ಕಂಠಿ ಕುಟುಂಬಕ್ಕೆ ಮಾಜಿ ಶಾಸಕ ನಡಹಳ್ಳಿ ಸಾಂತ್ವನ..!
ಇತ್ತೀಚೆಗೆ ನಿಧನರಾಗಿದ್ದ ಪುರಸಭೆಯ ಬಿಜೆಪಿ ಸದಸ್ಯ ಚನ್ನಪ್ಪ ಕಂಠಿ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಗರದ ವೀರಶೈವ ಲಿಂಗಾಯತ ಸಮಾಜದ ಹಿರಿಯರು ಮುಖಂಡರು ಹಾಗೂ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ ಅಕಾಲಿಕ ನಿಧನದ ಹಿನ್ನಲೆಯಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ್ (ನಡಹಳ್ಳಿ) ಅವರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ವಿರೇಶ್ವರ ನಗರ ಬಡಾವಣೆಯ ಕಂಠಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ನಾಯಕರಾಗಿ, ಮಾರ್ಗದರ್ಶಕ ಮತ್ತು ದಾರ್ಶನಿಕನ ಗುಣಗಳನ್ನು ಸಾಕಾರಗೊಳಿಸಿದ ಗಮನಾರ್ಹ ವ್ಯಕ್ತಿಯಾಗಿದ್ದರು. ಎಲ್ಲರಿಗೂ ಪ್ರಿಯರಾಗಿ ಉತ್ತಮ ಮಾರ್ಗದರ್ಶಕರಾಗಿದ್ದರು. ತಾಲೂಕಿನ ಲಿಂಗಾಯತ ಸಮಾಜಕ್ಕೆ ಮಾತ್ರವಲ್ಲದೇ ಎಲ್ಲ ಸಮಾಜಕ್ಕೂ ಹಿರಿಯ ಮಾರ್ಗದರ್ಶಕರಾಗಿದ್ದರು. ಅವರ ದೈನಂದಿನ ಚಟುವಟಿಕೆಗಳು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕಿದೆ. ಅವರನ್ನು ಕಳೆದುಕೊಂಡ ಪಕ್ಷಕ್ಕೆ ಹಾಗೂ ಪಟ್ಟಣದ ವ್ಯಾಪಾರಸ್ಥ ಸಂಘಗಳಿಗೆ ಮತ್ತು ಲಿಂಗಾಯತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಅವರ ಕುಟುಂಬಕ್ಕೆ ಧುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಪ್ರಭು ಕಡಿ, ಮಾಣಿಕ ದಂಡಾವತಿ,ಶ್ರೀ ಶೈಲ್ ದೊಡಮನಿ,ರಾಜು ಬಳ್ಳೊಳ್ಳಿ,ಆಶೋಕ ಚಿನಿವಾರ, ಪರಶುರಾಮ ನಾಲತವಾಡ,ಮಂಡಲ ಪ್ರ.ಕಾರ್ಯದರ್ಶಿ ಸಂಜು ಬಾಗೇವಾಡಿ, ಗೌರಮ್ಮ ಹುನಗುಂದ,ಸಂಗನಗೌಡ ಬಿರಾದಾರ, ಗುರು ಕಡಿ, ಶರಣು ಸಜ್ಜನ, ಮಹಾಂತೇಶ ಮಡಿವಾಳರ, ಶಂಕರ ಕಡಿ, ಶರಣು ಪಡದಾಳೆ,ಸೇರಿದಂತೆ ಉಪಸ್ಥಿತರಿದ್ದರು.