SIR ಮ್ಯಾಪಿಂಗಕ್ಕೆ ಕಾಂಗ್ರೆಸ್ ಮುಖಂಡರಿಗೆ ಬಿಎಲ್ಓಗಳು ಸ್ಪಂದಿಸುತ್ತಿಲ್ಲ! ಜಿಲ್ಲಾಧಿಕಾರಿಗೆ ದೂರು
ವಿಜಯಪುರ : ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಎಸ್. ಲೋಣಿ ರವರ ನೇತೃತ್ವದಲ್ಲಿ ಎಸ್. ಆಯ್. ಆರ್. ಕುರಿತು ಸಭೆ ನಡೆಯಿತು. ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗಿ ವಿಜಯಪುರ ಜಿಲ್ಲೆಯಲ್ಲಿ ಎಸ್.ಆಯ್.ಆರ್ ಮ್ಯಾಪಿಂಗಕ್ಕೆ ಬಿ.ಎಲ್.ಒ. ಗಳು ನಮ್ಮ ನಾಯಕರಿಗೆ ಹಾಗೂ ಬಿ.ಎಲ್.ಎ.-೨ಗಳಿಗೆ ಸ್ಪಂಧಿಸುತ್ತ್ತಿಲ್ಲವೆAದು ದಿನಾಂಕ: ೧೭-೦೬-೨೦೨೬ ರಂದು ನಡೆದ ದಿನಾಂಕ: ೨೧-೦೬-೨೦೨೬ ರಂದು ನಡೆಯುತ್ತಿರುವ ಪೂರ್ವಭಾವಿ ಸಭೆ ನಿಮಿತ್ಯ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳು ಬಿ.ಎಲ್.ಒ. ಗಳ ಕುರಿತು ತಮ್ಮ ನೋವನ್ನು ಹೇಳಿದ್ದರು. ತದನಿಮಿತ್ಯ ಇಂದು ಕೆಲವು ನಾಯಕರ ಜೊತೆ ಕೂಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಈ ಕೆಳಗಿನ ಅಂಶಗಳನ್ನು ನಿವಾರಿಸಲು ಕೋರಲಾಯಿತು.
೧) ವಿಜಯಪುರ ನಗರದಲ್ಲಿ ಹೊರಗಿನಿಂದ ವಿದ್ಯಾಭ್ಯಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಯಾದಿಯಲ್ಲಿ ಸೇರಿಸುತ್ತಿರುವದು ಗಮನಕ್ಕೆ ಬಂದಿದ್ದು ಕೂಡಲೆ ತಕ್ಷಣ ಕ್ರಮ ಕೈಗೊಳ್ಳುವುದು.
೨) ನೆರೆಯ ಗ್ರಾಮಗಳಿಂದ ಉದ್ಯೋಗಕ್ಕಾಗಿ ಬಂದು ನೆಲೆಸಿರುವ ದಿನಗೂಲಿ ನೌಕರರ ಹೆಸರನ್ನು ಮತದಾರರ
ಯಾದಿಯಲ್ಲಿ ಸೇರಿಸಿರುವುದು ಗಮನಕ್ಕೆ ಬಂದಿದೆ ಅದನ್ನು ತೆಗೆದು ಹಾಕುವುದು ಹಾಗೂ ಮತದಾರರ ಅಂತಿಮ ಪಟ್ಟಿಯಲ್ಲಿ ಬರದ ಹಾಗೆ ನೋಡುವುದು.
