• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಈಶ್ವರಿಯ ವಿವಿಯಲ್ಲಿ ದೀಪಾವಳಿ

    ಈಶ್ವರಿಯ ವಿವಿಯಲ್ಲಿ ದೀಪಾವಳಿ

    ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

    ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

    ಮಕ್ಕಳಲ್ಲಿ ಸಂಸ್ಕಾರದ ಕೊರತೆ: ಶಾಂತಮಯ ಶ್ರೀ

    ಮಕ್ಕಳಲ್ಲಿ ಸಂಸ್ಕಾರದ ಕೊರತೆ: ಶಾಂತಮಯ ಶ್ರೀ

    ರಾಣಿ ಚನ್ನಮ್ಮಳ ಜೀವನವು ಧೈರ್ಯ, ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ

    ರಾಣಿ ಚನ್ನಮ್ಮಳ ಜೀವನವು ಧೈರ್ಯ, ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ

    ಕನ್ನಡ ನಾಮಫಲಕ ಜಾಗೃತಿ ಅಭಿಯಾನ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ

    ಕನ್ನಡ ನಾಮಫಲಕ ಜಾಗೃತಿ ಅಭಿಯಾನ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ

    ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸ, ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ

    ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸ, ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ

    ಅ.27 – ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆ

    ಅ.27 – ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆ

    ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಅರ್ಜಿ ಆಹ್ವಾನ

    ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಅರ್ಜಿ ಆಹ್ವಾನ

    ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ

    ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ

    ಹಿಂದೂಸ್ತಾನಿ ಸಂಗೀತ ಕಲಾವಿದ ಜಹಗೀರದಾರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ

    ಹಿಂದೂಸ್ತಾನಿ ಸಂಗೀತ ಕಲಾವಿದ ಜಹಗೀರದಾರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಈಶ್ವರಿಯ ವಿವಿಯಲ್ಲಿ ದೀಪಾವಳಿ

      ಈಶ್ವರಿಯ ವಿವಿಯಲ್ಲಿ ದೀಪಾವಳಿ

      ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

      ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

      ಮಕ್ಕಳಲ್ಲಿ ಸಂಸ್ಕಾರದ ಕೊರತೆ: ಶಾಂತಮಯ ಶ್ರೀ

      ಮಕ್ಕಳಲ್ಲಿ ಸಂಸ್ಕಾರದ ಕೊರತೆ: ಶಾಂತಮಯ ಶ್ರೀ

      ರಾಣಿ ಚನ್ನಮ್ಮಳ ಜೀವನವು ಧೈರ್ಯ, ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ

      ರಾಣಿ ಚನ್ನಮ್ಮಳ ಜೀವನವು ಧೈರ್ಯ, ದೇಶಭಕ್ತಿಯ ಪ್ರತೀಕ-ಸಂತೋಷ ಬಂಡೆ

      ಕನ್ನಡ ನಾಮಫಲಕ ಜಾಗೃತಿ ಅಭಿಯಾನ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ

      ಕನ್ನಡ ನಾಮಫಲಕ ಜಾಗೃತಿ ಅಭಿಯಾನ : ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚನೆ

      ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸ, ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ

      ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸ, ಶೌರ್ಯ ನಮ್ಮೆಲ್ಲರಿಗೂ ಪ್ರೇರಣೆ

      ಅ.27 – ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆ

      ಅ.27 – ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಫರ್ಧೆ

      ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಅರ್ಜಿ ಆಹ್ವಾನ

      ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ : ಅರ್ಜಿ ಆಹ್ವಾನ

      ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ

      ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಜಯಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ

      ಹಿಂದೂಸ್ತಾನಿ ಸಂಗೀತ ಕಲಾವಿದ ಜಹಗೀರದಾರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ

      ಹಿಂದೂಸ್ತಾನಿ ಸಂಗೀತ ಕಲಾವಿದ ಜಹಗೀರದಾರ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಸಂತಾಪ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸಂಪಾದಕೀಯ

      ಇಂಡಿಯ ಪ್ರಖ್ಯಾತ ನಟನಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! ಅದು ಯಾರು ಗೊತ್ತಾ..?

      ಪ್ರಪಂಚದ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!

