BJP ದಲಿತರ ಮೇಲೆ ದೌರ್ಜನ್ಯ : ಮಾಜಿ ಸಚಿವರ ಬಂಧನಕ್ಕೆ ಒತ್ತಾಯ..!
ಇಂಡಿ : ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಬೇಕು. ಹಾಗೂ ಅವರ ಮೇಲೆ ಎಸಿ, ಎಸ್ಟಿ ಕಾಯ್ದೆಡಿ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂಡಿ ತಾಲ್ಲೂಕು ಶಾಖೆವತಿಯಿಂದ ತಹಶಿಲ್ದಾರ ಅವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ತಮಟೆ ಬಾರಿಸುತ್ತಾ ಹಾಗೂ ದಿಕ್ಕಾರ ಹೇಳುತ್ತಾ ಪ್ರತಿಭಟಿಸಿ ಆಡಳಿತ ಸೌಧಕ್ಕೆ ಆಗಮಿಸಿದ ಅವರು ಕೂಡಲೇ ಅರಗ ಜ್ಞಾನೇಂದ್ರ ಅವರ ಮೇಲೆ ಕ್ರಮಕ್ಕಾಗಿ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಡಿ ಎಸ್ ಎಸ್ ಸಂಚಾಲಕ ರಮೇಶ್ ನಿಂಬಾಳಕರ ಮಾತಾನಾಡಿದ ಅವರು, ಕೇಂದ್ರ ಸರಕಾರದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಜಿ ಅವರನ್ನು ಸುಟ್ಟು ಕರಕಲ ಕಟ್ಟಿಗಿಗೆ ಹೋಲಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ ಜನರ ಬಗ್ಗೆ ಬಹಳ ಹಗುರವಾಗಿ ಮಾತಾನಾಡಿದ್ದು, ಸುಟ್ಟು ಕರಕಲು ಕಟ್ಟಿಗೆ ಹಾಗೇ ಇರುತ್ತಾರೆ ಎಂದು ಹೇಳಿದ್ದಾರೆ . ಇನ್ನೂ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹೇಳಿಕೆ ನೀಡಿರುವದು ಅವೈಜ್ಞಾನಿಕ ಮಾತುಗಳು ಹೇಳಿದ್ದಾರೆ. ಅರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಬೇಕು.
ಇನ್ನೂ ಕೇಂದ್ರದ ಬಿಜೆಪಿ ಸರಕಾರ ಬಂದಾಗಿನಿಂದ ಬಿಹಾರ, ಉತ್ತರ ಪ್ರದೇಶ ಜೊತೆಗೆ ಇತರೆ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರನ್ನು ಅತ್ಯಾಚಾರವೆಸಗಿ, ಕೊಲೆ ಮತ್ತು ಬೆತ್ತಲೆ ಮೆರವಣಿಗೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಜಾರ್ಖಂಡ್ ದಲ್ಲಿ ದಲಿತ ಮಹಿಳೆಯ ಮೇಲೆ ವಿವಸ್ತ್ರಗೊಳಿಸಿ ದೌರ್ಜನ್ಯಗೊಳಿಸಿದ ಆರೋಪಗಳಿಗೆ ಗಡಿಪಾರು ಕಠಿಣ ಶಿಕ್ಷೆ ನೀಡಬೇಕು. ಹಾಗೂ ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಮತ್ತು ಒಬ್ಬ ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕು ಎಂದರು.
ಅದಲ್ಲದೇ ಇನ್ನೂ ಇಂಡಿಯ ಉಪವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ ದಿನಾಚರಣೆ ಪೂರ್ವಭಾವಿ ಸಭೆ ನಡೆದಾಗ, ದಲಿತ ಸಂಘಟನೆಗಳು ಹಪ್ತಾ ವಸೂಲಿ ಸಂಘಟನೆಗಳಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ ಜೆ ಇಂಡಿ ಅವರು ಸಂಘಟನೆಗಳ ಬಗ್ಗೆ ಅತೀ ಕೀಳು ಮಟ್ಟದಿಂದ ಮಾತಾನಾಡಿದ್ದಾರೆ. ಕೂಡಲೇ ಅವರನ್ನು ಸಮಾಜ ಕಲ್ಯಾಣ ಇಲಾಖೆಯಿಂದ ತೆಗೆದು ಹಾಕಿ ವರ್ಗಾವಣೆ ಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೇವಣಸಿದ್ದ ಮಸಳಿಕೇರಿ, ಧರೆಪ್ಪ ಮಂದೋಲಿ, ರಾಮಚಂದ್ರ ಗುಡಮಿ, ರಾಮಚಂದ್ರ ದೊಡ್ಡಮನಿ, ರಾಜು ಸಾಲೋಟಗಿ ಹಾಗೂ ಇನ್ನೂ ಅನೇಕ ಮುಖಂಡರು, ಯುವಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.