ಇಂಡಿ: ವಿಜಯಪುರದ ಡಿಸಿಸಿ ಬ್ಯಾಂಕು ಗ್ರಾಹಕರ
ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಗಮನಾರ್ಹ
ಪ್ರಗತಿ ಸಾಧಿಸಿದ್ದು ರೈತರಿಗೆ ಕೃಷಿಗೆ ಮತ್ತು
ತನ್ನ ಗ್ರಾಹಕರಿಗೆ ೨೮೮೯ ಕೋಟಿ ರೂ ಸಾಲ ನೀಡಿದೆ.
ಸಹಕಾರಿ ರಂಗದ ತತ್ವದ ಅಡಿಯಲ್ಲಿ ತಾನು ಎಲ್ಲರಿಗಾಗಿ
ಎಲ್ಲರೂ ತನಗಾಗಿ ಎಂಬ ಧ್ಯೇಯದೊಂದಿಗೆ
ಪ್ರಗತಿಯಲ್ಲಿ ಮುಂಚುಣಿಯಲ್ಲಿದೆ ಎಂದು
ಬ್ಯಾಂಕಿನ ಸಿಇಒ ಎಸ್.ಬಿ.ಬಿರಾದಾರ ಹೇಳಿದರು.
ಅವರು ಗುರುವಾರ ಪಟ್ಟಣದ ಡಿಸಿಸಿ ಬ್ಯಾಂಕ್
ಸಬಾಭವನದಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ
ಮಾತನಾಡಿದರು.
ಬ್ಯಾಂಕಿನ ಅಭಿವೃದ್ದಿಗೆ ಗ್ರಾಹಕರೇ ಕಾರಣ. ಗ್ರಾಹಕರು ಬ್ಯಾಂಕಿನ ನೀಡುವ ಸಾಲದ ಸೌಲಭ್ಯ ಪಡೆದು ಮರು ಪಾವತಿಸಿ ಬ್ಯಾಂಕಿನ ಪ್ರಗತಿಗೆ ಶ್ರಮಿಸಿ, ಆರ್ಥಿಕವಾಗಿ ತಾವೂ ಸದೃಢರಾಗಿ ಬ್ಯಾಂಕಿನ ಏಳ್ಗೆಗೂ ಸಹಕರಿಸಿ ಎಂದು ಮನವಿ ಮಾಡಿದರು. ತರಬೇತಿ ಸಂಯೋಜಕ ಆರ್.ಎಂ. ಬಂಡಗಾರ ಮಾತನಾಡಿ ಬ್ಯಾಂಕಿನ ಜೊತೆಗೆ ಗ್ರಾಹಕರ ಅಭಿವೃದ್ದಿ ಮುಖ್ಯ. ಈ ದಿಶೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ೪೬ ಶಾಖೆಗಳನ್ನು ಹೊಂದಿದ್ದು ಇನ್ನು ೧೦
ಪ್ರಾರಂಭದ ಹಂತದಲ್ಲಿವೆ. ಗ್ರಾಹಕರ ವಿಚಾರಗಳು, ಸಮಸ್ಯೆ, ಸ್ಥಾನಿಕವಾಗಿ ಪರಿಹಾರ, ಕ್ರೋಢಿಕರಣ ವ್ಯವಸ್ಥೆ, ಕುರಿತು ಗ್ರಾಹಕರಿಗೆ ಸ್ಪಂದಿಸುವ ಸಲುವಾಗಿ ಮೇಲಿಂದ ಮೇಲೆ ಗ್ರಾಹಕರಸಭೆ ಹಮ್ಮಿಕೊಂಡು ಸ್ಪಂದಿಸುತ್ತಿದೆ ಎಂದರು.
ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕ ಕಲ್ಲನಗೌಡ ಪಾಟೀಲ, ಉಪ ಪ್ರಧಾನ ವ್ಯವಸ್ಥಾಪಕರಾದ ಎಂ.ಎಚ್. ಹತ್ತೂರಕರ, ಜೆ.ಬಿ.ಪಾಟಿಲ, ಅರವಿಂದ ಪೂಜಾರಿ, ತಾಲೂಕಾ ನೋಡಲ್ ಅಧಿಕಾರಿ ಎಂ.ಎಸ್.ದೇಸಾಯಿ, ಇಂಡಿ ಶಾಖೆಯನ್ನು ಹಿರಿಯ ವ್ಯವಸ್ಥಾಪಕಐ .ಎನ್. ತೆಲ್ಲೂರ ಮಾತನಾಡಿದರು. ಗ್ರಾಹಕರಾದ ನಿವೃತ್ತ ಶಿಕ್ಷಕ ಎ.ವಿ.ಪಾಟೀಲ, ಅಕ್ಕಮಹಾದೇವಿ ಸೌಹಾರ್ಧ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಉಮೇಶ ಬಳಬಟ್ಟಿ, ಇಂಗಳಗಿ ಪಿಕೆಪಿಎಸ್ ಅಧ್ಯಕ್ಷ ಪ್ರಭು ಹೊಸಮನಿ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಪ್ರಶಾಂತ ಕಾಳೆ, ಲಾಳಸಂಗಿಯ ನಿಂಗಪ್ಪ ಗೊಬ್ಬುರ, ಬುದ್ದುಗೌಡ ಪಾಟೀಲ, ಹಂಜಗಿ ಗ್ರಾಮದ ಮಹಿಳಾ ಸ್ವ ಸಹಾಯ ಗುಂಪಿನ ಪ್ರತಿನಿಧಿ ವಿಜಯಲಕ್ಷ್ಮ ಮಾಳಗೆ, ಹಳಗುಣಕಿ ಪಿಕೆಪಿಎಸ ನಿರ್ದೆಶಕ ವಿಶ್ವನಾಥ ಪಾಟೀಲ, ಸಿದ್ದರಾಮ ತಳಕೇರಿ, ಶರಣಗೌಡ ಬಂಡಿ, ಚಂದ್ರಶೇಖರ ಹೊಟಗಿ, ಶಂಕರಗೌಡ ಪಾಟೀಲ, ಸನ್ಮತಿ ಹಳ್ಳಿ, ಚೇತನ ಧನಶೆಟ್ಟಿ, ಶ್ರೀಶೈಲ ಬಿರಾದಾರ, ಬಿ.ಎಸ್.ಪಾಟಿಲ, ಮಂಜುನಾಥ ತಮಶೆಟ್ಟಿ ಮಾತನಾಡಿದರು.