      April 13, 2024
      0
      ಇಂಡಿಯ ಪ್ರಖ್ಯಾತ ನಟನಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! ಅದು ಯಾರು ಗೊತ್ತಾ..?
      0
      SHARES
      1.3k
      VIEWS
      Share on FacebookShare on TwitterShare on whatsappShare on telegramShare on Mail

      ಇಂಡಿಯ ಪ್ರಸಿದ್ಧ ನಟ ದಾದಾ‌ ಸಾಹೇಬ ಪಾಲ್ಕೆ ಪ್ರಶಸ್ತಿ ಪಡೆದಿದ್ದರು..!

      ಪ್ರಪಂಚದ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!

      ಇಂಡಿಯ ಪ್ರಖ್ಯಾತ ನಟ-ನಿರ್ದೇಶಕ- ನಿರ್ಮಾಪಕನಿಗೆ ದೊರೆತ್ತಿದ್ದು ದಾದಾ‌ ಸಾಹೇಬ ಪಾಲ್ಕೆ ಪ್ರಶಸ್ತಿ ಹಾಗೂ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!

      ಯಾರು ಗೊತ್ತಾ..!

      ಇಂಡಿ : ಭಾರತೀಯ ಚಲನ ಚಿತ್ರ ರಂಗದ ಪ್ರಖ್ಯಾತ ನಟ-ನಿರ್ದೇಶಕ – ನಿರ್ಮಾಪಕ ಕ್ರೀಯೆಟಿವ್ ಜೀನಿಯಸ್, ‘ ಮಾನುಷ ‘ ಚಲನ ಚಿತ್ರಕ್ಕೆ ಪ್ರಪಂಚದ ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್ ರಿಂದ ಪ್ರಶಂಸೆಗೊಳಪಟ್ಟಿದ್ದರು. ಜೀವನದಲ್ಲಿ ಸಾಧನೆಯ ಒಂದೊಂದು ಮೆಟ್ಟಿಲುಗಳನ್ನು ಯಶಸ್ವಿಯಾಗಿ ಮೇಲೇರಿದ ಶಾಂತಾರಾಮರಿಗೆ ಪದ್ಮವಿಭೂಷಣ ಪ್ರಶಸ್ತಿ ಮತ್ತು ಸಿನೆಮಾ ರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ದೊರಕಿದ್ದವು.

      ಭಾರತದ ಸಿನೆಮಾ ಕ್ಷೇತ್ರದಲ್ಲಿ ದಿಗ್ವೀಜಯ ಸಾಧಿಸಿದ ಶಾಂತಾರಾಮ ಒಣಕುದುರೆ ಇವರು ಕನ್ನಡಿಗರು ಎಂಬುವದು ಹೆಮ್ಮೆಯ ಸಂಗತಿ.‌ ಇವರ ಮನೆತನದ ಅಡ್ಡ ಹೆಸರು ಒಣಕುದುರೆ ಪದ ಸೂಚಿಸುವಂತೆ ಇದು ಅಪ್ಪಟ ಕನ್ನಡದ ಪದ ಎನ್ನುವದು ತಿಳಿದ ವಿಷಯವಾಗಿದೆ.ವ್ಹಿ ಶಾಂತಾರಾಮರ ಕನ್ನಡ (ಇಂಡಿಯ ಜೈನ ) ನಂಟುಗಳ ಬಗ್ಗೆ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲಿದಾಗ ಅವರ ಮೂಲ ನೆಲೆ ಇಂಡಿ ಎನ್ನುವುದು ಅತ್ಯಂತ ಆಶ್ಚರ್ಯಕರ ಸಂಗತಿಯಾಗಿ ಕಾಣುತ್ತದೆ.

