ಇಂದಿನ ಯುವಜನತೆ ನಮ್ಮ ರಾಷ್ಟ್ರದ ಹೃದಯ ಬಡಿತ
ವಿಜಯಪುರ: ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕವಾಗಿ ಮುಂದುವರೆಯುತ್ತಿರುವ ದಿನಗಳಲ್ಲಿ ಪ್ರಸ್ತುತ ಉದ್ಯೋಗ ಅರ್ಹತೆಗಳನ್ನು ಗಳಿಸಿಕೊಂಡಾಗ ಯಾವದೇ ಉದ್ಯೋಗ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಮತಿ ರಾಜು ಬಾಗಲಕೋಟ ಅವರು ವಿದ್ಯಾರ್ಥಿನಿಯರ ಸಮೂಹಕ್ಕೆ ಕರೆ ನೀಡಿದರು.
ಅವರು ಇಂದಿಲ್ಲಿ ಸಿಕ್ಯಾಬ್ ಎ.ಆರ್.ಎಸ್ ಇನಾಮದಾರ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇಂದಿನ ಯುವಜನತೆ ನಮ್ಮ ರಾಷ್ಟçದ ಹೃದಯ ಬಡಿತವಾಗಿದ್ದು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ ಅದು ಸರಿಯಾದ ರೀತಿಯಲ್ಲಿ ಬಳಕೆಯಾದರೆ ಉತ್ತಮ ಸಂಪನ್ಮೂಲವಾಗುತ್ತದೆ ಎಂದರು. ಗ್ರಂಥಾಲಯ ಪುಸ್ತಕಗಳು ಹಾಗೂ ಅಂತರ್ಜಾಲದ ಸರಿಯಾದ ಬಳಕೆಯಾಗದರೆ ವಿದ್ಯಾರ್ಥಿಗಳನ್ನು ಯಾವದೇ ಉದ್ಯೋಗಕ್ಕೆ ಸಿದ್ಧಗೊಳಿಸುತ್ತವೆ, ವಿದ್ಯಾರ್ಥಿ ವೇತನವನ್ನು ರಾಜ್ಯ, ಕೇಂದ್ರ ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಮತ್ತು ಕಾರ್ಪೋರೇಟ ಕಂಪನಿಗಳು ನೀಡುತ್ತಿದ್ದು ಅವುಗಳನ್ನು ಪಡೆಯುವಲ್ಲಿ ವಿದ್ಯಾರ್ಥಿನಿಯರು ಸಫಲರಾಗಬೇಕೆಂದು ಕಿವಿಮಾತು ಹೇಳಿದರು. ಶಿಕ್ಷಣದ ಜೊತೆ ನೈತಿಕ ಮೌಲ್ಯಗಳು ಕೂಡ ಮಹತ್ವದಾಗಿದ್ದು ಅವುಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣ ಎಂದರು.
ಇನ್ನೋರ್ವ ಅತಿಥಿ ರೇಡಿಯೆಂಟ್ ಪ.ಪೂ ಕಾಲೇಜಿನ ಪ್ರಾಚರ್ಯ ಪ್ರೊ. ಕೆ.ಎಂ. ಗುನ್ನಾಪೂರ ಮಾತನಾಡಿ ಬರೀ ಫಲಿತಾಂಶ ಅಥವಾ ಪದವಿ ನಮ್ಮನ್ನು ದಕ್ಷರನ್ನಾಗಿ ಮಾಡುವುದಿಲ್ಲ. ಬದಲಾಗಿ ನಮ್ಮ ಸಾಮರ್ಥ್ಯಗಳು ವಿಷಯ ಜ್ಞಾನ, ಕೌಶಲ್ಯಗಳು ನಮ್ಮನ್ನು ಯಶಸ್ಸಿನ ಕಡೆ ಒಯ್ಯುತ್ತವೆ ಎಂದು ನುಡಿದರು. ವೇದಿಕೆಯ ಮೇಲೆ ಉಪಸ್ಥಿತರಿದ್ದ ಇಕ್ರಾ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಮತಿ ರಿಹಾನಾ ಹುಂಡೇಕಾರ ಮಾತನಾಡಿ ಅಧ್ಯಾಪನ, ಬೋಧನೆ ಒಂದು ಉದ್ಯೋಗವಲ್ಲ, ಅದೊಂದು ಸೇವೆ ಎಂದು ನುಡಿದರು. ತಂದೆ, ತಾಯಿ- ಶಿಕ್ಷರನ್ನು ಗೌರವಿಸುವದರಿಂದ ನಾವು ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಚರ್ಮನ ರಿಯಾಜ್ ಫಾರೂಖಿ ಅವರು ಮಾತನಾಡಿ ಯಶಸ್ಸು ಧಿಢೀರನೇ ಬರುವಂತಹದ್ದಲ್ಲ, ಸಣ್ಣ ಸಣ್ಣ ಹೆಜ್ಜೆಗಳು ದೀರ್ಘ ಹಾದಿಯನ್ನು ಕ್ರಮಿಸುವಂತೆ ಬರುತ್ತದೆ. ನಾವು ಶಿಕ್ಷಣದ ಮಹಾನ್ ಪರಂಪರೆ ಹೊಂದಿದ್ದ ತಕ್ಷಶಿಲೆ ಹಾಗೂ ನಲಂದಾ ಸಂಸ್ಕೃತಿಗಳನ್ನು ನೆನಪಸಿಕೊಳ್ಳಬೇಕು, ಒಂದು ಕಾಲಕ್ಕೆ ಇಡೀ ಜಗತ್ತಿನ ಜನ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿದ್ದರು ಎಂದು ಹೇಳಿದರು.
