ವಿಜಯಪುರ : ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ನಾಲ್ವರನ್ನು ಸಮಾಜದ ಹಿತದೃಷ್ಟಿಯಿಂದ ಗಡಿಪಾರು ಮಾಡಿ ಎಸ್ಪಿ ಎಚ್.ಡಿ. ಆನಂದಕುಮಾರ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರೈಲ್ವೆ ಸ್ಟೇಶನ್ ಬಳಿಯ ನಿವಾಸಿ ಭರತ ಊರ್ಫ್ ಗುಡ್ಯಾ ಸತ್ಯನಾರಾಯಣ ಅಗರವಾಲ (46), ನಗರ ನಿವಾಸಿ ವಕೀಲ ಸೈಯ್ಯದ ಆಸಿಫುಲ್ಲಾ ಸೈಯದ್ ಖಾದರಪಾಷಾ ಖಾದ್ರಿ (40), ನಿಡಗುಂದಿಯ ವೆಂಕಟೇಶ ಮಾರುತಿ ಬಂಡಿವಡ್ಡರ (38) ಹಾಗೂ ಮನಗೂಳಿ ಠಾಣಾ ವ್ಯಾಪ್ತಿಯ ಉಕ್ಕಲಿ ನಿವಾಸಿ ನಾಗಪ್ಪ ಟಾಕಪ್ಪ ನಾಟಿಕಾರ (46) ಇವರನ್ನು 2022 ಮೇ 10 ರಿಂದ 2023 ಮೇ 9ರವರೆಗೆ ಮೈಸೂರು ಜಿಲ್ಲೆಯ ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದರು.