ಆಧ್ಯಾತ್ಮಿಕ ಪರಿಸರದಿಂದ ಒತ್ತಡದ ಜೀವನದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಅಧ್ಯಾತ್ಮ ಚಿಂತನೆಗಳಿಂದ ಮಾತ್ರ ಸಾಧ್ಯ.
ವಿಶ್ವದ ಅತ್ಯಂತ ಶುಭ ಹಬ್ಬವಾಗಿದ್ದು, ನಿರಾಕಾರ, ಬೆಳಕಿನ ಬಿಂದು, ಪರಮಪಿತ, ಪರಮಾತ್ಮ ಶಿವನ ಪುನರ್ಜನ್ಮವನ್ನು ಸ್ಮರಿಸಲು ಆಚರಿಸಲಾಗುತ್ತದೆ.
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಆಧ್ಯಾತ್ಮಿಕ ಪರಿಸರದಿಂದ ಒತ್ತಡದ ಜೀವನದಲ್ಲಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಅಧ್ಯಾತ್ಮ ಚಿಂತನೆಗಳಿಂದ ಮಾತ್ರ ಸಾಧ್ಯವೆಂದು ಡಾ.ಬಸನಗೌಡ ಕರೆಕಲ್ ( ಪಾಟೀಲ) ಹೇಳಿದರು ಗುರವಾರ ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯ ಓಂ ಶಾಂತಿ ಭವನದಲ್ಲಿ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಜೀವನದಲ್ಲಿ ಇದ್ದುದರಲ್ಲಿ ತಪ್ತಿ ಪಡದ ಮನುಷ್ಯ ಏನಿದ್ದರೂ ತಪ್ತಿ ಹೊಂದಲಾರ. ಯಾಕೆಂದರೆ ಬದುಕಿನ ನಿಜ ತಿರುಳು ಅರಿಯದೇ ಮನಸ್ಸನ್ನು ಹೊಲಸು ಮಾಡಿಕೊಂಡಿದ್ದಾನೆ. ಸಮಾಧಾನ, ನೆಮ್ಮದಿ, ಸಂತೋಷ ಕಳೆದುಕೊಂಡಿದ್ದಾನೆ. ಇದನ್ನು ಯಾವುದರಿಂದ ಪಡೆದುಕೊಳ್ಳಬೇಕೆಂಬ ರೀತಿ ತಿಳಿಯದೇ ಆಸೆಗಳ ಬೆನ್ನು ಹತ್ತಿ ಹುಚ್ಚನಂತೆ ಅಲೆಯುತ್ತಿದ್ದಾನೆ ಎಂದು ತಾವು ಚಿಕ್ಕವರಿದ್ದಾಗ ಓಂ ಶಾಂತಿ ಗೆ ಬರುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.
ರಾಜಯೋಗಿನಿ ಬ್ರಹ್ಮಕುಮಾರಿ ಮಂಜುಳಾ ಅಕ್ಕನವರು ಹಾಗೂ ರಾಜಯೋಗಿನಿ ಬ್ರಹ್ಮಕುಮಾರಿ ಶೋಭಾ ಅಕ್ಕನವರು ಮಾತನಾಡಿ ಶಿವ ಜಯಂತಿ ಅಥವಾ ಶಿವ-ರಾತ್ರಿಯ ಶುಭ ಹಬ್ಬದ ಸಂದರ್ಭದಲ್ಲಿ ದೈವಿಕ ಸಂದೇಶವು ವಿಶ್ವದ ಅತ್ಯಂತ ಶುಭ ಹಬ್ಬವಾಗಿದ್ದು, ನಿರಾಕಾರ, ಬೆಳಕಿನ ಬಿಂದು, ಪರಮಪಿತ, ಪರಮಾತ್ಮ ಶಿವನ ಪುನರ್ಜನ್ಮವನ್ನು ಸ್ಮರಿಸಲು ಆಚರಿಸಲಾಗುತ್ತದೆ. ಎಲ್ಲಾ ಆತ್ಮಗಳ ಪರಮಪಿತ, ದೇವರು ಶಿವ, ಧರ್ಮದ ತೀವ್ರ ಅವನತಿಯ ಸಮಯದಲ್ಲಿ ಗೀತೆಯ ನಿಜವಾದ ಜ್ಞಾನವನ್ನು ನೀಡುವ ಮೂಲಕ, ಮೂಲ ಆದಿ ಸನಾತನ ದೇವತೆ ಧರ್ಮವನ್ನು ಪುನಃ ಸ್ಥಾಪಿಸಿದರು
ದೇವರು ಯಾವಾಗಲೂ ತನ್ನ ನಿರಾಕಾರ ದೈವಿಕ ಬೆಳಕಿನ ರೂಪದಲ್ಲಿರುವುದರಿಂದ, ದೇವದೂತರ ಅಥವಾ ಮಾನವ ರೂಪವನ್ನು ಹೊಂದಿಲ್ಲ; ನಿರಂತರವಾಗಿ ಬೆಳಕಿನ ಮೂಲ ಮತ್ತು ನೈಸರ್ಗಿಕ ರೂಪದಲ್ಲಿ ಅಸ್ತಿತ್ವದಲ್ಲಿರುತ್ತಾನೆ ಎಂದರು
ಪ್ರಾಸ್ತಾವಿಕವಾಗಿ ಮಾತನಾಡಿದ ಗಣ್ಯ ಉದ್ಯಮಿ ರಾಜೇಂದ್ರ ಭೋಸಲೆ ಆಧ್ಯಾತ್ಮ ಚಿಂತನೆಯಿಂದ ಆತ್ಮ ಶಾಂತಿ ಸಿಗುತ್ತದೆ. ದೇವರ ನಾಮ ಸ್ಮರಣೆಯಿಂದ ಆತ್ಮ ಶಕ್ತಿ ಹೆಚ್ಚುತ್ತದೆ ಕಾಯಕದಲ್ಲಿ ಪ್ರಾಮಾಣಿಕತೆ ಇರಬೇಕು. ಆಚಾರ, ವಿಚಾರದಲ್ಲಿ ಪರಿಶುದ್ಧತೆ ಇರಬೇಕು. ಆಗ ವಿಶ್ವವನ್ನೇ ಗೆಲ್ಲುವ ಶಕ್ತಿ ಬರುತ್ತದೆ ಎಂದರು.
ಮಹಾ ಶಿವರಾತ್ರಿ ನಿಮಿತ್ತ ಪಟ್ಟಣದ ಓಂ ಶಾಂತಿಯಲ್ಲಿ ಫೆ 29 ವರಗೆ ಪ್ರತಿ ನಿತ್ಯ ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ವರಗೆ ಲೇಸರ್ ಲೈಟಿಂಗ್ ಮೂಲಕ ಜ್ಯೋತಿರ್ಲಿಂಗ ದರ್ಶನ ಹಾಗೂ ಸಂದೇಶದ ವ್ಯವಸ್ಥೆಯನ್ನು ಸಾರ್ವಜನಿಕ ದರ್ಶನಕ್ಕೆ ಮಾಡಲಾಗಿದೆ
ಮಹಾಶಿವರಾತ್ರಿ ನಿಮಿತ್ತ ಈಶ್ವರಿ ವಿದ್ಯಾಲಯದ ಧ್ವಜಾರೋಹಣ ಡಾ.ಬಿ ಎಸ್ ಕರೆಕಲ್ ಪಾಟೀಲ ಹಾಗೂ ಬ್ರಹ್ಮಕುಮಾರಿಯರು ನೇರವೇರಿಸಿದರು ಈ ವೇಳೆ ಭಾರತಿ ಬೋಸಲೇ, ಸುನಂದಾ ಬೋಸಲೆ, ಸುನಿತಾ ಬೋಸಲೆ, ಪವಿತ್ರ ಸುಕಾಲಿ, ಶ್ರೀದೇವಿ ಕುಂಬಾರ, ಶ್ರೀದೇವಿ ರಾಂಪೂರ, ಸುಜಾತಾ ಚಳಗೇರಿ, ಸರಸ್ವತಿ ಪೀರಾಪೂರ, ಬಸವರಾಜ ಸಾವಳಗಿ, ನೀಲಪ್ಪ ಢವಳಗಿ , ನಾಡಗೌಡ ಸರ್, ಪವನ ಸುಕಾಲಿ, ನಂದಪ್ಪ ಕುಂಬಾರ, ಮಲಕಾಜಪ್ಪ ಪೂಲೇಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮುದ್ದೇಬಿಹಾಳ : ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯ ಓಂ ಶಾಂತಿ ಭವನದಲ್ಲಿ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



















