ಮುದ್ದೇಬಿಹಾಳ ; ವೀರಶೈವ-ಲಿಂಗಾಯಿತ ಬೇರೆ ಬೇರೆಯಲ್ಲ ಹಿಂದೆ, ಇಂದು, ಮುಂದೆ, ಮುಂದೆಂದಿಗೂ ಎರಡೂ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು ಅವರು ರವಿವಾರ ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಮಹಾಸಭಾ ಅಭಿನಂದನಾ ಹಾಗೂ ತಾಲೂಕ ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ವೀರಶೈವ ಬೇರೆ, ಲಿಂಗಾಯಿತ ಬೇರೆ ಎಂದು ಗೊಂದಲ ಸೃಷ್ಠಿಸುವುದು ಬೇಡ. ವೀರಶೈವ ಧರ್ಮಕ್ಕೆ 36 ಲಕ್ಷ ವರ್ಷಗಳ ಇತಿಹಾಸವಿದೆ ಎಂದು ಕಾಶಿ ಜಗದ್ಗುರುಗಳು ರಚಿಸಿರುವ ತಂತ್ರಜಾಲದಲ್ಲಿ ಹೇಳಲಾಗಿದೆ.
ವೀರಶೈವ-ಲಿಂಗಾಯಿತ ಸಮಾಜದಲ್ಲಿ ಕೇವಲ ಬಣಜಿಗ, ನೊಳಂಬ, ಕುಂಚಿಟಗ, ಸಾದರು ಮಾತ್ರವಿಲ್ಲ. ಲಿಂಗಾಯಿತರಲ್ಲಿ ಕಮ್ಮಾರ, ಚಮ್ಮಾರ, ಶಿವಸಿಂಪಿ, ಕುರುಬ ಹೀಗೆ ನೂರಾರು ಒಳ ಪಂಗಡಗಳು ಇವೆ. ನಾವೆಲ್ಲಾ ಒಗ್ಗಟ್ಟಾಗಿ ಸಂಗಟಿತರಾಗಬೇಕಿದೆ. ರಾಜ್ಯದಲ್ಲಿನ 7 ಕೋಟಿ ಜನಸಂಖ್ಯೆಯಲ್ಲಿ 3 ಕೋಟಿ ವೀರಶೈವ-ಲಿಂಗಾಯಿತರಿದ್ದರು. ದೇಶದ ಸಂಸತ್ನಲ್ಲಿ ಕ್ಯಾಬಿನೆಟ್ ಸ್ಥಾನಮಾನದ ಸಚಿವರು ಯಾರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಸಮಾಜದ ಏಳಿಗೆಗೆ ಬೇರೆ ಸಮಾಜದ ಮುಖಂಡರ ಬಳಿ ಅನುದಾನ ಕೇಳಲಾಗುವುದಿಲ್ಲ. ಬರುವ ಆದಾಯದಲ್ಲಿಯೇ ನಾವಿಷ್ಟು ಸಂಗ್ರಹಿಸುತ್ತಾ ಹೋದಲ್ಲಿ ಮುಂದೆ ಅದು ದೊಡ್ಡ ಪ್ರಮಾಣದ ಅನುದಾನವಾಗಲಿದೆ. ನಿಮ್ಮ ಹಣವನ್ನು ನಾವು(ರಾಜ್ಯ ಘಟಕ) ಬಳಸುವುದಿಲ್ಲ. ಸಮಾಜಕ್ಕಾಗಿಯೇ ಮೀಸಲಿರಲಿದ್ದು, ವಿನೂತನ ಕೆಲಸ ಕಾರ್ಯರೂಪಕ್ಕೆ ತರಬೇಕು’ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಘಟಕದಿಂದ ಬಸವ ಜಯಂತಿಯ ದಿನದಂದೇ ಮಹಾನ್ ಪುರುಷರ ಭಾವಚಿತ್ರಗಳನ್ನು ಒಂದೆಡೆ ಇಟ್ಟು ಆಚರಿಸಬೇಕು. ಎಲ್ಲಾ ಮಹಾನ್ ಪುರುಷರ ತತ್ವದಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ವಿಜಯಪುರ ಜಿಲ್ಲಾಧ್ಯಕ್ಷ್ಯ ವಿ ಸಿ ನಾಗಠಾಣ ಮಾತನಾಡಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಬಸವಂತರಾಯ ಗೂಳಿ, ಶರಣಪ್ಪ ಹೋಳಿ, ಬಸವರಾಜ ಲಮಾಣಿ, ಬಸವರಾಜ ಹಡಪದ, ಶರಣಪ್ಪ ಚಲವಾದಿ ಹಾಗೂ ತಾಲೂಕಿನ ನಲವತ್ತಕ್ಕೂ ಹೆಚ್ಚು ವಿವಿಧ ಸಮಾಜದ ಅಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷರಾಗಿ ವೆಂಕನಗೌಡ ಪಾಟೀಲ್, ಉಪಾಧ್ಯಕ್ಷ ಸಂಗಣ್ಣ ಕಂಚ್ಯಾಣಿ, ಪ್ರಕಾ ಎಸ್ ವಿ ಬೇವಿನಗಿಡದ, ಕೋಶಾಧ್ಯಕದ್ಯಕ್ಷರಾಗಿ ಸಂಗಣ್ಣ ಕಟ್ಟೆ ಸೇರಿದಂತೆ ಮಹಿಳಾ ಘಟಕ ,ಯುವ ಘಟಕದ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಮುಕ್ತಾಂಭಾ ,ಶ್ರೀಮತಿ ಉಮಾದೇವಿ ಬಿದರಿ,
ತಾಲೂಕ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಬಾಪುಗೌಡ ಪಾಟೀಲ್, ಮಹಾಸಭಾದ ನಿಕಟಪೂರ್ವ ನಿರ್ದೇಶಕ ಮಲ್ಲನಗೌಡ ಬಿರಾದಾರ ಇದ್ದರು ಕಾರ್ಯಕ್ರಮದಲ್ಲಿ ಎಂ ಬಿ ನಾವದಗಿ, ಬಿ ಎಂ ಹಿರೇಮಠ, ಸಂಗೀತ ನಾಡಗೌಡ, ಕಾಶಿಬಾಯಿ ರಾಂಪೂರ, ಕೆ ಎಸ್ ಬಿರಾದಾರ, ಅಶೋಕ ನಾಡಗೌಡ,ಪ್ರಭುದೇವ ಕಲಬುರಗಿ,ಬಸವರಾಜ ಮೋಟಗಿ, ಕಣ್ಣೂರ ಸರ್,ಆರ್ ಬಿ ಪಾಟೀಲ್,ಬಸನಗೌಡ ಪಾಟೀಲ್ ಸರೂರ ಅಶೋಕ ಚಟ್ಟೇರ್ ಸರಸ್ವತಿ ಪೀರಾಪೂರ, ಸೇರಿದಂತೆ ಮಹಾಸಭಾದ ವಿವಿಧ ತಾಲೂಕಿನ ಪದಾಧಿಕಾರಿಗಳು ಗಣ್ಯರು ವಿವಿಧ ಸಮಾಜದ ಅಧ್ಯಕ್ಷರು ಭಾಗವಹಿಸಿದ್ದರು.
ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿದರು ವಿದ್ಯಾವತಿ ತಡಸದ ಸ್ವಾಗತಿಸಿದರು ಸಿದ್ದರಾಜ ಹೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹೇಮಾ ಬಿರಾದಾರ ನಿರೂಪಿಸಿ ವಂದಿಸಿದರು.