಯಾಗಿದೆ. ರಾಷ್ಟ್ರ ಧ್ವಜವನ್ನು ಖಾದಿಯಿಂದ ಮಾತ್ರ ತಯಾರು ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ರಂಗಭೂಮಿ ಕಲಾವಿದರಾದ ಅಕ್ಬರ್ ಮ್ಯಾಗೇರಿ, ಗರಗ ಖಾದಿ ಕೇಂದ್ರದ ಚೇರ್ಮನ್ ಆಗಿರುವ ಈಶ್ವರಪ್ಪ ಇಟಗಿ, ಎಂ ಎಸ್ ಹಿರೇಮಠ್, ಎಲ್ಲಪ್ಪ ಏಕಬೋಟೆ, ಈರಣ್ಣ ಕಾಕೂರ್, ಬಿ ಐ ಸೆಟೋಜಿ, ರುದ್ರಪ್ಪ ಕಾಂಬಳೆ, ಹಾಗೂ ಚನ್ನವ್ವ ಹೊನ್ನಣ್ಣವರ ಹಾಗೂ ಇನ್ನಿತರ ನೂಲವ್ ನೇಕಾರ ಮಾತೆಯರು ಇದ್ದರು.