ಪುರಸಭೆ ಜಾಗದಲ್ಲಿನ ಅಕ್ರಮ ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಿ: ಇರದಿದ್ದರೆ ನಿವಾಸಿಗಳಿಂದ ಧರಣಿ ಎಚ್ಚರಿಕೆ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ:ರಸ್ತೆಗೆ ರಸ್ತೆ ಲಿಂಕ್ ಮಾಡಿ ರಸ್ತೆ ನಿರ್ಮಾಣ ಮಾಡುವಂತೆ ನಿವಾಸಿಗಳಿಂದ ಮನವಿ ಸಲ್ಲಿಸಿ ಮೂರು ವರ್ಷ ಗತಿಸಿದರು ಇಲ್ಲಿಯವರೆಗೂ ಇಂದು ಮಾಡುತ್ತೇವೆ.ನಾಳೆ ಮಾಡುತ್ತೇವೆ ಎಂದು ಪುರಸಭೆಯವರು ಉತ್ತರ ನಿಡುತ್ತ ಬರುತ್ತಿದ್ದಾರೆ.ಸರ್ವೆ ನಂಬರ 179/ಇ ನಲ್ಲಿ ಇರುವ ಗಾರ್ಡನ್ ಜಾಗವನ್ನು ಅತಿಕ್ರಮಣ ಮಾಡಿ ಸರ್ವೆ ನಂಬರ 179/2ಡ, ರಸ್ತೆಗೆ ರಸ್ತೆ ಲಿಂಕ್ ಮಾಡಿರುವುದಿಲ್ಲ,ಈ ಕುರಿತು 2-11-2022 ರಲ್ಲಿ ಪುರಸಭೆಗೆ ನಿವಾಸಿಗಳು ಮನವಿ ಸಲ್ಲಿಸಿದರು. ಅಂದು ಇರುವ ಪುರಸಭೆ ಮುಖ್ಯಾಧಿಕಾರಿಗಳು ಈ ಸರ್ವೆ ನಂಬರಗೆ ಸಂಬಂಧಿಸಿದವರಿಗೆ ನೋಟಿಸ್ ನೀಡಿದ್ದೇವೆ.ಸ್ವಲ್ಪ ದಿನದಲ್ಲಿ ಅನುದಾನ ಬಂದ ಮೇಲೆ ರಸ್ತೆ ಮಾಡಿ ಕೊಡುತ್ತೇವೆ.ಎಂದು ಹೇಳಿದ್ದರು.ನಂತರ ಒಂದು ವರ್ಷ ಕಳೆದರು ಇದರ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ,ನಂತರ ಮುದ್ದೇಬಿಹಾಳದಲ್ಲಿ ಲೋಕಾಯುಕ್ತನವರು ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದ್ದರು,ಅವಾಗ ಲೋಕಾಯುಕ್ತ ಅಧಿಕಾರಿಗಳು ಪುರಸಭೆಗೆ ನೋಟಿಸ್ ನೀಡಿದ್ದರು..
ನಂತರ ಪುರಸಭೆ ಇಂಜಿನಿಯರಿಂಗ್ ಮಾರುತಿ ನಗರದ ಸರ್ವೆ ನಂಬರ 179/2ಡ ಮತ್ತು 179/ಇ, ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಇದು ಪುರಸಭೆ ಜಾಗೆ ಇದ್ದು ನಿಮಗೆ ಶೀಘ್ರದಲ್ಲೇ ಅನಧಿಕೃತ ಕಂಪೌಂಡ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದಿದ್ದರು.ಆದರೆ ಈಗ ಅನುದಾನ ಬಂದಿದೆ.ರಸ್ತೆ ಇನ್ನೂ ನಿರ್ಮಾಣ ಮಾಡುತ್ತಿಲ್ಲ,ಇಲ್ಲಿ ಈಗ ಮಳೆ ಬಂದಾಗ ನೀರು ನಿಂತು ತಿರುಗಾಡಲು ರಸ್ತೆ ಇಲ್ಲ.ಕಾರಣ ತ್ವರಿತಾಗಿ ಒಂದು ವಾರದಲ್ಲಿ ಅತಿಕ್ರಮ ಕಂಪೌಂಡ ತರೆವುಗೊಳಿಸಿ ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲವಾದಲ್ಲಿ ನಂತರದ ದಿನದಲ್ಲಿ ಪುರಸಭೆ ಮುಂದೆ ಬಂದು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ.ಎಂದು ಎಚ್ಚರಿಸುತ್ತೇವೆ.
ಮಾರುತಿ ನಗರದ ದಾನಮ್ಮ ದೇವಸ್ಥಾನವು ಗಾರ್ಡನ್ ಜಾಗದಲ್ಲಿ ನಿರ್ಮಾಣ ವಾಗಿದೆ.ಆ ಗುಡಿಯ ಹಿಂದೆ ಜಾಗವಿದ್ದು ಅಲ್ಲಿ ಅಕ್ರಮ ಕಂಪೌಂಡ ನಿರ್ಮಾಣ ಮಾಡಿದ್ದಾರೆ.ಅದರಿಂದ ರಸ್ತೆಯಿಂದ ರಸ್ತೆಗೆ ಲಿಂಕ್ ಇಲ್ಲ.ಕಂಪೌಂಡ ತೆರವುಗೊಳಿಸಿ ರಸ್ತೆಗೆ ರಸ್ತೆ ಲಿಂಕ್ ಮಾಡಬೇಕು.ಇಲ್ಲವಾದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ.
– – ಸಾಗರ ಎಂ ಉಕ್ಕಲಿ, ನಿವಾಸಿ