      ರಾಜಾರಾಮ ಕಮಲಾಬಾಯಿ ಒಣಕುದುರೆ ದಂಪತಿಗಳ ಮಗನಾಗಿ 1901ರಲ್ಲಿ ಜನಿಸಿದ ಶಾಂತಾರಾಮ ಒಣಕುದರೆ ಇಂಡಿ ತಾಲೂಕಿನ ಹಲಸಂಗಿಯಿಂದ ?ವರ್ತಮಾನದಲ್ಲಿ ಇಂಡಿ ತಾಲೂಕಿನ ತಡವಲಗಾ, ಚಡಚಣ, ದೇವರ ನಿಂಬರಗಿ ಹಳ್ಳಿಗಳಲ್ಲಿ ಜೈನ ಸಮುದಾಯದ ಒಣಕುದುರೆ ಹೆಸರಿನ ಮನೆತನಗಳು ಈಗಲೂ ಅಸ್ತಿತ್ವದಲ್ಲಿವೆ. ನಟ ಶಾಂತಾರಾಮ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ವಲಸೆ ಹೋದ ಕನ್ನಡದ ಜೈನ ಕುಟುಂಬದ ಸದಸ್ಯರಾಗಿದ್ದರು. ಒಂದಂತೂ ಸತ್ಯ ಶ್ರೇಷ್ಠ ನಟ ವ್ಹಿ ಶಾಂತಾರಾಮ ಇವರು ಇಂಡಿ ತಾಲೂಕಿನ ಕನ್ನಡ ನೆಲದ ಹೆಮ್ಮೆಯ ಪುತ್ರ ಎನ್ನುವುದು ನಿರ್ವಿವಿವಾದದ ಮಾತಾಗಿದೆ.

      ಮೊದಲಿಗೆ ಮಹಾರಾಷ್ಟ್ರದಲ್ಲಿ ಮೂಕಿ ಟಾಕಿ ಚಿತ್ರದಲ್ಲಿ ಬಾಲನಟರಾಗಿ ಶಾಂತಾರಾಮ ಅಭಿನಯಿಸಿದ್ದರು ಕೂಡಾ ಅವರಿಗೆ ಕಷ್ಟಗಳ ಕಾಟ ತಪ್ಪಲಿಲ್ಲ. ನಾಟಕದಲ್ಲಿ ಪರದೆ ಎಳೆಯುವ ಅವರ ಕೆಲಸದಿಂದ ಹಿಡಿದು , ಹುಬ್ಬಳಿಯಲ್ಲಿ ಡೆಕ್ಕನ್ ಚಂದ್ರಕಲಾ ಚಿತ್ರಮಂದಿರದಲ್ಲಿ ಗೇಟ್ ಕೀಪರಾಗಿ ನಂತರ ಸಮೀಪದ ರೈಲೈ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿ ಹುಬ್ಬಳ್ಳಿಯ ದುರ್ಗದ ಬೈಲಿನ ಜನರಿಗೆ ತಮ್ಮ ಮಾತೃ ಭಾಷೆ ಅಪ್ಪಟ ಕನ್ನಡಿಗರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತ ಪರಿಚಿತರಾಗಿದ್ದರು.

      ಭಾರತೀಯ ಸಿನೆಮಾಗಳಲ್ಲಿ ವಿಶಿಷ್ಟವಾದ ಕ್ರೀಯಾಶೀಲತೆಯ ಪ್ರಯೋಗ ಮಾಡಿ ಸಿನೆಮಾ ಮಾಧ್ಯಮಕ್ಕೆ ಹೊಸ ಭಾಷ್ಯೆ ಬರೆದ ಗಾರುಡಿಗರೆಂದರೇ ವ್ಹಿ ಶಾಂತಾರಾಮ ಒಣಕದುರೆಯಾಗಿದ್ದರು. ಭಾರತೀಯ ಸಿನೆಮಾ ರಂಗದಲ್ಲಿ ತಮ್ಮ ಸೃಜನ ಶೀಲತೆಯ ಕತೆಗಳಿಂದ ಹೊಸ ಬದಲಾವಣೆಯ ದಿಕ್ಸೂಚಿಯಾಗಿದ್ದರು. ಸುಮಾರು ಇಪ್ಪತ್ತೈದು ಸಿನೆಮಾಗಳಲ್ಲಿ ನಟನಾಗಿ ಐವತ್ತೆರಡು ಸಿನೆಮಾಗಳನ್ನು ನಿರ್ದೇಶನ ಮಾಡಿ ಹಲವಾರು ಚಿತ್ರಗಳನ್ನು ತೆರೆಗೆ ತರುವಲ್ಲಿ ಶ್ರಮಿಸಿ ಭಾರತೀಯ ಚಿತ್ರರಂಗಕ್ಕೆ ಬಹು ಅಮೂಲ್ಯವಾದ ಕೊಡುಗೆ ನೀಡಿ ದೇಶ ತಿರುಗಿ ನೋಡುವಂತೆ ಸಾಧನೆ ಮಾಡಿದ್ದರು.