೩) ನೆರೆಯ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಹೆಸರನ್ನು ವಿಜಯಪುರ ಮತಕ್ಷೇತಮತದಾರರ ಯಾದಿಯಲ್ಲಿ ಸೇರಿಸಿರುವದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇಳಿ ಬಂದಿದ್ದು ಇದೆ ಇದರ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಅಂಥವರನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕುವುದು. ವಿಜಯಪುರ ನಗರದಲ್ಲಿ ಎಸ್.ಆಯ್.ಆರ್. ಪ್ರಕ್ರಿಯೆಯಲ್ಲಿ ಬಿ.ಎಲ್.ಒ. ಗಳು ಮತದಾರರಿಗೆ ಸರಿಯಾಗಿ ಮಾಹಿತಿ ಕೊಡದೆ ಸಹಕರಿಸುತ್ತಾ ಇಲ್ಲ. ಹಾಗೂ ಬಿ.ಎಲ್.ಒ. ಗಳು ಬೂತದಲ್ಲಿ ಇರದಕ್ಕೆ ಅವರುಗಳಿಗೆ ಫೋನ ಮಾಡಿದರೆ ಫೋನ ಕೂಡಾ ರಿಸೀವ ಮಾಡುತ್ತಿಲ್ಲ.
೪) ವಿಜಯಪುರ ಮಹಾನಗರಪಾಲಿಕೆ ಆಯುಕ್ತರನ್ನು ಬಿ.ಎಲ್.ಒ. ಗಳ ಕುರಿತು ನಮ್ಮ ಸಮಸ್ಯೆ ತಿಳಿಸಿದರೆ ಅದಕ್ಕೆ ಸ್ಪಂದಿಸುವದಿಲ್ಲ ಹಾಗೂ ಯಾವುದೆ ಕ್ರಮಕೈಗೊಳ್ಳುವದಿಲ್ಲ. ನಗರದ ಒಂದು ವಾರ್ಡಿನ ಹೆಸರನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ ಅದನ್ನು ತೆಗೆದು ಹಾಕುವುದು ಹಾಗೂ ಬಿ.ಎಲ್.ಒ. ಗಳನ್ನು ಬದಲಾಣೆ ಮಾಡಿ ಎಸ್. ಆಯ್. ಆರ್. ಮ್ಯಾಪಿಂಗಕ್ಕೆ ಸಹಕಾರ ಮಾಡಬೇಕು.
೫) ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಎಸ್.ಆಯ್.ಆರ್. ಮ್ಯಾಪಿಂಗಕ್ಕೆ ಹೋದರೆ ಬಿ.ಎಲ್.ಒ. ಗಳು ಸ್ಪಂದಿಸುವದಿಲ್ಲ. ಇದಕ್ಕೆ ಬಿ.ಎಲ್.ಒ.ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ನಾಯಕರು ತುಂಬಾ ನೊಂದಿರುವರು ಅದಕ್ಕೆ ಬೇಗನೆ ಸ್ಪಂದಿಸಬೇಕಾಗಿ ಕೋರಲಾಯಿತು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದರಫೀಕ ಟಪಾಲ, ವ್ಹಿಡಿಎ ಅಧ್ಯಕ್ಷರಾದ ಗಂಗಾಧರ ಸಂಭಣ್ಣಿ, ರಜಾಕ ಹೊರ್ತಿ, ಸೋಮನಾಥ ಕಳ್ಳಿಮನಿ, ಆಫ್ತಾಬಕಾದ್ರಿ ಇನಾಮದಾರ, ಶಬ್ಬೀರ ಜಾಗಿರದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಜಲನಗರ ಬ್ಲಾಕ್ ಅಧ್ಯಕ್ಷರಾದ ಆರತಿ ಶಾಹಪೂರ, ಶಫೀಕ ಮನಗೂಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ಜಾಕೀರ ಮುಲ್ಲಾ, ದೇಸು ಚವ್ಹಾಣ, ಅನ್ವರ ಜಮಾದಾರ, ನಬಿಲಾಲ ಕರಜಗಿ, ಸಂತೋಷ ಶಾಹಪೂರ, ಎಚ್. ಎಸ್. ಕೋರಡ್ಡಿ, ಶಕೀಲ ಗಡೇದ, ರಮೇಶ. ಚವ್ಹಾಣ
















