ತಾಂಡಾದ ಯುವಕನೋರ್ವ ದೇಶ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ
ಇಂಡಿ: ಪಟ್ಟಣದ ರೈಲ್ವೇ ಸ್ಟೇಶನ್ ತಾಂಡಾದ ಲಖನ ಪಿಂಟು ಜಾಧವ ಅವರು ಬಿಎಸ್ಎಫ್ ನಲ್ಲಿ ತರಬೇತಿ ಮುಗಿಸಿ ಮರಳಿ ಮನೆಗೆ ಬಂದ ಪ್ರಯುಕ್ತ ಯೋಧನನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಅಧ್ಯಕ್ಷ ವಿಜಯ ರಾಠೋಡ ಮಾತನಾಡಿ, ನಮ್ಮ ತಾಂಡಾದ ಯುವಕನೋರ್ವ ದೇಶ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ಯುವಕರು ದುಷ್ಚಟಗಳಿಗೆ ಬಲಿಯಾಗದೆ ಉತ್ತಮ ವಿದ್ಯಾಭ್ಯಾಸ ಮಾಡಿ ನೌಕರಿ ಸೇರಲು ಮುಂದಾಗಬೇಕು ಎಂದು ತಾಂಡಾದ ಯುವಕರಲ್ಲಿ ಮನವಿ ಮಾಡಿದರು.
ವೇದಿಕೆಯ ಉಪಾಧ್ಯಕ್ಷ ಸುನೀಲ ರಾಠೋಡ, ಬೀನು ರಾಠೋಡ, ರಾಕೇಶ ಜಾಧವ, ಶ್ರೀಕಾಂತ ರಾಠೋಡ, ನವನಾಥ ಚವ್ಹಾಣ, ಮಿಥುನ ರಾಠೋಡ, ಶಾಮ ಜಾಧವ, ಚೇತನ ಮಿರಜಕರ, ಅಮೀತ ಮೋರೆ, ರೋಹಿತ ರಾಠೋಡ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪಟ್ಟಣದ ರೈಲ್ವೇ ಸ್ಟೇಶನ್ ತಾಂಡಾದ ಲಖನ ಪಿಂಟು ಜಾಧವ ಅವರು ಬಿಎಸ್ಎಫ್ ನಲ್ಲಿ ತರಬೇತಿ ಮುಗಿಸಿ ಮರಳಿ ಮನೆಗೆ ಬಂದ ಪ್ರಯುಕ್ತ ಯೋಧನನ್ನು ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.