      ಶಾಂತಾರಾಮರ ಮೊದಲ ಚಿತ್ರ ಸುರೇಖಾ ಹರಣ, ನೇತಾಜಿ ಪಾಲ್ಕರ್ ದೋ ಆಂಕೆ ಬಾರಾ ಹಾತ್, ಝನಕ್ ಝನಕ್ ಪಾಯಲ್,ಪಿಂಜಾರಾ ನವರಂಗ್, ದುನಿಯಾ ನಾ ಮಾನೆ ಮುಂತಾದ ಚಿತ್ರಗಳ ಪೈಕಿ ದೋ ಆಂಕೆ ಬಾರಾ ಹಾತ್,ಝನಕ್ ಝನಕ್ ಪಾಯಲ್ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಗಳು ದೊರಕಿದವು.

      ಇವರು ನಟಿಸಿದ ಚಲನ ಚಿತ್ರಗಳಲ್ಲಿನ ಇವರ ಮನೋಜ್ಞವಾದ ನೈಜ ಅಭಿನಯ ಕಂಡು ಅಂದು ಸಹಸ್ರಾರು ಜನ ಪ್ರೇಕ್ಷಕರು ಮಾರು ಹೋಗಿದ್ದರು.ಇವರ ಅಭಿನಯದ ಮಾನವೀಯ ಮನೋವಿಜ್ಞಾನದ ಮೇಲೆ ರಚಿಸಲಾದ ದೋ ಆಂಕೆ ಬಾರಾ ಹಾತ್ ಸಿನೆಮಾದ ಕೊನೆಯ ಸನ್ನಿವೇಶದಲ್ಲಿ ರೊಚ್ಚಿಗೆದ್ದ ಗೂಳಿಯೊಂದಿಗೆ ನಟ ಶಾಂತಾರಾಮ ಸೆಣಸಾಡುವಾಗ ಗೂಳಿ ತನ್ನ ಕೊಂಬಿನಿಂದ ಅವರ ಕಣ್ಣಿಗೆ ತಿವಿದಿತ್ತು.ಚಿತ್ರದಲ್ಲಿ ಅವರ ಮೈನವೀರೇಳಿಸುವ ಅಭಿನಯ ನೋಡುಗರ ಎದೆ ಝಲ್ಲೆನ್ನುವoತಿದೆ. ಅವರ ಕಣ್ಣಿಗೆ ಗಾಯವಾದ ಪರಿಣಾಮ ಅವರು ಎಷ್ಟೊ ದಿನಗಳ ಕಾಲ ಕಪ್ಪು ಕನ್ನಡಕ ಹಾಕಿಕೊಳ್ಳವ ಪ್ರಸಂಗ ಬಂದಿತ್ತು. ಈ ರೀತಿಯ ದೃಶ್ಯಗಳನ್ನು ಅವರು ಎಷ್ಟೊಂದು ತನ್ಮಯರಾಗಿ ಅಭಿನಯಿಸುತ್ತಿದ್ದರು ಎನ್ನುವದಕ್ಕೆ ಚಲನಚಿತ್ರದ ಈ ಘಟನೆ ಸಾಕ್ಷಿಯಾಗಿದೆ.

      ಇನ್ನೂ ಅವರ ಚಲನ ಚಿತ್ರಗಳಲ್ಲಿನ ಪ್ರಸಿದ್ಧ ಹಾಡುಗಳಾದ ಐ ಮಾಲಿಕ್ ತೇರೆ ಬಂದೆ ಹಮ್,ಪಂಕ್ ಹೋತೆ ತೊ ಉಡ ಜಾಯೇ,ಆದಾ ಹೈ ಚಂದ್ರಮಾ ಗಾನ ಗುಂಜನ ಈಗಲೂ ಜನಪ್ರಿಯತೆ ಉತ್ತುಂಗದ ಶಿಖರದಲ್ಲಿವೆ.ಇವರ ಚಿತ್ರಗಳಲ್ಲಿ ಮನ್ನಾ ಡೇ, ಆಶಾ ಬೋಸ್ಲೆ, ಮಂಗೇಶ್ಕರ್ ಖ್ಯಾತನಾಮರು ಹಿನ್ನೆಲೆ ಗಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

      ಶಾಂತಾರಾಮರವರು ಬಾಬುರಾವ ಪೆಂಟರ್ ಸಿನೆಮಾ ನಿರ್ಮಾತನ ಹತ್ತಿರ ಕೆಲಸ ಮಾಡುತ್ತ ಪ್ರಭಾತ ಹೆಸರಿನ ಸಿನೆಮಾ ಸ್ಟುಡಿಯೋ ನಿರ್ಮಿಸಿದರು. ನಂತರ
      ತಂದೆ ರಾಜರಾಮ ತಾಯಿ ಕಮಲಾದೇವಿ ಹೆಸರನ್ನ ಒಟ್ಟಾಗಿ ಸೇರಿಸಿ ಮುಂಬಯಿ ನಗರಿಯಲ್ಲಿ ರಾಜ-ಕಮಲ ಸ್ಟುಡಿಯೋ ನಿರ್ಮಿಸಿ ಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದರು.

      ಭಾರತೀಯ ಚಲನ ಚಿತ್ರರಂಗದಲ್ಲಿ ಇವರ ಅನುಪಮವಾದ ಸೇವೆಯನ್ನು ಕಂಡು ಇವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಇವರಿಗೆ ಗೌರವಿಸಿತು.ಹಾಗೆ ಭಾರತೀಯ ಸಿನೆಮಾ ರಂಗದ ಶ್ರೇಷ್ಠ ಸಾಧನಾ ಪ್ರಶಸ್ತಿಯಾಗಿರುವ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ಕನ್ನಡದ ವರನಟ ಡಾ.ರಾಜಕುಮಾರ ಪ್ರಶಸ್ತಿ ಪಡೆಯುವ ಮೊದಲು 1985ರಲ್ಲಿ ದಾದಾಸಾಹೇಬ ಪಾಲ್ಕೆ ಪ್ರಶಸ್ತಿಯನ್ನು ನಟ ಶಾಂತಾರಾಮ ಪಡೆದುಕೊಂಡರು. ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗನಾಗಿ ಇಂಡಿಯ ಜೈನ ಕುಟುಂಬವಾದ ಒಣಕುದುರೆ ಮನೆತನದ ಮೊದಲ ಕುಡಿಯಾಗಿ ಹೊರ ಹೊಮ್ಮಿದರು.

      ಸಂಶೋದನೆ ದಶರಥ ಕೋರಿ ಸಾಹಿತಿ, ಶಿಕ್ಷಕರು ಇಂಡಿ

      Tags: #Dada Saheb Palke Award for famous actor of India..! Do you know who that is?#Editor#indi / vijayapur#Public News#State News#ಇಂಡಿಯ ಪ್ರಖ್ಯಾತ ನಟನಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ..! ಅದು ಯಾರು ಗೊತ್ತಾ..?#ಪ್ರಪಂಚದ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನರಿಂದ ಪ್ರಶಂಸೆ..!
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ಈಶ್ವರಿಯ ವಿವಿಯಲ್ಲಿ ದೀಪಾವಳಿ

      ಈಶ್ವರಿಯ ವಿವಿಯಲ್ಲಿ ದೀಪಾವಳಿ

      October 23, 2025
      ಹುಲಜಂತಿ ಜಾತ್ರೆ : ೨೨ ಲಕ್ಷ ಆದಾಯ

      ಹುಲಜಂತಿ ಜಾತ್ರೆ : ೨೨ ಲಕ್ಷ ಆದಾಯ

      October 23, 2025
      ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

      ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ಕೆ ಮಾದರಿ: ಅನುರಾಧ ವಸ್ತ್ರದ

      October 23, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.