ಸರಕಾರಿ ಪ್ರೌಢ ಶಾಲೆ ಮಂಜೂರಾತಿಗೆ ಆಗ್ರಹ..!
ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮದಭಾವಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನೂತನ ಸರಕಾರಿ ಕನ್ನಡ ಪೌಢ ಶಾಲೆಯ ಮಂಜುರಾತಿ ಕುರಿತು ಮದಬಾವಿ ಗ್ರಾಮದಲ್ಲಿ ಸದ್ಯ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ 7ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ ಆದ ಕಾರಣ ನಮ್ಮ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹಣ ಕಟ್ಟಿ ಕಲಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಡ ಮಕ್ಕಳು ಮಧ್ಯಮ ವರ್ಗದ ಮಕ್ಕಳು ಶಿಕ್ಷಣದಿಂದ ಮುಂಚಿತರಾ ಗುತ್ತಿದ್ದಾರೆ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಉನ್ನತಿ ವ್ಯಾಸಂಗಕ್ಕೆ ಅನು ಮಾಡಿಕೊಳ್ಳಲು ಗ್ರಾಮದಲ್ಲಿ ಸರಕಾರಿ ಮಂಜೂರಾತಿ ಗೊಳಿಸಬೇಕೆಂದು ಪ್ರವೀಣ ನಾಯಿಕ ಒತ್ತಾಯಿಸಿ ಗ್ರಾಮದಲ್ಲಿ ಕೆಲವು ಸಾರ್ವಜನಿಕ ಜಾಗದಲ್ಲಿ ಹಾಗೂ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಿಂದೆ ಗಡೆ ಗಲೀಜು ಆಗಿದ್ದು ಸ್ವಚ್ಛ ಗೊಳಿಸಬೇಕು ಎಂದು ಹೇಳಿದರು.
ಮಂಗಳ ಮುಖಿ ರಮಜಾನ ದಾದು ಮುಲ್ಲಾ ಅವರು ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ವಾಸವಾಗಿದ್ದು.ವಾಸಿಸಲು ಮನೆ ಹಾಗೂ ಖುಲ್ಲಾ ಜಾಗ ನೀಡಬೇಕೆಂದು ಆದ ಕಾರಣ ನನಗೆ ಮದಭಾವಿ ಗ್ರಾಮದಲ್ಲಿ ವಾಸಿಸಲು ಖುಲ್ಲಾ ಜಾಗ ವ ಮನೆಯನ್ನು ಮಂಜೂರು ಮಾಡಿಕೊಡಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿ ಅಜಿತ ಚೌಗಲಾ ಅವರಿಗೆ ಮನವಿ ನೀಡಲಾಯಿತು.
ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವದಾಗಿ ಸ್ಪಂದನೆ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು
ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ರಾಜ್ಯ ಸರ್ಕಾರದ ಸಚಿವರು ಮುಖ್ಯಮಂತ್ರಿಗಳು ರಾಜ್ಯಪಾಲರು ಕೇಂದ್ರ ಸರ್ಕಾರ ಕೇಂದ್ರದ ಸಚಿವರು ಪ್ರಧಾನ ಮಂತ್ರಿ ರಾಷ್ಟ್ರಪತಿಗಳು ಎಲ್ಲಾ ರೈತರಸಮಸ್ಯೆ ಬಗೆಹರಿಸಿ ಮುಂದಾಗ್ತಾರೆ..?
ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಶರಣಪ್ಪ ಸಿಂಧೆ ಅನಿಲ ಭಾಮನೆ,ಕಿರಣ್ ಪಾಟೋಳೆ , ಅಮೂಲ ಚವಾಣ ,ಸರಸ್ವತಿ ನ್ಯಾಮಗೌಡ ಕವಿತಾ ಬೋಸ್ಲೆ , ರೇಷ್ಮಾ ತೇಲಿ, ಶಾಂತ ಶಿಂದೆ ರಂಜಾನ್ ಮುಲ್ಲಾ , ಶಿವಾನಂದ ನಾವಿ ಇನ್ನು ಅನೇಕ ಮುಖಂಡರು ಉಪಸಿತರಿದ್ದರು



















