ಮುದ್ದೇಬಿಹಾಳ ;ರೈತನ ಜೀವನದ ಜೀವನಾಡಿಗಳಾಗಿರುವ ಹಸುಗಳು ಹಾಗೂ ಜಾನುವಾರುಗಳು ಹಾಸುಹೊಕ್ಕಿವೆ ಇವುಗಳು ಇಲ್ಲದೆ ರೈತನ ಜೀವನ ಸಾಗಿಸಲು ಸಾಧ್ಯವಿಲ್ಲವೆಂದು ಕೆ ಎಸ್ ಡಿ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹೇಳಿದರು ರವಿವಾರ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಹಡಲಗೇರಿ ವ್ಯಾಪ್ತಿಯಲ್ಲಿ ಬರುವ ಡಾ.ಓಸ್ವಾಲ್ ಲೈಔಟ್ ನಲ್ಲಿ ಸರಕಾರಿ ಸೌಲಭ್ಯ ನಿವೇಶನದಲ್ಲಿ ಆರ್ ಆರ್ ಡಿ ಎಫ್ ಟ್ರ್ಯಾಂಚ್ 30 ಅಡಿಯಲ್ಲಿ 49 ಲಕ್ಷ ರೂ ವೆಚ್ಚದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುದ್ದೇಬಿಹಾಳ ಪಟ್ಟಣದ ಪಶು ಆಸ್ಪತ್ರೆಯ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು . ಸಾವಯಕೃಷಿ ಪದ್ದತಿ, ಸಾವಯವ ಕೃಷಿ ಉತ್ಪನ್ನ ಬಳಕೆಯಿಂದ ಭೂಮಿ ಫಲವತ್ತತೆ ಆಗುತ್ತದೆ ಇದರಿಂದ ಶುದ್ದ ಪರಿಸರ ನಿರ್ಮಾಣವಾಗುತ್ತದೆ ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಶುಸಂಗೋಪನೆ ಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ ಎಂದರು .
ಪಶುಗಳಿಗೆ ಚಿಕಿತ್ಸೆ ನೀಡುವ ಪಶುವೈದ್ಯರ ಪಾತ್ರ ಮಹತ್ವದಾಗಿದೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪಶುಗಳಿಗೆ ಸಿಜನ್ ವಾರು ನೀಡುವ ಲಸಿಕೆಗಳ ಕುರಿತು ಮಾಹಿತಿ ನೀಡಿವುದರ ಜೊತೆಗೆ ಜಾನುವಾರುಗಳಿಗೆ ಲಸಿಕೆಯನ್ನು ನೀಡಬೇಕು ಎಂದು ಕಿವಿಮಾತನ್ನು ಹೇಳಿದರು.
ಪಶು ವೈದ್ಯಾಧಿಕಾರಿ ಶಿವಾನಂದ ಮೇಟಿ ಮಾತನಾಡಿ ಪಟ್ಟಣದಲ್ಲಿಯ ಪಶು ಆಸ್ಪತ್ರೆ ಸ್ಥಳ ಇಕ್ಕಾಟಾದ ಕಾರಣ ಹೊಸ ಆಸ್ಪತ್ರೆ ಕುರಿತು ಶಾಸಕರಿಗೆ ಬೇಡಿಕೆ ಇಟ್ಟಿದ್ದೇವು ಶಾಸಕರು ಮುತುವರ್ಜಿಯಿಂದ ಇಂದು ಮುದ್ದೇಬಿಹಾಳ ಹಾಗೂ ಢವಳಗಿ ಯಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಭೂಮಿ ಪೂಜೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ ಬಲರಾಮ ಕಟ್ಟಿಮನಿ,
ಹಡಲಗೇರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾಯಿ ಬಿರಾದಾರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಓಸ್ವಾಲ್ ಲೇಔಟ್ ಮಾಲಿಕ ಡಾ.ಓಸ್ವಾಲ್, ಮುದ್ದೇಬಿಹಾಳ ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸಿ ಎಲ್ ಬಿರಾದಾರ, ನಿರ್ದೇಶಕ ಸತೀಶ್ ಓಸ್ವಾಲ್, ಗಣೇಶ ಅನ್ನಗೌನಿ, ರಮೇಶ ಬಿರಾದಾರ, ಗುತ್ತಿಗೆದಾರ ಸುರೇಶಗೌಡ ಪಾಟೀಲ್, ಅರವಿಂದ ಹೋಗಾರ, ಮಾರುತಿ ನಲವಡೆ ಕೆ ಪಿ ಹಿರೇಮಠ, ರಾಜು ಹೊನ್ನುಟಗಿ, ಸಚಿನಗೌಡ ಪಾಟೀಲ್, ಸಿಕಂದರ್ ಜಾನ್ವೇಕರ, ಕಾಂತು ಚಲವಾದಿ, ಯಲ್ಲಪ್ಪ ಚಲವಾದಿ, ಪಶುವೈದ್ಯರಾದ ಎಸ್ ಎಸ್ ಬಿರಾದಾರ, ಡಾ.ಚನ್ನೂರ ಡಾ.ಶ್ರೀನಿನಾಥ ಹೂಗಾರ, ಸಿಬ್ಬಂದಿಗಳಾದ ಎಸ್ ಎನ್ ಬಿರಾದಾರ, ಮಾಲತಿ ಹಿರೇಗೌಡರ, ವಿ ಜಿ ಬಿರಾದಾರ, ಹೆಚ್ ಎಸ್ ಸೀತಿಮನಿ, ಶ್ರೀಕಾಂತ್ ಗೌಡರ, ಸಂದೀಪ ಇಂದವಾರ, ಮಲ್ಲಯ್ಯ ಹಿರೇಮಠ ಹಾಗೂ ಪಶು ಸಖಿಯರು ಭಾಗವಹಿಸಿದ್ದರು. ಡಾ. ಬಸವರಾಜ ಸಜ್ಜನ ನಿರೂಪಿಸಿ ವಂದಿಸಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಹಡಲಗೇರಿ ವ್ಯಾಪ್ತಿಯಲ್ಲಿ ಬರುವ ಡಾ.ಓಸ್ವಾಲ್ ಲೈಔಟ್ ನಲ್ಲಿ ಸರಕಾರಿ ಸೌಲಭ್ಯ ನಿವೇಶನದಲ್ಲಿ ಆರ್ ಆರ್ ಡಿ ಎಫ್ ಟ್ರ್ಯಾಂಚ್ 30 ಅಡಿಯಲ್ಲಿ 49 ಲಕ್ಷ ರೂ ವೆಚ್ಚದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುದ್ದೇಬಿಹಾಳ ಪಟ್ಟಣದ ಪಶು ಆಸ್ಪತ್ರೆಯ ಭೂಮಿ ಪೂಜೆಗೆ ಕೆಎಸ್ ಡಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ನೇರವೇರಿಸಿ ಅವರು ಮಾತನಾಡಿದರು.