ವಿಜಯಪುರ | ವಿವಿಧ ಪಿಕೆಪಿಎಸ್ ಅವಿರೋಧ ಆಯ್ಕೆ..!
ಸಚಿವ ಶಿವಾನಂದ ಪಾಟೀಲಗೆ ಸನ್ಮಾನ
ವಿಜಯಪುರ : ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಗೆ ಸಹಕರಿಸಿದ ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಸತ್ಕರಿಸಿ ಅಭಿನಂದಿಸಿದರು.
ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಎಮ್.ಆರ್. ಪಾಟೀಲ ನೇತೃತ್ವದಲ್ಲಿ ನಗರದಲ್ಲಿರುವ ಸಚಿವರ ಗೃಹ ಕಛೇರಿಗೆ ಆಗಮಿಸಿದ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅಧ್ಯಕ್ಷರಾಗಿ ಅವರೋಧ ಆಯ್ಕೆಯಾಗಿರುವ ಅರ್ಜುಣಗಿಯ ನಿರಂಜನ ಪೂಜಾರಿ, ಝಳಕಿಯ ಶರಣಪ್ಪ ಹತ್ತಿ ಇವರು ಸಚಿವರಾದ ಶಿವಾನಂದ ಪಾಟೀಲ ಅವರನ್ನು ಸತ್ಕಾರಿಸಿ ಅಭಿನಂದಿಸಿದರು.
ಬಳ್ಳೊಳ್ಳಿ ಗಿರಿಮಲ್ಲ ಹಿರೇಕುರುಬರ, ಭತಗುಣಕಿ ಶಿಹಾಜಿ ಮಿಸಾಳೆ ಹಾಗೂ ನಂದರಗಿ ಬಸನಗೌಡ ಪಾಟೀಲ ಇವರು ಸಹ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ವಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರೂ ಆಗಿರಿವ ಎಂ.ಅರ್.ಪಾಟೀಲ ಅವರು ಸಚಿವರಿಗೆ ವಿವರಿಸಿದರು.