ಆಧ್ಯಾತ್ಮದಿಂದ ಸೌಜನ್ಯ ಸಂಸ್ಕೃತಿ ಸಂವರ್ಧನೆ
ಇಂಡಿ : ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಆಧ್ಯಾತ್ಮದ ಹಸಿವು ಬೇಕು. ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿಗೆ ಆಶಾಕಿರಣ ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ ಆಧ್ಯಾತ್ಮ ಜ್ಞಾನದಿಂದ ಸೌಜನ್ಯ ಸಂಸ್ಕೃತಿ ಸಂವರ್ಧನೆ ಗೊಳ್ಳುವದು ಎಂದು ಪರಮಪೂಜ್ಯ ಶ್ರೀ ಮುರಗೇಂದ್ರ ಶಿವಾಚಾರ್ಯ ಹೇಳಿದರು.
ನಗರದ ಶ್ರೀ ಆಭಿನವ ಮುರಗೇಂದ್ರ ಶ್ರೀಗಳವರ ಶಿರಶ್ಯಾಡ ಇಂಡಿ ಶಾಖಾ ಮಠದಲ್ಲಿ ನಡೆದ ಹುಣ್ಣಿಮೆ ಬೆಳಂದಿಗಳ ಕಾರ್ಯಕ್ರಮ ಮತ್ತು ಆದರ್ಶ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉಪನ್ಯಾಸ ನೀಡಿ ನಿವೃತ್ತ ಪ್ರಾಚಾರ್ಯೆ ಶೈಲಜಾ ಬಿರಾದಾರ ಮಾತನಾಡಿ ಮಾನವ ಉನ್ನತಿಗೆ ಮತ್ತು ಗೆಲುವಿಗೆ ಸಂಸ್ಕೃತಿ ಸದ್ಗುಣಗಳ ಅವಶ್ಯಕತೆಯಿದೆ. ಮಾನವತೆಯಿಂದ ದೈವತ್ವದ ಕಡೆಗೆ ಒಯ್ಯುವ ಮಾರ್ಗವೇ ಸಂಸ್ಕೃತಿ ಎಂದರು.
ಜೈನಾಪುರದ ರೇಣುಕಾ ಶಿವಾಚಾರ್ಯರರು ಮಾತನಾಡಿ ಮನುಷ್ಯ ತಿಳಿದಿರುವಕ್ಕಿಂತ ತಿಳಿಯಬೇಕಾದುದು ಬಹಳಷ್ಟಿದೆ. ಮಾನವನ ಮನಸ್ಸು ಬುದ್ದಿ ಮತ್ತು ಸದ್ವಿಚಾರಗಳು ಸಮೃದ್ದವಾಗಿ ಬೆಳೆದಾಗ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಮೌಲ್ಯಾಧಾರಿತ ಜೀವನಕ್ಕೆ ಶ್ರಮ ಶಕ್ತಿಗೆ ಸರಿಸಾಟಿಯಾದುದು ಇನ್ನೊಂದಿಲ್ಲ ಎಂದರು.
ಅಧ್ಯಕ್ಷರು ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಬಸವರಾಜ ಕುಮಸಗಿ, ಸನ್ಮಾನಿತ ಶ್ರೀಮಂತ ಇಂಡಿ , ವೈ.ಜಿ.ಬಿರಾದಾರ, ಬಸವರಾಜ ರಾಹೂರ , ಮುರಳೀಧರ ಬಜಂತ್ರಿ ಮಾತನಾಡಿದರು.
ಇದೇ ವೇಳೆ ಆದರ್ಶ ದಂಪತಿಗಳಾದ ಶ್ರೀಮತಿ ಅನುಸೂಯಾ ಮತ್ತು ಶ್ರೀಮಂತ ಇಂಡಿ, ಮಹಾದೇವಿ ಮತ್ತು ಶಾಂತನಗೌಡ ಪಾಟೀಲ ದಂಪತಿ, ಶೋಭ ಮತ್ತು ಅಣ್ಣಾರಾಯ ಪಾಟೀಲ ದಂಪತಿಗಳನ್ನು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಅನೀಲ ಪ್ರಸಾದ ಏಳಗಿ,ರಾಜೇಶ್ವರಿ ಕ್ಷತ್ರಿ ಮತ್ತಿತರಿದ್ದರು.
ಇಂಡಿ ನಗರದ ಮುರಗೇಂದ್ರ ಶಿವಾಚಾರ್ಯರರ ಮಠದಲ್ಲಿ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿದರು.



















