ಕಪ್ಪು ಪಟ್ಟಿ ಕಟ್ಟಿ ದೈಹಿಕ ಶಿಕ್ಷಕರ ಪ್ರತಿಭಟನೆ..!
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹಶಿಕ್ಷಕರನ್ನಾಗಿ ಪರಿಗಣಿಸಬೇಕು..!
ಬೇಡಿಕೆಗಳು ಈಡೇರುವವರಗೇ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆಯೊಂದಿಗೆ ಕ್ರೀಡಾಕೂಟನ್ನು ನಡೆಸಲಾಯಿತು.
ಮುದ್ದೇಬಿಹಾಳ : ತಾಲೂಕಿನ ಪ್ರಾಥಮಿಕ ಶಾಲೆಗಳ ಉತ್ತರ ವಲಯದ ಕ್ರೀಡಾಕೂಟವನ್ನು ಸ್ಥಳೀಯ ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ಶಾಂತಲಾ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ಜರುಗಿದವು .
ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹಶಿಕ್ಷಕರನ್ನಾಗಿ ಪರಿಗಣಿಸಬೇಕು , ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳಾದ ಮುಖ್ಯ ಶಿಕ್ಷಕರಾಗಿ ಬಡ್ತಿ , ಸಿ ಅಂಡ್ ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಿ.ಆರ್.ಪಿ , ಬಿ.ಆರ್ .ಪಿ, ಹುದ್ದೆಗಳನ್ನು ನೀಡುವುದು, ಹಲವಾರು ಬೇಡಿಕೆಗಳೆ ಈಡೇರಿಗಾಗಿ ಈ ಮೊದಲು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡಲಾಗಿದ್ದು ,ಬೇಡಿಕೆಗಳು ಈಡೇರುವವರಗೇ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆಯೊಂದಿಗೆ ಕ್ರೀಡಾಕೂಟನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಶೇಖರ್ ಲಮಾಣಿ , ಗೌರವ ಅಧ್ಯಕ್ಷರಾದ ಚಂದ್ರಕಾಂತ್ ಮನಗೂಳಿ , ಖಜಾಂಚಿಗಳಾದ ಗುರು ಸಾಲಿಮಠ , ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ, ಬಸವರಾಜ್ ಭಜಂತ್ರಿ ಶರಣು ಇದ್ದಲಗಿ, ಬಸವರಾಜ್ ರಾಮೋಡಗಿ, ನಾಗರಾಜ ಮುದ್ಗಲ್, ಬಿ.ಎಸ್.ಪಣದಕಟ್ಟಿ, ಬಿ.ಜಿ.ತಾಳಿಕೋಟಿ ಎಸ್ .ಕೆ .ಬಿರಾದಾರ, ಆರ್ .ವೈ .ಪಾಟೀಲ್ , ಸಾಗರ ಜಾದವ, ರಾಮನಗೌಡ ಬಿರಾದಾರ, ಯಮನೂರಿ ಹರಿಜನ, ಎಸ್.ಎ. ಗಂಗನಗೌಡ, ಐ ಎಂ ಕೆಂಭಾವಿ , ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,
ಈ ವೇಳೆ ಸಂದರ್ಭದಲ್ಲಿ ವೇದಿಕೆ ಮೇಲೆ ಯು.ಬಿ.ಧರಿಕಾರ್ ಕ್ಷೇತ್ರ ಸಮನ್ವಯ ಅಧಿಕಾರಿಗಳು, ಸಂಸ್ಥೆಯ ಸದಸ್ಯರನ್ನು ಬಸವರಾಜ ಕೋರಿ, ಮುಖ್ಯ ಗುರುಮಾತೆಯರು ಆರ್.ಡಿ.ಬಿರಾದಾರ, ಮುಖ್ಯ ಗುರುಗಳಾದ ಎಸ್ ಮ್ಎಸ್ .ಆಳ್ವಿ, ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಸ್ .ಕೆ .ಹರನಾಳ, ಶೋಭಾ ಬಲಕುಂದಿ, ಸಿ ಆರ್ ಸಿ ಗುಂಡು ಚೌಹಾನ್, ಮುಖಗಳಾದಂತ ಪ್ರೌಢಶಾಲೆಯ ಮುಖ್ಯಗುರುಳಾದ ಎ ಆರ್ ಪಾಟೀಲ್, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳು ಈರಣ್ಣ ಬಿಜ್ಜುರು, ಶಾಲೆಯ ಎಲ್ಲಾ ಶಿಕ್ಷಕ , ಸಿಬ್ಬಂದಿ ವರ್ಗ, ಶಾಲೆಗಳಿಂದ ಆಗಮಿಸಿರುವ ಎಲ್ಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.