ಇಂಡಿ :ತಳವಾರ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಸ್ಥಳೀಯ ಜನಪ್ರತಿ ನಿಧಿಗಳು, ರಾಜಕೀಯ ಪಕ್ಷಗಳು ಹಾಗೂ ಸರಕಾರ ಎಡುವುತ್ತಿವೆ. ಕಳೆದ 4 ವರ್ಷದ ಹಿಂದೆ ರಾಜ್ಯ ಮತ್ತು ಕೇಂದ್ರ ಸರಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿದ್ದು, ಇಲ್ಲಿಯವರೆಗೆ ಯಾವ ಕ್ಷೇತ್ರದಲ್ಲೂ ಆ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಅದಕ್ಕೆ ನೇರ ಕಾರಣ ಜನಪ್ರತಿನಿಧಿಗಳು ಎಂದು ದೇವರ ಹಿಪ್ಪರಗಿ ತಾಲೂಕು ತಳವಾರ ಸಮಾಜದ ಅಧ್ಯಕ್ಷ ರಾಜು ಮೇಟಗಾರ ಆಕ್ರೋಶ ವ್ಯಕ್ತಪಡಿಸಿದರು.
ರವಿವಾರ ಪಟ್ಟಣದ ಕಾಳಿಕಾದೇವಿ ಮಂಗಲ ಕಾರ್ಯಾಲಯದಲ್ಲಿ ತಳವಾರ ಸಮಾಜದ ಯುವಶಕ್ತಿ ಏರ್ಪಡಿಸಿದ ಗೌಪ್ಯ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.
ಸಮಾಜ ಮುಖ್ಯವಾಹಿನಿಯಲ್ಲಿ ಕಾಣಬೇಕಾದರೆ ಶಿಕ್ಷಣ, ಸಂಘಟನೆ, ಹೋರಾಟ ಮುಖ್ಯ. ಸಮುದಾಯದಲ್ಲಿರುವ ಆಂತರಿಕ ಸಂಘರ್ಷ, ದ್ವೇಷ, ಅಸೂಹೆ, ಸ್ವಾರ್ಥ, ಅಹಂ ವನ್ನು ಸಮಾಜದ ಹಿತದೃಷ್ಟಿಯಿಂದ ತ್ಯಾಗ ಮಾಡಿ ಒಕ್ಕೊರಲಿನ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ಇನ್ನೂ ಇದೆ ಸಂದರ್ಭದಲ್ಲಿ ಸಮಾಜದ ಮುಖಂಡ ಹಾಗೂ ತಾ.ಪಂ ಮಾಜಿ ಸದಸ್ಯ ಸಿದ್ದರಾಮ ತಳವಾರ ಮಾತಾನಾಡಿದ ಅವರು, ತಳವಾರ ಸಮಾಜಕ್ಕೆ ತನ್ನದೆಯಾದ ಇತಿಹಾಸ ಪರಂಪರೆ ಇದೆ. ಈ ನಾಡು ಕಟ್ಟುವಲ್ಲಿ ಹಾಗೂ ನಾಡಿನ ಶ್ರಯೋಭಿವೃದ್ಧಿಯಲ್ಲಿ ತಳವಾರ ಸಮಾಜದ ಪಾತ್ರ ಬಹಳವಿದೆ, ಅದನ್ನು ಮರೆಯುವಂತಿಲ್ಲ. ಪ್ರಸ್ತುತ್ ಜಿಲ್ಲೆಯಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಮತದಾರರು ಇರುವ ನಮ್ಮ ಸಮುದಾಯಕ್ಕೆ ರಾಜಕೀಯ ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತಿದೆ. ಯಾವ ಪಕ್ಷದಲ್ಲಿ ಸೂಕ್ತವಾದ ಸ್ಥಾನಮಾನ ದೊರೆಯುತ್ತಿಲ್ಲ. ಅದಕ್ಕೆ ಬರುವ ದಿನಮಾನಗಳಲ್ಲಿ ತಳವಾರ್ ಸಮಾಜ ಒಳ್ಳೆಯ ಉತ್ತರ ಕೊಡಲಿಕ್ಕೆ ಯುವಶಕ್ತಿ ಸಿದ್ದರಾಗಿರಬೇಕು ಎಂದು ಹೇಳಿದರು.
ಇನ್ನೂ ವಿಶೇಷವಾಗಿ ತಳವಾರ ಸಮಾಜದ ಇತಿಹಾಸ ಪರಂಪರೆ ಬೆಳವಣೆಗೆ, ತಳವಾರ ಸಮಾಜ ಎದುರುಸುತ್ತೀರುವ ಸವಾಲುಗಳು, ತಳವಾರ. ಸಮಾಜದ ರಾಜಕೀಯ ಚಿಂತನೆಗಳು, ಸೋಷಿಯಲ್ ಮಿಡಿಯಾದಲ್ಲಿ ಸಮಾಜದ ಬಗ್ಗೆ ತಪ್ಪು ಮಾಹಿತಿ ಹಂಚಿಕೆಯಾಗುತ್ತೀರುವ ಹಾಗೂ ಸರಕಾರಿ ಸೌಲಭ್ಯ ಮತ್ತು ಮೀಸಲಾತಿ ಕುರಿತು ಎಸ್, ಬಿ ಕೆಂಬೋಗಿ, ಆನಂದ ಗೊರಗುಂಡಗಿ, ನಾಗರಾಜ ಕೌಲಗಿ, ಅಂಬಣ್ಣ ನಾಯಕೋಡಿ ಸೇರಿದಂತೆ ಅನೇಕ ಯುವ ಮುಖಂಡರು ಮಾತನಾಡಿದರು.
ಟಿ ಎಸ್ ಎಸ್ ಅಧ್ಯಕ್ಷ ಸೋಮು ಜಮಾದಾರ, ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ರೇವಣ್ಣ ಹತ್ತಳ್ಳಿ, ಸುರೇಶ ತಳವಾರ, ಶಿವಾನಂದ ಬಮ್ಮನಹಳ್ಳಿ, ಸುನೀಲ ವಾಲಿಕಾರ, ಚಂದ್ರು ತಳವಾರ, ರವಿ ರಾಯಜಿ, ಸಾಯಬಣ್ಣ ತಳವಾರ, ಶ್ರೀಶೈಲ ತಳವಾರ, ಧರ್ಮರಾಜ ತಳವಾರ, ರಾಜು ತಳವಾರ,ಸುರೇಶ್ ತಳವಾರ, ಮಹೇಶ್ ಅರ್ಜನಾಳ, ಚಂದು ದೌಲಿ, ರಾಜು ರೋಡಗಿ ಅಲಮೇಲ, ಮಂಜು ವಾಲಿಕಾರ ಅಲಮೇಲ, ಸಿದ್ದರಾಮ ನಾಟೀಕಾರ, ರಮೇಶ್ ದಳವಾಯಿ, ಜಟ್ಟಪ್ಪ ಬಳೂರಗಿ, ಬಸು ದಳವಾಯಿ, ಆನಂದ ತಳವಾರ, ಸದಣ್ಣಾ ಗುಡ್ಡೆವಾಡಿ, ಬಸವರಾಜ ಪಡನೂರ, ಮಂಜು ಜಮಾದಾರ, ಶಿವಮೂರ್ತಿ ಕಕ್ಕಳಮೇಲಿ ಶಿವಾನಂದ ವಾಲಿಕಾರ,ಸಂತು ಸುಲಾಪುರ, ಅಜಯ್ ವಾಲಿಕಾರ ರಮೇಶ್ ಜಮಾದಾರ, ಮಹೇಶ್ ಚಂದಕೋಟೆ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.