ಯಶವಂತರಾಯಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ
ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ, ಅನುಭವ, ಹಿರಿತನ, ಪಕ್ಷ ನಿಷ್ಠೆ ಹಾಗೂ ಜನಪರ ಕಾರ್ಯ ಮಾಡಿದ ಶಾಸಕರು. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಮಹಿಳಾ ಘಟಕದ ನಿರ್ಮಲಾ ತಳಕೇರಿ ಮಾತನಾಡಿ, ಮೂರು ಬಾರಿ ಜಿಪಂ ಸದಸ್ಯರಾಗಿ, ಜಿಪಂ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿ ಅಪಾರ ಆಡಳಿತ ಅನುಭವ ಮತ್ತು ಜನಸೇವೆಯ ಪರಿಪಕ್ವತೆಯನ್ನು ಗಳಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ, ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಹಾಗೂ ಗಡಿನಾಡಿನ ಅಭಿವೃದ್ಧಿಯ ಕುರಿತು ಅವರ ಬದ್ಧತೆ ಸದಾ ಶ್ಲಾಘನೀಯವಾಗಿದು,್ದ ಅವರಿಗೆ ಸಚಿವ ಸ್ಥಾನ ನೀಡಿದರೆ ಇಂಡಿ ಮತಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ದಿ ಹೊಂದಲಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಮಾತನಾಡಿ, ಇಂಡಿ ಭಾಗವು ಸ್ವಾತಂತ್ರ್ಯಾನAತರ ಇಂದಿನವರೆಗೂ ಸಚಿವ ಸ್ಥಾನದಿಂದ ವಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಈ ಬಾರಿ ಸಚಿವ ಸಂಪುಟದಲ್ಲಿ ಇಂಡಿ ಮತಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಮುತ್ತಪ್ಪ ಪೋತೆ, ಬಿ.ಸಿ.ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಚನಗೊಂಡ, ನೀಲಕಂಠಗೌಡ ಪಾಟೀಲ, ಇಂಡಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ
ಹುಚ್ಚಪ್ಪ ತಳವಾರ, ಸಣ್ಣಪ್ಪ ತಳವಾರ, ಹುಸೇನ ಜಮಾದಾರ ಮಾತನಾಡಿದರು.
ಪ್ರತಿಭಟನೆಯಲ್ಲಿ ಅವಿನಾಶ ಬಗಲಿ, ಜಾವೇದ ಮೋಮಿನ, ಭಿಮಣ್ಣ ಕವಲಗಿ, ಸತ್ತಾರ ಬಾಗವಾನ, ಪ್ರಶಾಂತ ಕಾಳೆ, ಭೀಮಾಶಂಕರ ಮೂರಮನ, ಮಿಲಿಂದ ಹೊಸಮನಿ, ಆಶಿಫ್ ಕಾರಬಾರಿ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಧರ್ಮರಾಜ ವಾಲಿಕಾರ, ರೈಸ ಅಷ್ಟೇಕರ, ಮುಕ್ತಾರ ಇಂಡಿಕರ, ಜಯನೋದ್ದೀನ ಬಾಗವಾನ, ಅಬು ತಲೀಬ ಹೊಸುರ, ಬಸೀರ ಇನಾಮದಾರ, ಮಹಮ್ಮದ ಗುಲಬರ್ಗಾ, ಅಸ್ಲಾಂ ಪಟೇಲ, ಜಹಾಂಗೀರ ಸೌದಾಗರ, ಹುಸೇನಸಾಬ ಜಮಾದಾರ, ಖಲೀಲ ಇಂಡಿಕರ, ಬುಡಾ ನದಾಫ, ಮಹಿಬೂಬ ಜಹಾಗೀರದಾರ, ಮುಸ್ತಾಕ ಇಂಡಿಕರ, ಹಮೀದ ಮುಲ್ಲಾ, ಶಬ್ಬೀರ ತಾಂಬೆ, ಇಮ್ರಾನ ಮಕಾನದಾರ ಇದ್ದರು..



















