ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ
ಶಿವಾನಂದ ಹಿಳ್ಳಿ ಸೇವಾ ನಿವೃತ್ತಿ : ಕುಟುಂಬ ಸದಸ್ಯರೊಂದಿಗೆ ಸನ್ಮಾನಿಸಿ ಬೀಳ್ಕೊಡುಗೆ
ವಿಜಯಪುರ, ಮೇ.31 :ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಡಿ ಗುಂಪಿನ ಹುದ್ದೆಯಲ್ಲಿ ಕಳೆದ 33 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ, ಮೇ.31ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಗೊಂಡಿರುವ ಶಿವಾನಂದ ಹಿಳ್ಳಿಯವರಿಗೆ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿಜಯಪುರ ಕಚೇರಿಯಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಕಚೇರಿ ಸಿಬ್ಬಂದಿಗಳು ಹಾಗೂ ಪತ್ರಕರ್ತರು ನಿವೃತ್ತರಾದ ಶಿವಾನಂದ ಹಿಳ್ಳಿ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಅಮರೇಶ ದೊಡಮನಿ ಅವರು ಮಾತನಾಡಿ, ಕಳೆದ 1991 ರಂದು ಬೆಳಗಾವಿ ಕಚೇರಿಯಿಂದ ತಮ್ಮ ಸೇವೆಯನ್ನು ಆರಂಭಿಸಿದ ಶಿವಾನಂದ ಹಿಳ್ಳಿ ಅವರು, 1998 ರಿಂದ ವಿಜಯಪುರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಸುದಿರ್ಘವಾಗಿ 33 ವರ್ಷ ಹಾಗೂ 7 ತಿಂಗಳಿಗೊಮ್ಮೆ ಸೇವೆಯನ್ನು ಪೂರೈಸಿ ಇಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿಗೊಂಡಿದ್ದಾರೆ. ಇವರ ಸೇವಾ ಅವಧಿಯ ಬಹುಕಾಲ ವಿಜಯಪುರ ಜಿಲ್ಲೆಯಲ್ಲಿಯೇ ಪೂರ್ಣಗೊಳಿಸಿದ್ದಾರೆ. ಇವರು ತಮ್ಮ ಸೇವಾ ಅವಧಿಯಲ್ಲಿ ವಾರ್ತಾ ಇಲಾಖೆಯ ಹಲವು ಅಧಿಕಾರಿ-ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳ ಜೊತೆಯೂ ಉತ್ತಮ ಒಡನಾಟ ಹೊಂದಿದ್ದರು. ಹಾಗಾಗಿ ಅತ್ಯಂತ ಶಿಸ್ತಿನಿಂದ ಕಾರ್ಯನಿರ್ವಹಿಸಿದ್ದಾರೆ. ಸುದಿರ್ಘ ಸೇವಾ ಅನುಭವ ಹೊಂದಿ, ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿಗೊಂಡಿರುವ ಶಿವಾನಂದ ಹಿಳ್ಳಿ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಜಿಲ್ಲಾ ವರದಿಗಾರರಾದ ನವೀದ ಅಂಜುಮ್ ಹಾಗೂ ನ್ಯೂಸ್-18 ವರದಿಗಾರ ಗುರು ಗದ್ದನಕೇರಿ ಅವರು ಮಾತನಾಡಿ, ಪತ್ರಕರ್ತರು ಹಾಗೂ ವಾರ್ತಾ ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಶಿವಾನಂದ ಹಿಳ್ಳಿ ಅವರು ನಿವೃತ್ತಿ ಅಂಚಿನಲ್ಲಿದ್ದಾಗಲೂ ಸಹ ಯುವಕರಂತೆ ಪಾದರಸದಂತೆ ವೇಗವಾಗಿ ಕೆಲಸ ಮಾಡುತ್ತಿದ್ದರು, ಪತ್ರಿಕಾ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಆಮಂತ್ರಣ, ಇಲಾಖೆಗಳಿಗೆ ಸಂಬಂಧಿಸಿದ ಮಹತ್ವದ ಪ್ರಕಟಣೆಗಳನ್ನು ಕಾಲ ಕಾಲಕ್ಕೆ ತಲುಪಿಸಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಪತ್ರಕರ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಅವರು ಆಶಿಸಿದರು.
ಪತ್ರಕರ್ತರಾದ, ಸಂಘರ್ಷ ಹೊಸಮನಿ, ಸಿದ್ದಣ್ಣ ವಿಜಾಪುರ ವಾರ್ತಾ ಇಲಾಖೆಯ ಮಂಜುಳಾ ದುರ್ಗಣ್ಣವರ, ಪ್ರಕಾಶ ಘಟಕಾಂಬಳೆ, ರಾಜು ಢವಳಗಿ, ಪ್ರಶಿಕ್ಷಣಾರ್ಥಿ ವಿದ್ಯಾಶ್ರೀ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.