ವಿಕಲ ಚೇತನರು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶ ಸರಕಾರದ್ದು : ಎಸಿ ಅಬೀದ ಗದ್ಯಾಳ
ಇಂಡಿ : ವಿಕಲಚೇತನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕುರಿತು ಜಾಗೃತಿ ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವದು ಸರಕಾರದ ಉದ್ದೇಶವಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಅಖಿಲ ಕರ್ನಾಟಕ ವಿಕಲ ಚೇತನರ ಒಕ್ಕೂಟ ಇಂಡಿ ಇವರ ಆಶ್ರಯದಲ್ಲಿ ನಡೆದ ವಿಕಲ ಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿಕಲ ಚೇತನರು ತಾವು ಯಾರಿಗೂ ಕಮ್ಮಿ ಇಲ್ಲ ಎಂಬAತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳ ಸಾಬೀತು ಮಾಡಿದ್ದಾರೆ. ಮಾತ್ರವಲ್ಲದೆ ಆತ್ಮ ಸ್ಥೆöÊರ್ಯವನ್ನು ಹೆಚ್ಚಿಸಿ ಕೊಳ್ಳುವ ಮೂಲಕ ಇತರರಿಗೆ ಮಾದರಿ ಯಾಗಿದ್ದಾರೆ ಎಂದರು.
ಸರಕಾರಗಳು ವಿಕಲಚೇತನರನ್ನು ಮುಖ್ಯ ವಾಹಿನಿಗೆ ಕರೆ ತರಲು ಹಾಗೂ ಸ್ವಾವಲಂಬಿಗಳಾಗಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದಕ್ಕೆ ಖಾಸಗಿ ಸಂಸ್ಥೆಗಳು ಕೂಡ ಕೈ ಜೊಡಿಸಬೇಕು ಎಂದರು.
ಶಾಸಕರ ಪುತ್ರ ವಿಠ್ಠಲಗೌಡ ಪಾಟೀಲ, ಅಂತರ ರಾಷ್ಟಿçÃಯ ಕ್ರೀಡಾಪಟು ರಾಜೇಶ ಪವಾರ,ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡಗಡ್ಡಿ ,ಅಖಿಲ ಕರ್ನಾಟಕ ವಿಕಲ ಚೇತನ ಒಕ್ಕೂಟದ ಇಂಡಿ ಘಟಕದ ಅಧ್ಯಕ್ಷ ಎಸ್.ಎಂ.ಮಕಾನದಾರ, ಎಮ್.ಆರ್.ಡಬ್ಲೂ ಇಂಡಿ ಪರಸುರಾಮ ಭೋಸಲೆ, ಪ್ರಧಾನ ಕಾರ್ಯದರ್ಶಿ ಶಿವಲಿಂಗಪ್ಪ ನಾಯ್ಕೋಡಿ, ಪ್ರಕಾಶ ಐರೋಡಗಿ , ಬಸವರಾಜ ಗೊರನಾಳ ಮಾತನಾಡಿದರು.
ಸಮಾರಂಭದಲ್ಲಿ ಬಾಬುಶಾ ಹೊಸಮನಿ, ಸಿದ್ದಪ್ಪ ಗುಲೆ, ಪುಂಡಲೀಕ ಪೂಜಾರಿ, ಮಹಾನಂದಾ ಬಂಡಿವಡ್ಡರ, ಶ್ರೀದೇವಿ ಹಳಕೆ, ಕಲಾವತಿ ಹುಳ್ಳೆ, ಶಿವಕಾಂತವ್ವ ಕುಂಬಾರ, ಜ್ಞಾನೇಶ್ವರ ಠೋಕೆ, ನಿಂಗರಾಜ ಬಿಸನಾಳ, ಪಾಂಡು ರಾಠೋಡ, ಮಲ್ಲಪ್ಪ ಬನಸೋಡೆ, ಬಾಬು ಸಂಗೋಗಿ, ಭರಮಲಿಂಗ ಪೂಜಾರಿ, ಅಮಸಿದ್ದ ಬಗಲಿ, ರೇಖಾ ಕ್ಷತ್ರಿ, ಶಿವಾನಂದ ನಾಗರಹಳ್ಳಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಗುರುಭವನದಲ್ಲಿ ಅಖಿಲ ಕರ್ನಾಟಕ ವಿಕಲ ಚೇತನರ ಒಕ್ಕೂಟ ಇಂಡಿ ಇವರ ಆಶ್ರಯದಲ್ಲಿ ನಡೆದ ವಿಕಲ ಚೇತನ ದಿನಾಚರಣೆ ಕಾರ್ಯಕ್ರಮದಲ್ಲಿ ಎಸಿ ಅಬೀದ ಗದ್ಯಾಳ ಮಾತನಾಡಿದರು.



















