ಇಂಡಿಯಲ್ಲಿ 5ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ..! 60 ವರ್ಷ ದಾಟಿದ ಆದರ್ಶ ದಂಪತಿಗಳಿಗೆ ‘ಅಭಿನವ ಶ್ರೀ’ ಪ್ರಶಸ್ತಿ
ಇಂಡಿ: ನಗರದ ಹಳೆಸಾಲೋಟಗಿ ರಸ್ತೆಯ ಸದಾಶಿವ ನಗರದಲ್ಲಿರುವ ಶಿರಶ್ಯಾಡ ಶಾಖಾ ಮಠದ ಆವರಣದಲ್ಲಿ ಶ್ರೀಮಠದ ಪೂಜ್ಯರಾದ ಅಭಿನವ ಮುರುಘೇಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ೫ನೇ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ ಶುಕ್ರವಾರ, ಆಗಸ್ಟ್ ೨೮ರಂದು ಸಂಜೆ ೬ ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ೬೦ ವರ್ಷ ದಾಟಿದ ಹಿರಿಯ ಆದರ್ಶ ದಂಪತಿಗಳಿಗೆ ಅಭಿನವ ಶ್ರೀ ಪ್ರಶಸ್ತಿ ನೀಡಿ ಸತ್ಕರಿಸಲಾಗುತ್ತದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಅಧ್ಯಕ್ಷತೆಯನ್ನು ಡಾ|| ಲಕ್ಷಿö್ಮÃಕಾಂತ ಮೇತ್ರಿ, ಮುಖ್ಯ ಅತಿಥಿಗಳಾಗಿ ನಾಗನಾಥಗೌಡ ಬಿರಾದಾರ, ಭಾಗ್ಯಜ್ಯೋತಿ ಭಗವಂತಗೌಡರ, ಸಂಜೀವಕುಮಾರ ದಶವಂತ, ಪೂನಮ್ ಕಟ್ಟೀಮನಿ, ಮಲ್ಲಿಕಾರ್ಜುನ ಬುರುಕುಲೆ, ಎ.ಸಿ. ಹುಣಸಗಿ ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ.
೬೦ ವರ್ಷ ದಾಟಿದ ಆದರ್ಶ ದಂಪತಿಗಳಾದ ಡಾ|| ಪ್ರೀತಿ ಮತ್ತು ಡಾ|| ರಾಜೇಶ್ ಕೋಳೇಕರ, ನಿವೃತ್ತ ರೇಷ್ಮೆ ಇಲಾಖೆ ಅಧಿಕಾರಿ ಶ್ರೀಮತಿ ನಿರ್ಮಲಾ ಮತ್ತು ಮಲ್ಲೇಶಪ್ಪ ಬಳಬಟ್ಟಿ ಅವರಿಗೆ ಅಭಿನವ ಶ್ರೀ ಪ್ರಶಸ್ತಿ ನೀಡಿಗೌರವಿಸಲಾಗುತ್ತದೆ.
ಆಯೋಜಕರು ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ಭಕ್ತರ ಸಹಕಾರದೊಂದಿಗೆ ನಡೆಯುತ್ತಿರುವ ಈ ಧಾರ್ಮಿಕ ಸಮಾರಂಭವು ಆಧ್ಯಾತ್ಮಿಕ ವಾತಾವರಣಕ್ಕೆ ಸಾಕ್ಷಿಯಾಗಲಿದ್ದು, ಇಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇಂಡಿ: ಅಭಿನವ ಮುರುಘೇಂದ್ರ ಶಿವಾಚಾರ್ಯರು


















