ಬೆಂಗಳೂರು : ಕಳೆದ ಎರಡು ವರ್ಷಗಳ ಹಿಂದೆಯೇ ಕೇಂದ್ರ ಸರಕಾರ ತಳವಾರ ಮತ್ತು ಪರಿವಾರ ಸಮುದಾಯದ ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಿ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಹೊಸ ಶಾಸನವನ್ನೇ ರಚಿಸಿ, ಭಾರತ ರಾಜಪತ್ರ ಹೊರಡಿಸಿದ್ದು ಜಗತ್ ಜಾಹಿರಾತಾದ ವಿಷಯ…
ಆದರೆ ಈ ಬಗ್ಗೆ ಕರ್ನಾಟಕ ಸರಕಾರವು ಹಲವು ಬಾರಿ ಸುತ್ತೊಲೆಗಳನ್ನು ಹೊರಡಿಸಿ ಪ್ರಮಾಣ ಪತ್ರ ಕೊಡಲು ಆದೇಶ ನೀಡಿದ್ರೂ ಅಧಿಕಾರಿಗಳು ಮಾತ್ರ ಕುಂಟುನೆಪ ಹೇಳಿ ಜಾತಿ ಪ್ರಮಾಣ ಪತ್ರಕೊಡದೇಯಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರವಾಗಿದ್ದಾರೆ ಎಂದು ಉತ್ತರ ಕರ್ನಾಟಕದ ತಳವಾರ ಸಮುದಾಯದ ಜನರು ಹಲವು ಬಾರಿ ಹಲವಾರು ರೀತಿಯಲ್ಲಿ ಹೋರಾಟ ಮಾಡಿ ತಿಳಿಸಿದ್ದು ಸತ್ಯ ಸಂಗತಿ. ಆದರೆ ರಾಜ್ಯ ಸರಕಾರ ಮಾತ್ರ ಇಲ್ಲಿಯವರೆಗೂ ಮೌನ ಮುರಿಯಿದೇ ಇದಿದ್ದು ಈ ಸಮುದಾಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅದಕ್ಕೆ ೨೦೨೩ ರ ಸಾರ್ವತ್ರಿಕ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿಲು ಸಿದ್ದರಾಗಿದ್ದೆವೆ ಎಂಬ ಸಂದೇಶ ಕೂಡಾ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯವೂ ಹರೀದಾಡುತ್ತಿದೆ.
ಹೌದು ಇದೆಲ್ಲಾ ವಿಷಯ ಏಕೆ ಅಂತಿರಾ..? ಬನ್ನಿ…ನೋಡೋಣ..!
ಹೌದು ಕರ್ನಾಟಕ ಸರಕಾರ 29-1-2022 ರಂದು ಸುತ್ತೋಲೆ ಹೋರಡಿಸಿದ ಪ್ರಕಾರ ಉತ್ತರ ಕರ್ನಾಟಕ ಭಾಗದ ತಹಶಿಲ್ದಾರರು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದಿರುವುದು ಸರಕಾರದ ಗಮನಕ್ಕೆ ಬಂದಿದೆಯೇ ಎಂದು ಎಮ್ ಎಲ್ ಸಿ ಸಾಬಣ್ಣ ತಳವಾರ ಅವರು ವಿಧಾನ ಮಂಡಲದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರಕಾರಕ್ಕೆ ಪ್ರಶ್ನೆ ಮಾಡಿದರು. ಹಾಗೇ ಮುಂದುವರಿದು ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಬರುವ ಪ್ರವರ್ಗ-೧ ರ ಪಟ್ಟಿಯಿಂದ ತಳವಾರ ಜಾತಿಯನ್ನು ತೆಗೆದು ಹಾಕಲು ವಿಳಂಬ ಏಕೆ..? ತಳವಾರ ಪರಿಶಿಷ್ಟ ಪಂಗಡ & ಪ್ರವರ್ಗ-೧ ಎರಡೂ ಪಟ್ಟಿಯಲ್ಲಿಯಿರು – ವುದರಿಂದ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡುತ್ತಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿದೆಯೇ..? ಸರಕಾರದ ಭರವಸೆಯಂತೆ ಇನ್ನೂ ಎಷ್ಟು ದಿನ ಉತ್ತರ ಕರ್ನಾಟಕದ ತಳವಾರ ಸಮುದಾಯದ ಜನರು ಕಾಯಬೇಕು. ಧೀರ್ಘ ಕಾಲಿನ ಹೋರಾಟಕ್ಕೆ ಸರಕಾರದ ಕೂಡಲೇ ಪರಿಹಾರ ಕ್ರಮಗಳೇನು ಎಂಬ ಪ್ರಶ್ನೆ ಗಳ ಸುರಿಮಳೆ ಸಾಬಣ್ಣ ತಳವಾರ ವಿಧಾನ ಮಂಡಲದಲ್ಲಿ ಅಧಿವೇಶನ ಧ್ವನಿ ಮೊಳಸಿದರು.
