ಮುರಮ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರೆವೆರಿಸಿದ ಸಂಸದ ರಮೇಶ್ ಜಿಗಜಿಣಿಗಿ
ಇಂಡಿ: ನಾನು ಪ್ರಚಾರಪ್ರೀಯನಲ್ಲ. ಸದ್ದಿಲ್ಲದೆ ಅಭಿವೃಧ್ಧಿ ಕೆಲಸ ಮಾಡಿ ಮುಗಿಸಿ ತೃಪ್ತಿಪಡುವುದು ನನ್ನ ಸ್ವಭಾವವಾಗಿದೆ. ಕಳೆದ ೧೦ ವರ್ಷಗಳಲ್ಲಿ ವಿಜಯಪೂರ ಜಿಲ್ಲೆಯ ಅಭಿವೃದ್ಧಿಗಾಗಿ ೧ ಲಕ್ಷ ೧೦ ಸಾವಿರ ಕೋಟಿ ರೂ, ಗಳ ಅನುದಾನ ತಂದಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಸೋಮವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ೯೮೪ ಕೋಟಿ ರೂ, ಗಳ ೫೪೮-ಬಿ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನನ್ನ ೫೦ ವರ್ಷಗಳ ರಾಜಕೀಯ ಜೀವನಕ್ಕೆ ಇಂಡಿ ಜನತೆ ಜೀವ ತುಂಬಿದ್ದಾರೆ. ಅವರ ಋಣ ಮುಟ್ಟಿಸುವದಕ್ಕಾಗಿ ನನ್ನ ಜೀವ ಒತ್ತೇ ಇಟ್ಟು ಕೆಲಸ ಮಾಡುತ್ತಿದ್ದೇನೆ. ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ರೈತರಿಗಾಗಿ ದೇವೇಗೌಡರ ಕಾಲು ಹಿಡಿದು ೬೪೦೦೦ ಕೋಟಿ ರೂ, ಗಳ ಅನುದಾನ ಬಿಡುಗಡೆ ಮಾಡಿಸಿ, ಇಂಡಿ ಬ್ಯ್ರಾಂಚ್ ಕ್ಯಾನಲ್ ಮಾಡಿಸಿದ್ದೇನೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಅವರ ಮೂಲಕ ವಿಜಯಪೂರ ಜಿಲ್ಲೆಯ ಕೂಡಗಿ ಗ್ರಾಮದಲ್ಲಿ ೪೨೦೦೦ ಕೋಟಿ ರೂ, ಗಳ ವೆಚ್ಚದ ಎನ್ಟಿಪಿಸಿ ಮಾಡಿಸಿದ್ದೇನೆ. ಇದರಿಂದಲೇ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮಾಡುವ ಲಿಪ್ಟ್ ಇರಿಗೇಶನ್ ನಡೆಯುತ್ತವೆ. ಇಲ್ಲದಿದ್ದರೆ ಅವುಗಳಿಗೆ ವಿದ್ಯುತ್ ಸರಬರಾಜು ಆಗುತ್ತಿರಲಿಲ್ಲ ಎಂದರು.
ಇತ್ತೀಚೆಗೆ ಇಂಡಿ ಮತ್ತು ಚಡಚಣ ತಾಲ್ಲೂಕುಗಳ ಸಂಪೂರ್ಣ ನೀರಾವರಿಗಾಗಿಯೇ ರೇವಣಸಿದ್ದೇಶ್ವರ ನೀರಾವರಿ ಯೋಜನೆಗೆ ೩೦೦೦ ಕೋಟಿ ರೂ, ಗಳ ಅನುದಾನಕ್ಕೆ ಮಂಜೂರಾತಿ ನೀಡಿಸಿದ್ದಲ್ಲದೇ ಇಂಡಿ ತಾಲ್ಲೂಕಿನ ೧೯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಒದಗಿಸಲು ಕಾರಣ Ãಕರ್ತನಾಗಿದ್ದೇನೆ. ಇದಲ್ಲದೇ ಇಂಡಿ ಕಾಲುವೆಯ ರಿಪೇರಿಗಾಗಿ ೨೭೦೦ ಕೋಟಿ ರೂ, ಗಳ ಅನುದಾನಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಇಷ್ಟರಲ್ಲಿಯೇ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗಳಿಗಾಗಿಯೇ ಕಳೆದ ೧೦ ವರ್ಷಗಳಲ್ಲಿ ೩೫೧೬ ಕೋಟಿ ರೂ, ಗಳ ಅನುದಾನ ತಂದಿದ್ದೇನೆ. ಇದರಲ್ಲಿ ೬ ನ್ಯಾಶನಲ್ ಹೆದ್ದಾರಿಗಳು, ೪ ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಂಡಿವೆ ಎಂದರು. ಇವತ್ತು ಭೂಮಿ ಪೂಜೆ ನಡೆಸಿರುವ ಹೆದ್ದಾರಿ ಮೊದಲು ಮುರುಮ ಪಟ್ಟಣದಿಂದ ಇಂಡಿ ತಾಲ್ಲೂಕಿನ ಝಳಕಿ ಗ್ರಾಮಕ್ಕೆ ಕೂಡಿಸಲಾಗಿತ್ತು. ಅದನ್ನು ಸಚಿವ ನಿತಿನ್ ಗಡಕರಿ ಅವರ ಹತ್ತಿರ ಹೋಗಿ ಮುರುಮ ಪಟ್ಟಣದಿಂದ ಮಾಶ್ಯಾಳ, ಇಂಡಿ, ಅಥರ್ಗಾ, ನಾಗಠಾಣ, ವಿಜಯಪೂರ ಪಟ್ಟಣಕ್ಕೆ ತಂದು ಕೂಡಿಸಲು ಮನವಿ ಮಾಡಿ ಅದನ್ನು ಪರಿವರ್ತಿಸಲಾಗಿದೆ. ಇದಕ್ಕೆ ೯೮೪ ಕೋಟಿ ರೂ, ಗಳ ಅನುದಾನದ ಸುಮಾರು ೧೦೨ ಕಿಲೋ ಮೀಟರ್ ಉದ್ದದ ಹೆದ್ದಾರಿ ಕರ್ಯ ಇಷ್ಟರಲ್ಲಿಯೇ ಕರ್ಯ ಪ್ರಾರಂಭಿಸಲಾಗುವದು ಎಂದರು. ಇದರಲ್ಲಿ ೧೦ ಸೇತುವೆಗಳು ಬರಲಿದ್ದು, ಎಲ್ಲಾ ಕಾರ್ಯಗಳನ್ನು ಬೇಗನೇ ಮುಗಿಸಲು ಸೂಚನೆ ನೀಡಲಾಗಿz ಎಂದರು.
ತಾಲ್ಲೂಕಿನ ಇಂಚಗೇರಿ, ನಿಂಬಾಳ ಗುಡ್ಡಗಳಲ್ಲಿ ನೀರು ಸಂಗ್ರಹಿಸಿ, ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವಂತೆ ಕ್ರಮ ಜರುಗಿಸಲಾಗಿದೆ. ೧೨೦ ಕೋಟಿ ಅನುದಾನದಲ್ಲಿ ೭೬ ಗ್ರಾಮಗಳಿಗೆ ಶುದ್ದ ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ ಮಾಡಲಾಗಿದೆ. ಕೆಲಸ ಭರದಿಂದ ಸಾಗಿದೆ. ಭೀಮಾ ನದಿಯ ದಂಡೆಗೆ ಇರುವ ಗ್ರಾಮಗಳಿಗೂ ಕೂಡಾ ಕೃಷ್ಣಾ ಮೇಲ್ದಂಡೆ ಯೋಜನೆಯ ಜಲಧಾರೆ ಯೋಜನೆಯಿಂದ ಕುಡಿಯುವ ನೀರು ಒದಗಿಸಲಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಮಾಡಿದರೂ ಕೂಡಾ ಯಾವದೇ ಕೆಲಸಕ್ಕೆ ಭೂಮಿ ಪೂಜೆಯಾಗಲಿ, ಉದ್ಘಾಟನೆಯಾಗಲಿ ಮಾಡಲು ಹೋಗಿಲ್ಲ. ಪ್ರಚಾರಕ್ಕಾಗಿ ನಾನು ಕೆಲಸ ಮಾಡುತ್ತಿಲ್ಲ. ಜನತೆ ನನಗೆ ಆಶಿರ್ವಾದ ಮಾಡುತ್ತ ಬಂದಿದ್ದಾರೆ. ಅವರ ಋಣ ತೀರಿಸಲು ಕೆಲಸ ಮಾಡುತ್ತೇನೆ. ಮುಂದಿನ ಸಲವೂ ಕೂಡಾ ಜನ ಬಯಸಿದರೆ ನಾನು ಸಂಸದ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಸುಳಿವು ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಮಾಜಿ ಶಾಸಕ ರಮೇಶ ಬೂಸನೂರ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ಡಿ .ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ ಮಾತನಾಡಿ, ಇಂಡಿ ಪಟ್ಟಣದಲ್ಲಿ ನಿಂಬೆ ಫ್ಯಾಕ್ಟರಿ ಮಾಡಬೇಕು ಮತ್ತು ಗಾಣಗಾಪೂರ-ಶಿರಾಡೋಣ ರಸ್ತೆಗೆ ಮಂಜೂರಾತಿ ನೀಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಪ್ರಮುಖರಾದ ಶ್ರೀಪತಿಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣ , ಅಣ್ಣಪ್ಪ ಖೈನೂರ, ಸಂಜೀವ ಐಹೊಳೆ, ಬಿ.ಎಸ್. ಪಾಟೀಲ, ಶ್ರೀಶೈಲಗೌಡ ಬಿರಾದಾರ, ವಿವೇಕ ಡಬ್ಬಿ, ಉಮೇಶ ಕೋಳಕೂರ, ದೇವೇಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಅನೀಲ ಜಮಾದಾರ, ಶರಣಗೌಡ ಬಂಡಿ, ಶ್ರೀಶೈಲಗೌಡ ಬಿರಾದಾರ, ವಿರಾಜ ಪಾಟೀಲ, ಎಸ್.ಜೆ. ವಾಲೀಕಾರ, ನಾಗುಗೌಡ ಪಾಟೀಲ (ಅಥರ್ಗಾ), ಪ್ರಕಾಶ ಹಿಟ್ನಳ್ಳಿ, ರವಿ ವಗ್ಗೆ, ರಾಘವೇಂದ್ರ ಕಾಪಸೆ, ಸಂಜು ದಶವಂತ, ಶಾಂತು ಕಂಬಾರ ಸೇರಿದಂತೆ ಇನ್ನಿತರರು ಇದ್ದರು. ದೇವೇಂದ್ರ ಕುಂಬಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಕಿವುಡೆ ವಂದಿಸಿದರು.
ಇಂಡಿ: ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮುರು-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭ ಉದ್ಘಾಟಿಸಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.
ಇಂಡಿ: ಪಟ್ಟಣದ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಮುರು-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ಸಮಾರಂಭವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು.