“ಬಬಲಾದ” ಗ್ರಾಮ ಪಂಚಾಯತಿ ಅಧ್ಶಕ್ಷರಾಗಿ ಸುನೀಲಗೌಡ ಕಾ ಬಿರಾದಾರ ಅವಿರೋಧ ಆಯ್ಕೆ..
ಇಂಡಿ : ತಾಲ್ಲೂಕಿನ ಬಬಲಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುನೀಲಕುಮಾರ ಬಿರಾದಾರ (ಹಳಗುಣಕಿ) ಹಾಗೂ ಉಪಧ್ಯಕ್ಷರಾಗಿ ನೀಲಾವತಿ ಕಲ್ಲಪ್ಪ ದಶವಂತ (ಬಬಲಾದ) ಅವರು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್ ಲಕ್ಷ್ಮೀಶ ರವರು ಘೋಷಣೆ ಮಾಡಿದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸುನೀಲಕುಮಾರ ಕಾ ಬಿರಾದಾರ ಹಾಗೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ನೀಲಾವತಿ ಕಲ್ಲಪ್ಪ ದಶವಂತ ನಾಮಪತ್ರ ಸಲ್ಲಿಸಿದ್ದರು.
ಗ್ರಾಮ ಪಂಚಾಯತ್ 8 ಸದಸ್ಯರು ಹಾಜರಿದ್ದರ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬ ಒಬ್ಬರೆ ನಾಮಪತ್ರ ಸಲ್ಲಿಸಿದರು. ಹಾಗಾಗಿ ಪ್ರತಿಸ್ಪರ್ಧಿ ಯಾರೂ ಇಲ್ಲದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆ ಮುಕ್ತಾಯ ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಅಧ್ಯಕ್ಷ ಸುನೀಲಕುಮಾರ ಕಾ ಬಿರಾದಾರ ಮತ್ತು ಉಪಾಧ್ಯಕ್ಷ ನೀಲಾವತಿ ದಶವಂತ ಮಾತನಾಡಿ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಚುನಾವಣಾ ಅಧಿಕಾರಿ ಕೆ ಎಸ್ ಲಕ್ಷ್ಮೀಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಡಿ ಬಿರಾದಾರ, ಗ್ರಾಮ ಪಂಚಾಯತಿ ಸದಸ್ಯರಾದ ಸಿದರಾಯಗೌಡ ಬಾ ಬಿರಾದಾರ, ಸುನಂದಾ ಹ ಬಿರಾದಾರ, ನೀಲಾಂಬಿಕಾ ಗಿ ಭುಯ್ಯಾರ, ಶಾಂತಾಬಾಯಿ ಬನಸೋಡೆ, ಶ್ರೀಶೈಲ ಮ ಮಾದರ, ಮಾನಂದ ನಿಂ ಮಾದರ ಇದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸುನೀಲಗೌಡ ಬಿರಾದಾರ ಬೆಂಬಲಿಗರು ಹಾಗೂ ಪ್ರೀತು ದಶವಂತ ಬೆಂಬಲಿಗರು ಮತ್ತು ಹಳಗುಣಕಿ ˌ ಬಬಲಾದ ಗ್ರಾಮಗಳ ಗ್ರಾಮಸ್ಥರು ಗುಲಾಲ ಎರಚಿ ಪಟಾಕ್ಸಿ ಸಿಡಿಸಿ ಸಂಭ್ರಮಿಸಿದರುˌ