ಮುದ್ದೇಬಿಹಾಳ:ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ ಹಿಂದು ವಿದ್ಯಾರ್ಥಿಗಳ ಯಜ್ಞೋಪವೀತ ಜನಿವಾರ ತೆಗೆಸಿ ಕಾಂಗ್ರೆಸ್ ಸರ್ಕಾರ ಹಿಂದುತ್ವದ ಪಾವಿತ್ರö್ಯತೆಗೆ ಧಕ್ಕೆ ತಂದಿದೆ. ಹಿಂದುಗಳು ಧರಿಸುವ ಶಿವದಾರ, ಗುಂಡಗಡಗಿ, ಉಡದಾರ, ಮಂಗಳಸೂತ್ರ, ಕಾಲುಂಗುರ ಮುಂತಾದವುಗಳಿಗೂ ಸಂಚಕಾರ ತರಬಹುದು. ಹಿಂದುಗಳೆಲ್ಲ ಈಗಲೇ ಎಚ್ಚೆತ್ತುಕೊಂಡು ಪ್ರತಿರೋಧ ತೋರದಿದ್ದರೆ ಕಾಂಗ್ರೆಸ್ ರಾಜ್ಯದಲ್ಲಿ, ದೇಶದಲ್ಲಿ ಹಿಂದುತ್ವವನ್ನೇ ನಾಶ ಮಾಡಲು ಹಿಂಜರಿಯುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಕಿಡಿಕಾರಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಜನಿವಾರ ಧರಿಸುವ ೧೮ ಸಮಾಜಗಳ ಪ್ರತಿನಿಧಿಗಳು, ಬಿಜೆಪಿ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇಸ್ರೇಲ್ ಸಂವಿಧಾನದಲ್ಲಿ ಹಿಂದುಗಳಿಗೆ, ಹಿಂದು ರಾಷ್ಟç ಭಾರತಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಯಹೂದಿಗಳಾದ ನಾವು ಭಾರತಕ್ಕೆ, ಹಿಂದುಗಳಿಗೆ ಧನ್ಯರಾಗಿರುತ್ತೇವೆ. ಏಕೆಂದರೆ ಹಿಂದಿನ ಕಾಲದಲ್ಲಿ ಹಿಂದು ರಾಜರು ಯಹೂದಿಗಳಿಗೆ ಆಶ್ರಯದೊಂದಿಗೆ ಪ್ರಾಣಭಿಕ್ಷೆಯನ್ನೂ ನೀಡಿದ್ದರು. ಇತರರ ಅಚಾರ ವಿಚಾರಗಳನ್ನು ಹಿಂದುಗಳು ಗೌರವಿಸುತ್ತಾರೆ. ಹಿಂದುಗಳು ಬಹುಸಂಖ್ಯಾತರಾಗಿರುವ ರಾಷ್ಟ ಭಾರತ. ಹಿಂದುಗಳು ಸಹಿಷ್ಣುಗಳು ಎಂದಿರುವುದು ಹಿಂದುತ್ವದ ಮಹತ್ವ ಸಾರಿ ಹೇಳುತ್ತದೆ ಎಂದರು.
ಕಾಂಗ್ರೆಸ್, ಹಿಂದು ವಿರೋಧಿ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೆಲ್ಲ ಜನಿವಾರ ತೆಗೆಸುವಂಥ ಅಕ್ಷಮ್ಯ ಘಟನೆಗಳು ನಡೆಯುತ್ತವೆ. ಈ ಸರ್ಕಾರ ಹಿಂದುಗಳಿಗೆ ಮಾತ್ರ ಅಘೋಷಿತ ನಿಯಮ ಜಾರಿಮಾಡಿದಂತಿದೆ. ಜನಿವಾರ ಧರಿಸುವುದು ಹಿಂದು ಸಂಸ್ಕೃತಿಯ ಪ್ರತೀಕ. ಅದೊಂದು ಭೌತಿಕ, ಮಾನಸಿಕ ಪರಿಪೂರ್ಣತೆ, ಜ್ಞಾನ, ಮೌಲ್ಯಗಳ ಸಂಕೇತ. ಅಂಬೇಡ್ಕರ್ ಅವರ ಸಂವಿಧಾನದ ೨೫-೨೮ ವಿಧಿಯಲ್ಲೂ ಇದರ ಮಹತ್ವ ಪ್ರಸ್ತಾಪಿಸಿ ಜನಿವಾರ ಧರಿಸುವುದು ಹಿಂದುಗಳ ಮೂಲಹಕ್ಕು ಎಂದಿದೆ. ಇದಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದರು.
ವಿಪ್ರ ಸಮಾಜದ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಮಾತನಾಡಿ, ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅವಮಾನ ಸಹಿಸುವುದು ಸಾಧ್ಯವಿಲ್ಲ. ಈಚೆಗೆ ಸೋರಿಕೆಯಾದ ಸಮೀಕ್ಷೆಯಲ್ಲಿ ಮುಸ್ಲೀಮರ ಸಂಖ್ಯೆ ಹೆಚ್ಚು ಎಂದು ತೋರಿಸಲಾಗಿದೆ. ಆದರೆ ಅವರಲ್ಲಿನ ಪಂಗಡ ತೋರಿಸಿಲ್ಲ. ಆದರೆ ಹಿಂದುಗಳಲ್ಲಿ ಪಂಗಡ ತೋರಿಸಿ ಅವರ ಸಂಖ್ಯೆ ಕಡಿಮೆ ಎಂದು ತೋರಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಅಂತ್ಯಕಾಲ ಸನ್ನಿಹಿತವಾಗುತ್ತಿರುವ ಸೂಚನೆಯಾಗಿದೆ ಎಂದರು.
