ಆದಶ೯ ಶಿಕ್ಷಕ ಪ್ರಶಸ್ತಿ ಪುರಸ್ಕಾರ
ಇಂಡಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ನವದೆಹಲಿ, ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಧಾರವಾಡ ಮತ್ತು ತಾಲೂಕು ಘಟಕ ಇಂಡಿ ಇವರ ಸಹಯೋಗದಲ್ಲಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜಯಂತ್ಯೋತ್ಸವ ಮತ್ತು ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಕರಿಗೆ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬರಗುಡಿ ಗ್ರಾಮದ ಹಿರಿಯರು ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಆರ್ ಬನಸೋಡೆ ಇವರನ್ನು ಅವರ ಸೇವಾ ಮನೋಭಾವವನ್ನು ಗುರುತಿಸಿ ಅವರಿಗೆ ಆದಶ೯ ಶಿಕ್ಷಕ ತಾಲೂಕು ಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿ ಲಭಿಸಿದ್ದು ಬರಗುಡಿ ಗ್ರಾಮದ ಹಿರಿಯರು ಪ್ರಾಥಮಿಕ ಶಾಲೆ ಮುಖ್ಯಗುರು ಶಿವಾಜಿ ಪಾಟೀಲ್ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಅಭಿವೃದ್ಧಿ ಮಂಡಳಿ ಮತ್ತು ಊರಿನ ಗಣ್ಯರು ಹಷ೯ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ತಾಲೂಕಿನ ಲಚ್ಯಾಣ ಗ್ರಾಮದ ನಿವಾಸಿಯಾಗಿದ್ದರಿಂದ ದ್ದರಿಂದ ಆ ಗ್ರಾಮದ ಜನರು ಅಭಿನಂದನೆ ತಿಳಿಸಿದ್ದಾರೆ.