ಅಂಬಾಭವಾನಿ ದೇವಸ್ಥಾನದಲ್ಲಿ ಚಂಡಿಹೋಮ..
ಇಂಡಿ : ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸದ ನಿಮಿತ್ಯ ಚಂಡಿ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಾಣಗಾಪೂರದ ಅರ್ಚಕರಾದ ವಿಶ್ವೇಶ್ವರ ಭಟ್, ಸರ್ವೇಶ,ಸುದೀಪ, ಋಷಿ ಭಟ್ ಚಂಡಿಹೋಮ ಕಾರ್ಯಕ್ರಮ ನಡೆಸಿ ಕೊಟ್ಟರು.
ಇಂಡಿಯ ಅರ್ಚಕರಾದ ಶಿವಾನಂದ ಪೂಜಾರಿ, ಶಾಂತು
ಪೂಜಾರಿ,ಬಸವರಾಜ ವಳಸಂಗ ಮತ್ತು ಸವಿತಾ ಬಸವರಾಜ ದಂಪತಿಗಳು ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ ಕೋಳೆಕರ ಮಾತನಾಡಿ ಮಳೆ,ಬೆಳೆಗಾಗಿ ಮತ್ತು
ಎಲ್ಲರ ಒಳ್ಳೆಯ ಆರೋಗ್ಯಕ್ಕೆ ಚಂಡಿಹೋಮ
ನಡೆಸಲಾಗಿದೆ ಎಂದರು.
ಗಣೇಶ ಮಹೀಂದ್ರಕರ, ಬಾಳು ಕಠಾರೆ, ಬಾಪು
ಮಹೀಂದ್ರಕರ, ಸುಭಾಸ ಬಳಮಕರ,ನಾಗನಾಥ
ಹಂಚಾಟೆ, ಮನೋಜ ಕೋಳೆಕರ, ಬಾಬುರಾವ
ಸುಲಾಖೆ, ವಿಜಯ ಪತಂಗೆ, ಉಮಾಕಾಂತ
ಕೋಳೆಕರ ಸೇರಿದಂತೆ ಶಿವಾನಂದ ಕೊಪ್ಪದ, ಕಿರಣ
ಬಳಮಕರ,ಕಿರಣ ಕೋಳೆಕರ, ವಿನೋದ
ಮಹೀಂದ್ರಕರ, ಮಹೇಶ ಕಾಂಬಳೆ, ಅಮರ
ಪತಂಗೆ ಮತ್ತಿತರಿದ್ದರು.