ಶಿಕ್ಷಕರ ಸಹಕಾರಿ ಸಂಘ “ಸಹಕಾರಿ ರಂಗದಲ್ಲಿ ೧೦೫ ವರ್ಷಗಳ ಪೂರೈಕೆ ಹಾಗೂ ಸಾಮನ್ಯ ಸಭೆ
ಇಂಡಿ: ಸಹಕಾರಿ ರಂಗದಲ್ಲಿ ೧೦೫ ವರ್ಷಗಳ ಹಿಂದೆ ತಾಲೂಕಿನ ಶಿಕ್ಷಕರ ಸಂಘದ ನಾಯಕರು ದೂರದೃಷ್ಟಿಯಿಂದ ಸಹಕಾರಿ ಸಂಘ ಸ್ಥಾಪನೆಯಾಗಿ ಹೆಮ್ಮರವಾಗಿ ಬೆಳೆದು ಇಂದು ಶಿಕ್ಷಕರ ಆಪತ್ಕಾಲದಲ್ಲಿ ರ್ಥಿಕವಾಗಿ ಶಕ್ತಿ ತುಂಬುತ್ತಿರುವುದು ಶ್ಲಾಘನೀಯ ಎಂದು ಇಂಡಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಎಸ್ ಆರ್ ನಡಗಡ್ಡಿ ಅವರು ಹೇಳಿದರು.
ಅವರು ಇಂದು ಇಂಡಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ೧೦೫ನೇ ವರ್ಷದ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಯುರೋಪಿನಲ್ಲಿ ಕೈಗಾರಿಕೋದ್ಯಮಗಳು ಶೋಷಣೆ ಮಾಡುತ್ತಿರುವಾಗ ಅದನ್ನು ವಿರೋಧಿಸಿ ಪರ ಕರ್ಮಿಕರು ಸಹಕಾರ ಮಾಡಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಹಕಾರಿ ರಂಗ ಹುಟ್ಟು ಹಾಕಿದರು ಸ್ವತಂತ್ರ ಪರ್ವದಲ್ಲಿ ನಮ್ಮ ತಾಲೂಕಿನ ಶಿಕ್ಷಕರ ಸಂಘದ ನಾಯಕರುಗಳು ದೂರ ದೃಷ್ಟಿಯಲ್ಲಿ ಇಟ್ಟುಕೊಂಡು ಶಿಕ್ಷಕರಿಗೆ ಕಷ್ಟಕಾಲದಲ್ಲಿ ಸಹಾಯವಾಗಲೆಂದು ಸಹಕಾರಿ ಸಂಘ ಸ್ಥಾಪನೆ ಮಾಡಿದ್ದಾರೆ ಇಂದು ಅದು ಹೆಮ್ಮರವಾಗಿ ಬೆಳೆದು ೨೦೨೪-೨೫ನೇ ಸಾಲಿನಲ್ಲಿ ೩೮ ಲಕ್ಷ ಲಾಭ ಗಳಿಸಿರುವುದು, ಹಾಗೂ ಉಪಾಧ್ಯಕ್ಷರ ಪ್ರಾಸ್ತಾವಿಕ ಮಾತುಗಳಲ್ಲಿ ಸಂಘದ ಸಾಧನೆ ಉದ್ದೇಶಿತ ಗುರಿಗಳನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿಯೇ ಇದೊಂದು ಉತ್ತಮ ಸಹಕಾರಿ ಸಂಘವಾಗುತ್ತದೆ.ಸಾಲಪಡೆದು ಸಕಾಲದಲ್ಲಿ ಮರುಪಾವತಿಸಿದರೆ ಸಂಘ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ನೂತನ ಆಡಳಿತ ಮಂಡಳಿಯವರು ಇನ್ನಷ್ಟು ಶಿಕ್ಷಕರ ಸ್ನೇಹಿಯಾಗಿ ಕರ್ಯನರ್ವಹಿಸಲಿ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಶ್ರೀ ಪಿ ಜಿ ಕಲ್ಮನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಯುರೋಪಿನಲ್ಲಿ ಹುಟ್ಟಿಕೊಂಡ ಸಹಕಾರಿ ರಂಗ ೧೯೦೫ರಲ್ಲಿ ಏಷ್ಯಾ ಖಂಡದಲ್ಲೆ ಪ್ರಥಮ ರ್ನಾಟಕದ ಗದಗಿನ ಕಣಗಿನಹಾಳದಲ್ಲಿ ಕೃಷಿಕನಾಗಿರುವ ಶ್ರೀ ಸಿದ್ದನಗೌಡ ಪಾಟೀಲ ಅವರು ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಥಮ ಸಹಕಾರಿ ಸಂಘವನ್ನು ಸ್ಥಾಪಿಸಿದರು ಅದಾದ ಕೇವಲ ೨೦ ರ್ಷಗಳಲ್ಲೆ ತಾಲೂಕಿನ ಆಗಿನ ಶಿಕ್ಷಕರ ಸಂಘದ ನಾಯಕರಾದ ಶ್ರೀ ನಾಡಗೌಡ್ ಸರ್ ಹಾಗೂ ಹಲವು ನಾಯಕರು ದೂರ ದೃಷ್ಟಿಯನ್ನಿಟ್ಟುಕೊಂಡು ನಮ್ಮ ಶಿಕ್ಷಕರು ಯಾರ ಬಳಿಯೂ ಕೈ ಒಡ್ಡದೆ ಸ್ವಾಭಿಮಾನದ ಬದುಕು ಸಾಗಿಸಲೆಂದು ಕಷ್ಟದಲ್ಲಿರುವ ಶಿಕ್ಷಕರಿಗೆ ಸಹಕಾರಿಯಾಗಲೆಂದು ೧೯೨೦ ರಲ್ಲಿ ಈ ಸಂಘವನ್ನು ಸ್ಥಾಪಿಸಿದರು. ನಂತರ ಅಂಕಲಗಿ ಸರ್, ಅವರು ಇತ್ತೀಚಿಗೆ ಗಿಡಗಂಟಿ ಸರ್ ಅವರು ಗಟ್ಟಿಯಾಗಿ ಮುನ್ನಡೆಸಿಕೊಂಡು ಬಂದಿದ್ದು ನಂತರ ಮಾಶ್ಯಾಳ ಸರ್,ಚಾಂದಕವಟೆ ಸರ್ ಮುನ್ನಡೆಸಿಕೊಂಡು ಬಂದಿದ್ದು ಕಳೆದ ರ್ಷ ಸಂಘದ ಭವ್ಯವಾದ ಕಟ್ಟಡದ ಉದ್ಘಾಟನೆ ಹಾಗೂ ಶತಮಾನೋತ್ಸವ ಆಚರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ನೂತನ ಅಧ್ಯಕ್ಷರ ನೇತೃತ್ವ, ನರ್ದೇಶಕರ ಸಹಕಾರದೊಂದಿಗೆ ಎಲ್ಲ ಸದಸ್ಯರಿಗೆ ಪಾಸ ಪುಸ್ತಕಗಳನ್ನು ವಿತರಿಸಲಾಗಿದೆ , ಈ ಹಿಂದೆ ಚುನಾವಣೆ ಸಮಯದಲ್ಲಿ ಎರಡು ಕೋಟಿ ಅಷ್ಟು ಠೇವಣಿಯ ಹಣವನ್ನು ವಿರೋಧಿಗಳು ತಗಿಸಿದರು ಆದರೆ ಈಗ ನಾವು ಮತ್ತೆ ಎರಡೇ ತಿಂಗಳಲ್ಲಿ ೧.೭೫ ಕೋಟಿ ರೂ ಠೇವಣಿ ಇರಿಸಲಾಗಿದೆ, ಸೊನ್ನೆ ಕಟ ಬಾಕಿ ಹೊಂದಲು ಸಾಲ ವಸೂಲಾತಿ ಅಭಿಯಾನ ಹಮ್ಮಿಕೊಳ್ಳುವುದು,ಖಆ ಯೋಜನೆಯನ್ನು ಪ್ರಾರಂಭಿಸುವುದು, ತಮ್ಮ ಖಾತೆಯ ವೈವಾಟಿನ ಮಾಹಿತಿಯನ್ನು ಮೊಬೈಲ್ ಗೆ ಸಂದೇಶ ಕಳುಹಿಸುವುದು ಸೇರಿದಂತೆ ಹಲವು ಶಿಕ್ಷಕರ ಸ್ನೇಹಿ ಯೋಜನೆಗಳನ್ನು ಕರ್ಯಗತಗೊಳಿಸಲು ಗೌರವಾನ್ವಿತ ಸದಸ್ಯರು ಸಹಕಾರ ನೀಡಬೇಕು ಹಾಗೂ ನೂತನ ಆಡಳಿತ ಮಂಡಳಿಯವರಿಗೆ ಆಶರ್ವದಿಸಿ ಅಧಿಕಾರ ನೀಡದ ತಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರರಾಗಿ,ಚುತಿಬರದಂತೆ ಕರ್ಯನರ್ವಹಿಸುತ್ತೇವೆ ಎಂದು ಹೇಳಿದರು.
ಕರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಘದ ಅಧ್ಯಕ್ಷರಾದ ಶ್ರೀ ಎಸ್ ವ್ಹಿ ಹರಳಯ್ಯ ಅವರು ವರ್ಷಿಕ ವರದಿ ಮಂಡಿಸಿ ೨೦೨೪ ೨೫ ನೇ ಸಾಲಿನ ಅಡಾವೆ ಪತ್ರಿಕೆಗೆ ಅನುಮೋದನೆ ಪಡೆದು ಸಂಘವು ೩೮,೮೪,೬೮೧ ರೂ ನಿವ್ವಳ ಲಾಭ ಗಳಿಸಿ ೮ % ಲಾಭಾಂಶ ಸದಸ್ಯರಿಗೆ ಹಂಚಲಾಗಿದೆ, ಸಾಲದ ಮಿತಿ, ೧೦ ಲಕ್ಷಕ್ಕೆ( ಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದ ನಂತರ ) ಹೆಚ್ಚಿಸಲು,ಸದಸ್ಯರಿಂದ ಪ್ರತಿ ತಿಂಗಳ ೩೦೦ ಬದಲಾಗಿ ೫೦೦ ಶೇರ ಸಂಗ್ರಹಿಸಲು ಹಾಗೂ ಈ ಹಿಂದೆ ಚುನಾವಣೆ ಸಮಯದಲ್ಲಿ ೨ ಕೋಟಿ ಅಷ್ಟು ಠೇವಣಿಯ ಹಣವನ್ನು ವಿರೋಧಿಗಳು ಠೇವಣಿದಾರರ ಮನೆ ಮನೆಗೆ ತೆರಳಿ ಠೇವಣಿಯನ್ನು ಹಿಂಪಡೆಯುವಂತೆ ಪ್ರಚೋದಿಸಿದರು. ಆದರೆ ಈಗ ನಾವು ಮತ್ತೆ ಗರಿಷ್ಠ ಪ್ರಮಾಣದಲ್ಲಿ೧.೭೫ ಕೋಟಿ ರೂ ಠೇವುಗಳನ್ನು ಶಿಕ್ಷಕರ ಮನವೊಲಿಸಿ ಇರಿಸಲಾಗಿದೆ., ಸಂಘದ ಸದಸ್ಯರು ಅಕಾಲಿಕ ಮೃತಾರಾದರೆ ಅವರ ಸಂಬಂಧಿಕರಿಗೆ ೫೦೦೦ ಉಪದಾನ ನೀಡಲು ಉದ್ದೇಶಿಸಲಾಗಿದೆ ತಮ್ಮೆಲ್ಲರ ಸಹಾಯ ಸಹಕಾರ ವಿಶ್ವಾಸ ಸಂಘದ ಮೇಲೆ ಇರಲಿ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ವೈಟಿ ಪಾಟೀಲ್ ಅವರು ಮಾತನಾಡಿ ಸಂಘದ ನರ್ದೇಶಕರೆಲ್ಲರೂ ಶಿಕ್ಷಕರ ದುಡಿಮೆಯ ಹಣದ ಕಾವಲುಗಾರರಾಗಿ,ಶಿಕ್ಷಕರ ಸ್ನೇಹಿಯಾಗಿ ಕರ್ಯನರ್ವಹಿಸಿ ಈ ಸಹಕಾರಿ ಸಂಘ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು ಕರ್ಯಕ್ರಮದಲ್ಲಿ ಸಿದ್ದೇಶ್ವರ ಅಪ್ಪಾಜಿ ಅವರ ಹಾಗೂ ಸಹಕಾರ ರಂಗದ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ,SSಐಅ (೧೦), ಹಾಗೂPUಅ (೧೦)ಯಲ್ಲಿ ಹೆಚ್ಚು ಅಂಕ ಪಡೆದ, ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಜಿಲ್ಲಾ ಮತ್ತು ತಾಲೂಕಾ ಆರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಗುರುಗಳು, ಗುರುಮಾತೆಯರಿಗೆ ಹಾಗೂ ಉತ್ತಮ ಇಟ್ಟಿರುವ ಠೇವಣಿದಾರರಿಗೆ ಸನ್ಮಾನಿಸಿದ ಗೌರವಿಸಲಾಯಿತು. ಜಿಲ್ಲಾ ಶಿಕ್ಷಕರ ಸಂಘದ ನೂತನ ಪ್ರಧಾನ ಕರ್ಯರ್ಶಿಗಳಾದ ಶ್ರೀ ಅಲ್ಲಾಭಕ್ಷ ವಾಲಿಕಾರ ಅವರನ್ನು ಸನ್ಮಾನಿಸಲಾಯಿತು. ನಿಕಟ ಪರ್ವ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಎಂ ಎಂ ವಾಲಿಕಾರ,ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಹಣಮಂತ ಮಾಳಗೊಂಡ ನಿಕಟಪರ್ವ ಅಧ್ಯಕ್ಷರಾದ ಶ್ರೀ ಪಿ ಎಸ್ ಚಾಂದಕವಟೆ,ನರ್ದೇಶಕರಾದ ಶ್ರೀ ಎಚ್ ಎಂ ಮುಜಾವರ್ ಶ್ರೀ ಎಸ್ ಸಿ ಗಿಡಗಂಟಿ, ಶ್ರೀ ಬಿ ಎಂ ವಠಾರ ಶ್ರೀ ಡಿ ಎಸ್ ಕಣ್ಮಸ, ಶ್ರೀಮತಿ ಎಸ್ ಸಿ ಮುಗಳಿ, ಶ್ರೀಮತಿ ಆರ್ ಆರ್ ಫಸ್ಟ್, ಶ್ರೀ ಎಸ್ ಡಿ ಪಾಟೀಲ್ ಶ್ರೀ ಎಂ ಎಂ ನೇದಲಗಿ ಶ್ರೀ ಬಿ ಆಯ್ ಗೊರನಾಳ ಶ್ರೀ ಐ ಜೆ ತಳವಾರ, ಓಉಔ ಪದಾಧಿಕಾರಿಗಳಾದ ಶ್ರೀ ಅಬುತಾಲಿಬ ಹೊಸೂರ ಡಾ.ಕಾಂತು ಇಂಡಿ, ಶ್ರೀ ಜಯರಾಮ ಚವ್ಹಾಣ, ಅರವಿಂದ ಮೇತ್ರಿ, ಎಸ್ ಆರ್ ಪಾಟೀಲ್ ಶಿಕ್ಷಕರ ಸಂಘದ ಶ್ರೀ ಎಂ ಟಿ, ಮಾಶ್ಯಾಳ, ಶ್ರೀ ಜಗದೀಶ್ ಚವಡಿಹಾಳ, ಶ್ರೀ ಎ ಎಸ್ ಬಡಿಗೇರ್, ಸುರೇಶ್ ಚವ್ಹಾಣ, ಬಿ ಎನ್ ಜಮಾದಾರ್, ಬಿ ಎಸ್ ಸೊನ್ನದ್, ಎ ಸಿ ಬಡಿಗೇರ್, ಎನ್ ಎ ಭಾಗಯತ್, ಬಿ ಬಿ ಸುತಾರ್, ವಿ ಕೆ ಚವ್ಹಾಣ, ಉಮರ ಶೇಕ್ ಎಂ ಬಿ ಟೆಂಗಳೆ, ಟಿ ಕೆ ಪೂಜಾರಿ,ಅತೀಕ ನಾಗೂರ್, ಶ್ರೀಮತಿ ಜೆ ಎಚ್ ತೆಲಗ, ಶ್ರೀಮತಿ ಎಸ್ ಸಿ ಗಿರಣಿ, ಶ್ರೀಮತಿ ರಜಿಯಾಬೇಗಂ ಚಪ್ಪರಬಂದ , ಶ್ರೀಮತಿ ವಿಜಯಲಕ್ಷ್ಮಿ ಡಿಸ್ಲೆ ಹಾಗೂ ೪೦೦ಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದು. ಶಿಕ್ಷಕರಾದ ಶ್ರೀ ಸಂಜು ಬೋರಗಿ ಅವರು ಪ್ರರ್ಥನೆ ಮಾಡಿ,ನರ್ದೇಶಕರಾದ ಶ್ರೀ ಬಿ ಎಂ ವಠಾರ್ ಅವರು ಸ್ವಾಗತಿಸಿ ಶ್ರೀ ಜಯರಾಮ ಶಿಕ್ಷಕರು ನಿರೂಪಿಸಿ ವಂದಿಸಿದರು.



















