ಗಜಾನಂದ ಗಿಣ್ಣಿ ಅವರಿಗೆ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ: ಗೆಳೆಯರ ಬಳಗದಿಂದ ಸನ್ಮಾನ
ಇಂಡಿ: ಹಿರೇರೂಗಿ ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ಗಜಾನಂದ ಗಿಣ್ಣಿ ಅವರನ್ನು ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಇಂಡಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಅವರು ಇಂಡಿ ತಾಲೂಕು ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಿರೇರೂಗಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಗಜಾನಂದ ಗಿಣ್ಣಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಇಂಡಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಗಿಣ್ಣಿ, ಶ್ರೀಶೈಲ್ ಗುನ್ನಾಪುರ, ರವಿಕಾಂತ್ ಝಳಕಿ, ಶಿಕ್ಷಕರಾದ ದ್ಯಾವಪ್ಪ ಹಿರೇಕುರುಬರ, ಅಶೋಕ್ ಝಳಕಿ, ಪರಶುರಾಮ್ ಹೊಸಮನಿ, ಉಮೇಶ್ ಹಲಸಂಗಿ, ವಿಹಾನ್ ಗಿಣ್ಣಿ ಹಾಗೂ ಶ್ರೀಹಾನ್ ಗಿಣ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನವಾಗಿ ರೈತ ಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಗಜಾನಂದ ಗಿಣ್ಣಿ ಅವರಿಗೆ ಗಣ್ಯರು ಹಾಗೂ ಸ್ನೇಹಿತರು ಶುಭಾಶಯಗಳನ್ನು ಸಲ್ಲಿಸಿದರು.




