ಕ್ಷತ್ರೀಯ ಮರಾಠ ಸಮಾಜದ ಮುಖಂಡ ರಾಜೇಂದ್ರ ಭೋಸಲೆ ಮಾತನಾಡಿ, ಸಿಇಟಿ ಪರೀಕ್ಷೆ ವಿದ್ಯಾರ್ಥಿ ಜೀವನಕ್ಕೆ ಅಗತ್ಯ. ಜನಿವಾರದ ನೆಪದಲ್ಲಿ ವಿದ್ಯಾರ್ಥಿಯೊಬ್ಬನನ್ನು ಪರೀಕ್ಷೆಯಿಂದ ವಂಚಿಸಿದ್ದು ದುರದೃಷ್ಟಕರ. ಆ ವಿದ್ಯಾರ್ಥಿಗೆ ನ್ಯಾಯ ಕೊಡಿಸಬೇಕು. ತಪ್ಪಿತಸ್ತ ಎಲ್ಲರ ಮೇಲೂ ಕ್ರಮ ಜಾರಿಯಾಗಬೇಕು ಎಂದರು.
ವಾಸು ಶಾಸ್ತ್ರೀ, ಎಸ್.ಆರ್.ಕುಲಕರ್ಣಿ ಮಾತನಾಡಿದರು. ಬಾಬುರಾವ ಚವ್ಹಾಣ, ಅರವಿಂದ ಕುಲಕರ್ಣಿ, ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಪ್ರಭು ಕಡಿ, ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಪುಟ್ಟು ಕುಲಕರ್ಣಿ, ಸುಭಾಷ ಕುಲಕರ್ಣಿ, ನಾರಾಯಣ ದುರ್ವೆ, ಭರತೇಶ ಮಂಕಣಿ, ರಮೇಶ ದೊಡಮನಿ, ಭರತೇಶ ಶೆಟ್ಟಿ, ರಾಜು ಪದಕಿ, ವಾಸು ಸಾಲವಾಡಗಿ, ಹಣಮಂತ ನಲವಡೆ, ರಾಜು ಬಳ್ಳೊಳ್ಳಿ, ಆನಂದ ತುಪ್ಪದ, ಗೌರಮ್ಮ ಹುನಗುಂದ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ರಾಘವೇಂದ್ರ ನಲವಡೆ, ಪಿ.ಎಲ್.ಕುಲಕರ್ಣಿ, ಎಲ್.ಎಸ್.ದೇಶಪಾಂಡೆ, ಪ್ರಸನ್ನ ಮಠ, ಸಿದ್ದು ಹಿರೇಮಠ, ಅಶೋಕ ರಾಠೋಡ, ಸಂಜು ಬಾಗೇವಾಡಿ, ನಿಖಿಲ್ ಮಲಗಲದಿನ್ನಿ, ರವಿ ಹವಾಲ್ದಾರ್, ಮದನ್ ಕುಲಕರ್ಣಿ, ಸುರೇಶ ಕುಲಕರ್ಣಿ, ಗುರುರಾಜ ಕುಲಕರ್ಣಿ, ಮಹೇಶ ತೇಲಂಗಿ, ಅನೀಲ ಕುಲಕರ್ಣಿ, ವಿಠ್ಠಲ ದೇಶಪಾಂಡೆ, ಅಶೋಕ ಚಿನಿವಾರ, ರಾಜಶೇಖರ ಮ್ಯಾಗೇರಿ, ಜನಿವಾರ ಧರಿಸುವ ಸಮಾಜದ ಪ್ರತಿನಿಧಿಗಳು, ಬಿಜೆಪಿ ಮುಖಂಡರು ಇದ್ದರು.
ಎರಡು ವರ್ಷಗಳ ಹಿಂದೆ ನನ್ನ ಮಗಳು ಅಪೇಕ್ಷಾ ಸಿಇಟಿ ಪರೀಕ್ಷೆ ಬರೆಯಲು ಸಿಂದಗಿಯ ಪರೀಕ್ಷಾ ಕೇಂದ್ರವೊಂದಕ್ಕೆ ಹೋಗಿದ್ದಾಗ ಆಕೆಯ ತಾಳಿ, ಕಿವಿಯೋಲೆ ಬಿಚ್ಚಿಸಿದ್ದರು. ನಿಯಮ ಇರಬಹುದೆಂದು ಸುಮ್ಮನಾಗಿದ್ದೆವು.
–ನಾರಾಯಣ ದುರ್ವೆ, ಗೋಂಧಳಿ ಸಮಾಜದ ಮುಖಂಡ, ಮುದ್ದೇಬಿಹಾಳ.