ವಿಜಯಪುರ| ವಿಶ್ವ ರಕ್ತದಾನಿಗಳ ದಿನಾಚರಣೆ
ವಿಜಯಪುರ : ನಗರದ ವಿಜಯಪುರ ರಕ್ತ ನಿಧಿ ಕೇಂದ್ರದಲ್ಲಿ. ದೇಶ ರಕ್ಷಕರ ಪಡೆ ಸಂಚಾಲಿತ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇಶ ರಕ್ಷಕರ ಪಡೆ ಸಂಸ್ಥಾಪಕರಾದ ರೋಹನ್ ಆಪ್ಟೆ ಮಾತನಾಡಿ ಕಳೆದ 5 ವರ್ಷಗಳಿಂದ ನಮ್ಮ ಸಂಘಟಣೆಯ ಪ್ರತಿ ಕಾರ್ಯಕರ್ತರು ಪ್ರತಿ 3 ತಿಂಗಳಿಗೆ ರಕ್ತದಾನ ಮಾಡತಾ ಬಂದಿದ್ದಾರೆ. ಅದರಜೊತೆ ಕರ್ನಾಟಕ, ಮಹಾರಾಷ್ಟ್ರ, ಹಾಗು ಹೈದರಾಬಾದ ಸೇರಿ 4600 ಕ್ಕೂ ಅಧಿಕ ಜನರಿಗೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ರಕ್ತ ಪಡೆಯಲು ಸಹಾಯವಾಗಿದೆ. ಜನರು ರಕ್ತದಾನ ಮಾಡುವ ಮಹತ್ವ ತಿಳಿದಕೊಳ್ಳ ಬೇಕು. ಅದೆಷ್ಟು ರಕ್ತದಾನ ಮಾಡದೆ ಇರುವ ಜನರಿಗೆ ಕೂಡ ಅವರ ಆಪ್ತರಿಗೆ ರಕ್ತ ಬೇಕಾದಾಗ ರಕ್ತದಾನ ಎಷ್ಟು ಅಮೂಲ್ಯ ಅಂತ ಗೊತ್ತಾಗುತ್ತೆ. ಆದಕಾರಣ ರಕ್ತದಾನ ಮಾಡುವ ಭಾಗ್ಯ ಸಿಕ್ಕರೆ ತಪ್ಪದೆ ಮಾಡಿ ಜೀವ ಉಳಿಸಿ ಅಂದರು.
ಆಕಾಶ ರಕ್ತ ಸಹಾಯವಾಣಿ ಅಧ್ಯಕ್ಷರಾದ ವಿಕ್ರಮ ತಾಂಬೆಕರ ಮಾತನಾಡಿ ನಮ್ಮ ದೇಶ ರಕ್ಷಕರ ಪಡೆ ಕಾರ್ಯಕರ್ತ ಆಕಾಶ ಕುಲಕರ್ಣಿ ಅವರು 2020 ರಲ್ಲಿ ವಿದ್ಯುತ್ ಅಪಘಾತದಲ್ಲಿ ಸಾವನ್ನಪ್ಪಿದ್ದು. ನೇರವಾಗಿ ಜನರ ಜೀವ ಉಳಿಸುವ ಅವರ ಒಂದು ಆಸೆಯಂತೆ ರಕ್ತ ಸಹಾಯವಾಣಿ ಕೇಂದ್ರಕ್ಕೆ ಅವರ ಹೆಸರು ಇಡುವ ಮುಖಾಂತರ ಜನರ ಸೇವೆ ಮಾಡುತ್ತಾ ಇದ್ದೇವೆ ಅಂದರು.
ದೇಶ ರಕ್ಷಕರ ಪಡೆ ಪ್ರಧಾನಕಾರ್ಯದರ್ಶಿ ಜಗದೀಶ ರೂಗಿಮಠ ಮಾತನಾಡಿ ರಕ್ತದಾನವು ಬಹಳ ಮುಖ್ಯವಾದ ಕೆಲಸ. ಇದು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ. ರಕ್ತದಾನ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಇದು ಸಮಾಜಕ್ಕೆ ಬಹಳ ಉಪಯುಕ್ತವಾಗಿದೆ. ಇಲ್ಲಿಯವರೆಗೆ ರಕ್ತದಾನದ ಮಾಡದೇ ಇರುವ ಯಾವುದೋ ಒಂದು ಭಯದಿಂದ ಹಿಂಜರಾಗುತ್ತ ಇದ್ದಾರೆ ಅದರೆ ಅಂಥವರು ಕೂಡಾ ಧೃಡ ನಿರ್ಧಾರ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಪಾಲಗೋಳ್ಳ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ದೇಶ ರಕ್ಷಕರ ಪಡೆ ಅಧ್ಯಕ್ಷಾರಾದ ಆಕಾಶ ಇಂಡಿ ಮಾತನಾಡಿ ಇವತ್ತಿನ ಯುವ ಸಮುದಾಯ ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ಸ್ಫೂರ್ತಿ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಿರಣ್ ಕೋಳುರಗಿ, ಶಿವಾನಂದ ತುಪ್ಪದ,ವಿನೋದ ಪತ್ತಾರ, ಆದಿತ್ಯ ಬಡಿಗೇರ, ಅಭಯ ಹದನುರ, ಆದಿತ್ಯ ಹಳ್ಳಿ, ರಾಘವೇಂದ್ರ ಮಿರೇಕರ, ಸಾಗರ ಭಜಂತ್ರಿ, ಪವನ ಶರ್ಮಾ, ಪ್ರಸನ್ನ ಗಣಿಯಾರ, ಕೃಷ್ಣಾ ಮಾಯಾಚಾರಿ, ವಿವೇಕ ತಾವರಗೇರಿ ರೋಹನ್ ವಿನಯ ಆಪ್ಟೆ. ಉಪಸ್ಥಿದ್ದರು