ಸದನದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಬಗ್ಗೆ ಧ್ವನಿ ಮೊಳಗಿಸಿದ ಶಾಸಕ ಪಾಟೀಲ..
ಇಂಡಿ : ಮುಂಗಾರು ಕೈ ಕೊಟ್ಟಿದೆ. ಬಹುತೇಕ ಕರ್ನಾಟಕದಲ್ಲಿ ಅತೀ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಹಾಗೂ ನೀರಾವರಿ ವಂಚಿತ ಪ್ರದೇಶ ಇಂಡಿ ಮತಕ್ಷೇತ್ರದ ಹೊರ್ತಿ ಭಾಗದಲ್ಲಿದೆ. ಈ ಪ್ರದೇಶಕ್ಕೆ ಈ ಯೋಜನೆ ಬಹಳ ಅತೀ ಮುಖ್ಯವಾದ ಪಾತ್ರವಹಿಸುತ್ತದೆ. ಈ ಮೂರು ಹಂತದ ಯೋಜನೆಯನ್ನ ಬಹಳ ತ್ವರಿತವಾಗಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತೆಂದು ಸದನದಲ್ಲಿ ಉಪಮುಖ್ಯ ಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮರು ಉತ್ತರ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್ ಮಾತಾನಾಡಿ, 2638 ಕೋಟಿ ರೂಪಾಯಿ ಅಂದಾಜು ಮೊತ್ತ ತಯಾರಿಸಿ 18,19 ರಲ್ಲಿ ನಿಗದಿ ಮಾಡಲಾಗಿದೆ. ಈಗಾಗಲೇ ಮೊದಲನೆಯ ಹಂತಕ್ಕೆ ರೂ 768 ಕೋಟಿ, ಎರಡನೇ ಹಂತಕ್ಕೆ ರೂ 931ಕೋಟಿ ಮೂರನೇ ಹಂತಕ್ಕೆ ರೂ 939 ಕೋಟಿ ರೂಪಿಸಲಾಗಿದೆ.
ಒಟ್ಟು 2800 ಹೆಕ್ಟೇರ್ ಪ್ರದೇಶ ನೀರಾವರಿ ಮಾಡಿ 3.2 ಟಿಎಮ್ ಸಿ ನೀರನ್ನು ಉಪಯೋಗಿಸಲಾಗಿದೆ. ಇನ್ನೂ ಮುಂದಿನ ಕಾರ್ಯಗಳು ಕೈ ಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಟ್ಟಾರೆಯಾಗಿ ಮೊದಲ ಹಂತದ ಕಾಮಗಾರಿ ಆದಷ್ಟು ಬೇಗ ಆರಂಭವಾಗಿ ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸಬೇಕಿದೆ.