ಕ್ರೀಡೆಯಿಂದ ಸದೃಡ ಭಾರತ ಕಟ್ಟಲು ಸಾಧ್ಯ : ಸಿಪಿಐ ಎಮ್ ಎಮ್ ಡಪ್ಪಿನ
ಇಂಡಿ: ಕ್ರೀಡೆ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಿಂದ ಸದೃಡ ಆರೋಗ್ಯ, ಸದೃಡ ಬದುಕು, ಸದೃಡ ದೇಶ ಹಾಗೂ ದೇಶದ ಕೀರ್ತಿ ಪ್ರಪಂಚದಲ್ಲಿ ಹೆಚ್ಚಿಸಬಹುದು ಎಂದು ಗ್ರಾಮೀಣ ಠಾಣಾ ಸಿಪಿಐ ಎಮ್ ಎಮ್ ಡಪ್ಪಿನ ಹೇಳಿದರು.
ಬುಧವಾರ ಪಟ್ಟಣದ ಎಕ್ಸಲೆಂಟ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕರು ಹಾಗೂ ಪಾಲಕರು ‘ಮಕ್ಕಳ ಆಸಕ್ತಿ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ’ ಎಂದು ಶುಭ ಹಾರೈಸಿದರು.
ಇಂದಿನ ಯುವಜನಾಂಗ ಕ್ರೀಡೆಗೆ ಹೆಚ್ಚಿನ ಒತ್ತು ನೀಡದೆ ಕೈಯಲ್ಲಿ ಮೋಬಾಯಿಲ್ ಹಿಡಿದುಕೊಂಡು ಅದನ್ನು ನೋಡುತ್ತ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಹಿಂದಿನಂತೆ ಎಲ್ಲರೂ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಅಂದಾಗ ಮಾತ್ರ ನಿಮ್ಮ ಶಾರೀರಿಕ ಮಾನಸಿಕ ಜೀವನ ಉತ್ತಮವಾಗಿರಲು ಸಾಧ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ. ಕೆಂಭೋಗಿ, ದ.ಶಿ. ಸಂಗನಗೌಡ ಹಚಡದ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಯಲಗೊಂಡ ಬೇವನೂರ, ಹೆಚ್.ಎಂ. ಬೀಳವಾರ, ತುಕಾರಾಮ ಹೊಸಮನಿ, ಪ್ರಕಾಶ ಐರೊಡಗಿ ಮಂಜುನಾಥ ನಾಯ್ಕೋಡಿ, ಸಂಗನಗೌಡ ಹಚಡದ, ಮೋಹನ್ ರಾಠೋಡ, ದ.ಹಿ. ಶಿಕ್ಷಕ ದಶರಥ ಕೋರಿ, ಶಂಕರಲಿಂಗ ಜಮಾದಾರ, ಶ್ರೀಶೈಲ ಹೂಗಾರ, ಮಹಾಂತೇಶ ಪಾಟೀಲ, ಶೋಭಾ ಸಾರವಾಡ ಇದ್ದರು.
ಶೋಭಾ ಸಾರವಾಡ ನಿರೂಪಿಸಿ ವಂದಿಸಿದರು.
ಇಂಡಿ: ಪಟ್ಟಣದ ಎಕ್ಸಲೆಂಟ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ ಮಾತನಾಡಿದರು.