ವೇದಿಕೆಯ ಮೇಲೆ ಬೆನಕಟ್ಟಿ ಪ. ಪೂ. ಕಾಲೇಜಿನ ಕರ್ಯದರ್ಶಿ ಶ್ರೀಮತಿ ಹೇಮಾ ಬೆನಕಟ್ಟಿ ಉಪಸ್ಥಿತರಿದ್ದರು. ಕರ್ಯಕ್ರಮದಲ್ಲಿ ಆರಂಭದಲ್ಲಿ ಕು. ನೂರುಲ್ ಹುದಾ ಪವಿತ್ರ ಖುರಾನ್ ಪಠಿಸಿದರು. ಕು. ಪೃಥ್ವಿ ಸೊರಡಿ ಕು. ವಿದ್ಯಾ ಕೊಕಟನೂರ, ಕು. ವಿಜಯಲಕ್ಷಿö್ಮ ಕಾಖಂಡಕಿ ಭಗವದ್ಗೀತೆಯನ್ನು ವಾಚಿಸಿದರು. ಉಪಪ್ರಾಚರ್ಯರಾದ ಡಾ. ಹಾಜಿರಾ ಪರವೀನ್ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.
ಕಾಲೇಜಿನ ಪ್ರಾಚರ್ಯರಾದ ಡಾ. ಎಚ್. ಕೆ. ಯಡಹಳ್ಳಿ ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು. ಸಾಂಸ್ಕೃತಿಕ ವಿಭಾಗದ ಪುರಸ್ಕಾರಗಳನ್ನು ಡಾ. ಮಲ್ಲಿಕಾರ್ಜುನ ಮೇತ್ರಿ, ಪ್ರತಿಭಾವಂತ ವಿದ್ಯಾರ್ಥಿಗಳ ನಗದು ಬಹುಮಾನ ಪುರಸ್ಕಾರವನ್ನು ಪೊ. ಎಂ. ಎಂ. ಬಾಗಲಕೊಟ ಹಾಗೂ ಕ್ರೀಡಾ ವಿಭಾಗದ ಪ್ರಶಸ್ತಿಗಳನ್ನು ಡಾ ಮುಸ್ತಾಕ ಅಹ್ಮದ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿಯರಾದ ಕು. ಅಫ್ಸಾನಾ ಸಾಂಗ್ಲೀಕರ ಹಾಗೂ ಕು. ದೀಪಾ ಕೊಕಟನೂರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು. ಅಸ್ಮಾ ನಾಗರದಿನ್ನಿ ಭಾವಗೀತೆ ಪ್ರಸ್ತುತ ಪಡಿಸಿದರು.
ಕೊನೆಯಲ್ಲಿ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕರ್ಯದರ್ಶಿ ಕು. ಮಿನಾಜ್ ಹಳ್ಳಿ ವಂದನಾರ್ಪಣೆ ನೆರೆವೇರಿಸಿದರು. ರಾಷ್ಟçಗೀತೆಯೊಂದಿಗೆ ಕರ್ಯಕ್ರಮ ಮುಕ್ತಾಯವಾಯಿತು.


















