ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ರಂಗ ಶಿಕ್ಷಣ ಅವಶ್ಯಕ : ಉಪನ್ಯಾಸಕ ಸದಾನಂದ
ಇಂಡಿ : ನಾಟಕ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಕಲಿಕೆಯು ಕರಗತ ಮಾಡಿಕೊಳ್ಳುವ ಪೂರಕ ವಾತಾವರಣ ಒದಗಿಸಿ ಕೊಟ್ಟಂತೆ ಆಗುತ್ತದೆ ಎಂದು ಉಪನ್ಯಾಸಕ ಸದಾನಂದ ಈರನಕೇರಿ ಹೇಳಿದರು.
ಪಟ್ಟಣದ ಅಮರ್ ಫಂಕ್ಷನ್ ಹಾಲ್ನಲ್ಲಿ ವಿಜಯಪುರ ರಂಗಸಿರಿ ಪ್ರತಿಷ್ಠಾನ ಹಾಗೂ ವಿವಿಧ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾಟಕಗಳನ್ನು ವಿಕ್ಷಿಸಿ ಮಾತನಾಡಿದರು. ಮೌಲ್ಯಯುತ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂದರು.
ಪೂರ್ಣಚಂದ್ರ ತೇಜಸ್ವಿ ರಚಿಸಿರುವ ಪಿಯುಸಿ ದ್ವಿತೀಯ ವರ್ಷದ ದೀರ್ಘ ಗದ್ಯ ಕೃಷ್ಣೇಗೌಡನ ಆನೆ, ಡಾಕ್ಟರ್ ಚಂದ್ರಶೇಖರ್ ಕಂಬಾರ್ ಬರೆದಿರುವ ಬೋಳೇಶಂಕರ ನಾಟಕ ಪ್ರದರ್ಶನವಾಯಿತು. ಇನ್ನೂ ವಿವಿಧ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಪಾಲ್ಗೊಂಡು ವಿಕ್ಷಿಸಿ ನಾಟಕ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಇನ್ನೂ ವೇದಿಕೆಯ ಮೇಲೆ ಅಂಜುಮನ್ ಕಾಲೇಜು ಪ್ರಾಚಾರ್ಯ ಜೆ.ಡಿ. ಪೂಜಾರಿ, ದೂಮಗೊಂಡ, ಶಕೀನಾ ಪಟೇಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಹಿರಿಯ ಉಪನ್ಯಾಸಕ, ಉಪನ್ಯಾಸಕಿಯರು ಹಾಜರಿದ್ದರು.