ಚಡಚಣ: “ನಾವೆಲ್ಲರೂ ನಿನ್ನೆ ನಾಳೆಯ ಚಿಂತೆಯಲ್ಲಿ ಕುಗ್ಗುತಿದ್ದೇವೆ”, ವರ್ತಮಾನದ ವಾಸ್ತವತೆಯಲ್ಲಿ ಇರುವ ಸಮಯವನ್ನು ನಗುತ, ನಗಿಸುತ್ತ ಬದುಕಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚುತ್ತ ಬದುಕನ್ನು ಸಂತೃಪ್ತಗೊಳಿಸಬೇಕು ಎಂದು ಕಾತ್ರಾಳ ಗುರುದೇವ ಆಶ್ರಮದ ಶ್ರೀ ಅಮೃತಾನಂದ ಸ್ವಾಮಿಜಿಯವರು ಸಾನಿಧ್ಯ ನುಡಿಯಲ್ಲಿ ಹೇಳಿದರು.
ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದ ಶ್ರೀ ಬಸವವೇಶ್ವರ ಪ್ರಾಥಮಿಕ ಶಾಲೆಯಲ್ಲಿ ನಡೆದ ದಿ.ಶ್ರೀ ಆರ್.ಎಸ್. ಬಿರಾದಾರ ಗುರುಗಳ ಐದನೆಯ ಪುಣ್ಯಸ್ಮರಣೆ ಹಾಗೂ ಲೇಖಕ ಶ್ರೀ ಎಂ.ಕೆ.ಶೇಖ್ ರವರ ಐದನೆಯ ಕೃತಿ “ಭೂಮಾತೆಯ ಮಡಿಲಲ್ಲಿ” ಎಂಬ ಆಧುನಿಕ ವಚನಗಳ ಸಂಕಲನವನ್ನು ಲೋಕಾರ್ಪಣೆ ಮಾಡಿ ಶುಭ ಹರಿಸಿದರು. ಈ ಸಂದರ್ಭದಲ್ಲಿ ವಿವೇಕಾನಂದ ಬಿರಾದರ, ಡಿ.ಬಿ. ಧರ್ಮವೀರ, ಬಸವರಾಜ ಬಿರಾದಾರ, ಶ್ರೀಮತಿ ನೂತನ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಭೂಸನೂರ, ಆರ್.ಒ.ಬಿರಾದಾರ, ಸಾಯಬಣ್ಣ ಮುಚ್ಚಂಡಿ, ಸಾಹಿತಿ ಎಂ.ಕೆ.ಶೇಖ್, ಸಿದ್ದು ತೇಲಿ, ಶ್ರೀಶೈಲ ದಂಧರಗಿ, ಶ್ರೀ ಹಾಸಿಂಪೀರ ಮುಲ್ಲಾ, ಭೀಮನಗೌಡ ಬಿರಾದಾರ, ಶ್ರೀ ಚಂದ್ರಾಮ ಸಿಂಗೆ, ಕೆ.ಎಸ್.ಬಿರಾದಾರ, ಎಲ್.ಎಂ.ಭೂಸನೂರ ಮುಂತಾದವರಿದ್ದರು.