• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result
    • Home
    • ಸಂಪಾದಕೀಯ
    • ಸುದ್ದಿ
      ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

      ಎಸ್ಸೆಸ್ಸೆಲ್ಸಿ ಪರೀಕ್ಷೆ ನಗರದ ಆದರ್ಶ ವಿದ್ಯಾಲಯ ಕೇಂದ್ರಕ್ಕೆ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಭೇಟಿ

      ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

      ಪ್ರತಿಯೊಬ್ಬ ಮನುಷ್ಯನಲ್ಲಿ ಸಮಾನತೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಅವನು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು

      ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

      ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ ಉತ್ತಮ ಅಂಕಗಳಿಸಿರಿ..

      21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

      21 ರಂದು  ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ

      ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

      ತಂಗಡಗಿಯಲ್ಲಿ ದರ್ಗಾ ದೇವಿ ಜಾತ್ರೆ ಹಾಗೂ ಸಾಮೂಹಿಕ ವಿವಾಹ ಮಹೋತ್ಸವ

      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      ಮಕ್ಕಳಿಗೆ ಶಿಕ್ಷಣ ಅಮೂಲ್ಯ ರತ್ನ; ಪಿ.ಕೆ. ಬಿರಾದಾರ

      ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

      ಶ್ರೀಗಳ ಜನ್ಮ ದಿನಾಚರಣೆ ನಿಮಿತ್ಯ ಇಂದು ಕೆ.ಎ.ಎಸ್ ಮತ್ತು ಐ.ಎ.ಎಸ್ ಕಾರ್ಯಾಗಾರ

      ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

      ಪುನಿತ ರಾಜಕುಮಾರ ಜನ್ಮ ದಿನ ಆಚರಣೆ..!

      ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

      ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ

      ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

      ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ

      Trending Tags

      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಕ್ರೈಮ್‌
      • ಇತರೆ
      No Result
      View All Result
      voice of janata
      No Result
      View All Result
      Home ಸುದ್ದಿ

      ಗಾಂಧಿಯುಗ ಮರುಕಳಿಸಬೇಕು, ವಿಶ್ವಕ್ಕೆ ಗಾಂಧೀಜಿ ಅವಶ್ಯಕತೆ ಇದೆ..!

      Voiceofjanata

      August 6, 2024
      0
      ಗಾಂಧಿಯುಗ ಮರುಕಳಿಸಬೇಕು,  ವಿಶ್ವಕ್ಕೆ ಗಾಂಧೀಜಿ ಅವಶ್ಯಕತೆ ಇದೆ..!
      0
      SHARES
      798
      VIEWS
      Share on FacebookShare on TwitterShare on whatsappShare on telegramShare on Mail

      ವರದಿ : ಬಸವರಾಜ ಈ ಕುಂಬಾರ, ಮುದ್ದೇಬಿಹಾಳ, ವಿಜಯಪುರ ಜಿಲ್ಲೆ.

       

      ಶಾ ಎಸ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಕುರಿತಾದ ರಾಜ್ಯಮಟ್ಟದ ಉಪನ್ಯಾಸ, ಕಾರ್ಯಾಗಾರ: ವಿಶ್ವಕ್ಕೆ ಗಾಂಧೀಜಿ ಅವಶ್ಯಕತೆ ಇದೆ.

       

      ಮುದ್ದೇಬಿಹಾಳ: ಗುಲಾಮಗಿರಿಯಲ್ಲಿ ಬದುಕುತ್ತಿದ್ದ ಭಾರತೀಯರನ್ನು ಬ್ರಿಟೀಷರಿಂದ ಮುಕ್ತಗೊಳಿಸಿದ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ. ಸ್ವತಂತ್ರ ಭಾರತದಲ್ಲಿ ಎಲ್ಲರೂ ತಲೆ ಎತ್ತಿ ಬದುಕಬೇಕು ಅನ್ನೋ ಕನಸು ಅವರದಾಗಿತ್ತು. ಗಾಂಧೀಜಿ ವ್ಯಕ್ತಿಯಲ್ಲ ಶಕ್ತಿ. ಗಾಂಧಿಯುಗ ಮರುಕಳಿಸಬೇಕು. ವಿಶ್ವಕ್ಕೆ ಗಾಂಧಿ ಅವಶ್ಯಕತೆ ಇದೆ ಎಂದು ಎಂಜಿವಿಸಿ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ಎಚ್.ಸಜ್ಜನ ಹೇಳಿದರು.
      ಇಲ್ಲಿನ ಶಾ ಎಸ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೇನಾಳ ಆರ್‌ಎಸ್‌ನ ರಾಷ್ಟಪಿತ ಮಹಾತ್ಮ ಗಾಂಧಿ ಫೌಂಡೇಶನ್, ಕಾಲೇಜು ಮತ್ತು ಎನ್‌ಎಸ್‌ಎಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ನೈತಿಕ ಮೌಲ್ಯಗಳು ಕುರಿತಾದ ರಾಜ್ಯ ಮಟ್ಟದ ವಿಶೇಷ ಉಪನ್ಯಾಸ, ರಸಪ್ರಶ್ನೆ, ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

      ಗಾಂಧೀಜಿಯೂ ಸೇರಿ ರಾಷ್ಟç ನಾಯಕರನ್ನು ಸಂಕುಚಿತಗೊಳಿಸಿ, ಅವರ ವ್ಯಕ್ತಿತ್ವಕ್ಕೆ ಮಸಿ ಬೆಳೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆಗಿನ ಸ್ವಾತಂತ್ರö್ಯ ಹೋರಾಟಗಾರರ ಕುರಿತಾದ ತಪ್ಪಾದ ಇತಿಹಾಸ ಬೋಧಿಸುವ ಮೂಲಕ ಈಗಿನ ಮಕ್ಕಳನ್ನು ದಾರಿ ತಪ್ಸಿಲಾಗುತ್ತಿದೆ. ಗಾಂಧೀಜಿ ಎಂದೂ ಅಧಿಕಾರಕ್ಕೆ ಆಸೆ ಪಡಲಿಲ್ಲ. ಆದರೂ ಭಾರತಕ್ಕೆ ಮಾತ್ರ ಅವರು ಬೇಕಾಗಿಲ್ಲ ಎನ್ನುವಂತಾಗಿದೆ. ಗಾಂಧಿ ಬಗ್ಗೆ ಮಕ್ಕಳಲ್ಲಿ ತುಂಬುತ್ತಿರುವ ತಪುö್ಪ ಕಲ್ಪನೆ ಹೋಗಲಾಡಿಸಬೇಕು ಎಂದರು.

      ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ ಮಾತನಾಡಿ, ಗಾಂಧೀಜಿಯವರಲ್ಲಿ ನಾಯಕತ್ವದ ಗುಣಗಳಿದ್ದವು. ಸತ್ಯ, ಅಹಿಂಸೆ ಬಲವಾಗಿ ಪ್ರತಿಪಾದಿಸಿದ್ದರು. ಇಡೀ ವಿಶ್ವವೇ ಅವರನ್ನು ಮಹಾತ್ಮ ಎಂದು ಒಪ್ಪಿಕೊಂಡಿರುವಾಗ ಕೆಲವರು ಅವರ ಬಗ್ಗೆ ಹುಸಿನುಡಿಗಳನ್ನಾಡುವುದು ನಿರ್ಲಕ್ಷಿಸುವಂಥದ್ದು. ಸಕಾರಾತ್ಮಕ ಮತ್ತು ನಕಾರಾತ್ಮಕ ಮನೋಭಾವದಲ್ಲಿ ಸಕಾರಾತ್ಮಕ ಚಿಂತನೆಗಳಿಗೆ, ವಿಚಾರಗಳಿಗೆ ಹೆಚ್ಚಿನ ಮಹತ್ವ ಕೊಡಬೇಕು. ಇಂದಿನ ವಿದ್ಯಾರ್ಥಿಗಳು ಗಾಂಧೀಜಿ ಅವರನ್ನು ಸಂಪೂರ್ಣ ಅರಿತುಕೊಂಡು ಅವರಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