ಇನ್ನೂ ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವರು, ಉತ್ತರ ಕರ್ನಾಟಕದಲ್ಲಿ ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ಕೊಡದಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿರುವುದಿಲ್ಲ. ಭಾರತ ಸರಕಾರವು ದಿನಾಂಕ 19-3-2020 ರ ಅಧಿಸೂಚನೆಯಲ್ಲಿ ನಾಯ್ಡ, ನಾಯಕ ಜಾತಿಯ ಪರ್ಯಾಯ ಸಮುದಾಯಗಳೆಂದು ಪರಿವಾರ & ತಳವಾರ ಜಾತಿಗಳನ್ನು ರಾಜ್ಯ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರದ ಸುತ್ತೋಲೆ ಸಂಖ್ಯೆ ಸಕಇ 23 ಎಸ್ಎಡಿ 2009 ದಿನಾಂಕ 31-08-2020 ರಲ್ಲಿ ನೈಜವಾದ ಪರಿಶಿಷ್ಟ ಪಂಗಡ ಜಾತಿಗೆ ಸೇರಿದ ಪರಿವಾರ & ತಳವಾರ ಜಾತಿ ವ್ಯಕ್ತಿಗಳಿಗೆ ಯಾವುದೇ ತೊಂದರೆ ಯಾಗದಂತೆ ಹಾಗೂ ನಿಗದಿತ ಅವಧಿಯೊಳಗೆ ಜಾತಿ ಪ್ರಮಾಣ ಪತ್ರ ಕೊಡಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.
ಅದರಂತೆ ದಿನಾಂಕ 28-05-2020 ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ದಿನಾಂಕ 29-01-2022_ ಸಹ ಸುತ್ತೊಲೆ ಹೊರಡಿಸಿ ಕೇಂದ್ರ ಸರಕಾರದ ಅಧಿಸೂಚನೆ ಹಾಗೂ ರಾಜ್ಯ ಸರಕಾರ ದಿನಾಂಕ 28-05-2020 ರ ಅಧಿಸೂಚನೆ ಅನ್ವಯ ಜಾತಿ ಪ್ರಮಾಣ ವಿತರಿಸಲು ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೂ ಮುಂದುವರಿದು ನಾಯ್ಕಡ, ನಾಯಕ ಜಾತಿಯ ಪರ್ಯಾಯ ಸಮುದಾ – ಯಗಳೆಂದು ಪರಿಗಣಿಸಿರುವ ತಳವಾರ ಮತ್ತು ಪರಿವಾರ ಜಾತಿಗೆ ಸೇರಿದವರು ಕೇಂದ್ರ ಸರಕಾರದ ಆದೇಶ ದಂತೆ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಹಾಗೂ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳ ಮೀಸಲಾತಿ ಅಧಿನಿಯಮ 1990 ನಿಯಮಗಳು 1992 ರ ಪ್ರಕಾರ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ವಿತರಿಸುವ ಕೋರಿ ಅರ್ಜಿಯನ್ನು ಸಮುಚಿತ ಮಾರ್ಗದಲ್ಲಿ ತಹಶಿಲ್ದಾರರ ಗೆ ಸಲ್ಲಿಸಬೇಕು. ಸದರಿ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಮೆಲ್ಕಂಡ ನಿಯಮಗಳ ಪ್ರಕಾರ ಜಾತಿ ಪ್ರಮಾಣ ಪತ್ರ ವಿತರಿಸುತ್ತಾರೆ.
ತಳವಾರ & ಪರಿವಾರ ಪರಿಶಿಷ್ಟ ಪಂಗಡಕ್ಕೆ ಸೆರ್ಪೆಡೆಗೊಂಡಿದ್ದರಿಂದ ಪ್ರವರ್ಗ ೧ ರ ಪಟ್ಟಿಯಿಂದ ತೆಗೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.