      ಬೇನಾಳ ಆರ್‌ಎಸ್‌ನ ರಾಷ್ಟಪಿತ ಮಹಾತ್ಮ ಗಾಂಧಿ ಫೌಂಡೇಶನ್‌ನ ಸಂಸ್ಥಾಪಕ ನೇತಾಜಿ ಗಾಂಧಿ (ನೀಲೇಶ ಬೇನಾಳ) ಮಾತನಾಡಿ, ಜಗತ್ತಿನ ಸರ್ವಶ್ರೇಷ್ಠ ನಾಯಕ ಗಾಂಧೀಜಿ. ೧೮೪ ರಾಷ್ರಗಳಲ್ಲಿ ಗಾಂಧೀಜಿ ಪ್ರತಿಮೆ ಇವೆ. ಅವರು ಪತ್ರಕರ್ತರೂ ಅಗಿದ್ದರು. ಅವರ ಬಗ್ಗೆ ಮಾತನಾಡುವ ಪರಿಪೂರ್ಣತೆ ಯಾರಿಗೂ ಇಲ್ಲ. ಅವರ ಬಗ್ಗೆ ಮಾತನಾಡುವುದೆಂದರೆ ಆನೆಯನ್ನು ಕನ್ನಡಿಯಲ್ಲಿ ತೋರಿಸಿದಂತಾಗುತ್ತದೆ ಎಂದರು.

      ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಸಿಕಂದರ್ ಧನ್ನೂರ ಮಾತನಾಡಿ, ಆಧುನಿಕ ಫೇಸಬುಕ್, ವಾಟ್ಸಪ್ ಲೋಕದಲ್ಲಿ ಗಾಂಧೀಜಿ ಕುರಿತಾದ ನಕಾರಾತ್ಮಕ ವಿಚಾರ ಹೆಚ್ಚಾಗುತ್ತಿವೆ. ಈ ಭೂಮಿ ಮೇಲೆ ಮನುಷ್ಯ ಇರೋವರೆಗೂ ಗಾಂಧಿ ಅವರಂಥವರು ಹುಟ್ಟೋಕೆ ಸಾಧ್ಯವೇ ಇಲ್ಲ. ಅವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ರಾಜತಾಂತ್ರಿಕ ಹುದ್ದೆಯಲ್ಲಿ ಇರದಿದ್ದರೂ ಅವರು ಮರಣ ಹೊಂದಿದಾಗ ವಿಶ್ವಸಂಸ್ಥೆಯೂ ಸೇರಿ ಜಗತ್ತಿನ ಎಲ್ಲ ದೇಶಗಳ ರಾಷ್ತçಧ್ವಜ ಅರ್ಧಕ್ಕೆ ಹಾರಿಸಿದ್ದು ಗಾಂಧೀಜಿ ಮಹತ್ವ ತೋರಿಸುವಂಥದ್ದು ಎಂದರು.
      ಭೂದಾನಿ ಗುಲಾಬಚಂದ ಓಸ್ವಾಲ್, ವಿಜ್ಞಾನ ಶಿಕ್ಷಕ ಎಲ್.ಪಿ.ಕುಲಕರ್ಣಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಉಪ ವಿಭಾಗದ ಎಇಇ ಆರ್.ಎಸ್.ಹಿರೇಗೌಡರ ವೇದಿಕೆಯಲ್ಲಿದ್ದರು. ಕಾಲೇಜಿನ ಉಪನ್ಯಾಸಕರು, ಪದವಿ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು ಉಪಸ್ತಿತರಿದ್ದರು.

      ವಂದೇಮಾತರA ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗಾಂಧೀಜಿಯವರ ಅಚ್ಚುಮೆಚ್ಚಿನ ಪ್ರಾರ್ಥನೆ ವೈಷ್ಣವ ಜನತೊ ಮೂಲಕ ಪ್ರಾರ್ಥಿಸಲಾಯಿತು. ಡಾ.ಎಚ್.ಎ.ಕಟಗೂರ ಸ್ವಾಗತಿಸಿದರು. ಪ್ರೊ.ಸನಾವುಲ್ಲಾ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.

      ಉಪನ್ಯಾಸ ಗೋಷ್ಠಿಗಳು:

      ಮೊದಲನೇ ಗೋಷ್ಠಿಯಲ್ಲಿ ವಿಜ್ಞಾನ ಶಿಕ್ಷಕ, ಲೇಖಕ ಎಲ್.ಪಿ.ಕುಲಕರ್ಣಿ ಮಾತನಾಡಿ ನಡೆ ನುಡಿಗೆ ವ್ಯತ್ಯಾಸವಿಲ್ಲದಂತೆ ಬದುಕಿದ ಮಹಾ ನಾಯಕ ಗಾಂಧೀಜಿ ವಿಜ್ಞಾನಿಯಲ್ಲದಿದ್ದರೂ ಅವರಲ್ಲೊಬ್ಬ ವೈಜ್ಞಾನಿಕ ಮನೋಭಾವ ಹೊಂದಿದ ವಿಜ್ಞಾನಿಯ ಮನಸ್ಸಿತ್ತು. ಅವರು ಚಿಕಿತ್ಸಕ ಮನೋಭಾವ ಹೊಂದಿದ್ದರು. ಸ್ವಚ್ಛ ಭಾರತ ಅಭಿಯಾನ, ಸ್ವಚ್ಛ ಭಾರತ ಮಿಷನ್ ಮೂಲ ಗಾಂಧೀಜಿಯವರೇ ಆಗಿದ್ದಾರೆ ಎಂದರು. ಎರಡನೇ ಗೋಷ್ಠಿಯಲ್ಲಿ ಗಾಂಧಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ ಇತಿಹಾಸದ ವಿಸ್ಮಯ, ಜಗತ್ತಿನ ಅಚ್ಚರಿ ಮಹಾತ್ಮ ಗಾಂಧಿ. ಮೋಹನ್ ದಾಸ್ ಟು ಮಹಾತ್ಮ ೭೯ ವರುಷದ ಸಂಘರ್ಷದ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಅದು ಸಾಕಷ್ಟು ಕಲ್ಲು ಮುಳ್ಳುಗಳಿಂದ ಕೂಡಿತ್ತು. ಸರಳತೆ, ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ, ನೈತಿಕತೆ, ಮಾನವೀಯತೆಯ ಮಹಾ ಮೂರ್ತವೇ ಮಹಾತ್ಮ ಎಂದರು. ಮೂರನೇ ಗೋಷ್ಠಿಯಲ್ಲಿ ಡಾ.ಮಲ್ಲಿಕಾರ್ಜುನ ಉಗಲ್‌ವಾಟ್ ಮಾತನಾಡಿ, ಗಾಂಧಿಯವರು ಜಗತ್ಪçಸಿದ್ದರಾಗಿರುವುದಕ್ಕೆ ಕಾರಣವೇ ಅವರ ನೈತಿಕ ಜೀವನ ಹೊರತು ಕ್ರಾಂತಿಕಾರಿ ನಡೆಯಲ್ಲ. ಮಹಾತ್ಮ ಪ್ರತಿಪಾದಿಸಿದ ಸತ್ಯ, ಶಾಂತಿ, ಅಹಿಂಸಾ ತತ್ವಗಳಿಗೆ ಇಡೀ ಪ್ರಪಂಚವೇ ತಲೆ ಬಾಗಿದೆ. ಯುವಪೀಳಿಗೆ ಗಾಂಧಿಯವರ ತತ್ವ, ಸಿದ್ದಾಂತ, ಮಾನವೀಯ ಮೌಲ್ಯಗಳಲ್ಲಿ ಕೆಲವನ್ನಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

       

      ಮುದ್ದೇಬಿಹಾಳ: ಪಟ್ಟಣದ ಶಾ ಎಸ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧೀಜಿ ಕುರಿತಾದ ಕಾರ್ಯಾಗಾರವನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಲಾಯಿತು.

      Tags: #Public News#Voice Of Janata#ಗಾಂಧಿಯುಗ ಮರುಕಳಿಸಬೇಕು.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      ಮುದ್ದೇಬಿಹಾಳದಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಬಿರುಬಿಸಿಲ ಧಗೆಗೆ ವರುಣನ ತಂಪು ಸ್ಪರ್ಶ!

      March 19, 2026
      ಬಡವರ ಕಣ್ಣೀರು ಒರೆಸುವ ಕೈಗಳೇ ದೇವರಿಗರ್ಪಿಸುವ ನಿಜವಾದ ಪೂಜೆ: ಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು

      ಬಡವರ ಕಣ್ಣೀರು ಒರೆಸುವ ಕೈಗಳೇ ದೇವರಿಗರ್ಪಿಸುವ ನಿಜವಾದ ಪೂಜೆ: ಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು

      March 19, 2026
      ವಾತ್ಸಲ್ಯ ಮನೆ ನೀಡುವ ಮೂಲಕ ಸೂರು ಇಲ್ಲದವರ ಬಾಳಿಗೆ ಬೆಳಕಾಗಿದೆ

      ವಾತ್ಸಲ್ಯ ಮನೆ ನೀಡುವ ಮೂಲಕ ಸೂರು ಇಲ್ಲದವರ ಬಾಳಿಗೆ ಬೆಳಕಾಗಿದೆ

      March 19, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.