ರಾಷ್ಟ್ರೀಯ ಲೋಕ ಅದಾಲತ್ , ಗಂಡ ಹೆಂಡತಿ ಒಂದಾದರು
೩೨೫೯ ಪ್ರಕರಣ ಇತ್ಯರ್ಥ ೪೫ ಲಕ್ಷ ಅಧಿಕ ಸಂಗ್ರಹ
ಇಂಡಿ : ರಾಷ್ಟಿçÃಯ ಲೋಕ ಅದಾಲತ್ ನಲ್ಲಿ ಸುಮಾರು ೩೨೫೯ ಪ್ರಕರಣದಲ್ಲಿ ೧೮೭೦ ಪ್ರಕರಂಗಳು ಇತ್ಯರ್ಥ ಗೊಂಡಿವೆ ಎಂದು ಹಿರಿಯ ದಿವಾನಿ ನ್ಯಾಯಾಧೀಶ ಕೋಟಪ್ಪ ಕಾಂಬಳೆ ಹೇಳಿದರು.
ಶನಿವಾರ ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತನಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
೩೨೫೯ ಪ್ರಕರಣಗಲಿಂದ ಸುಮಾರು ೪೫ ಲಕ್ಷ ಅಧಿಕ ಪರಿಹಾರ ಮೊತ್ತ ಸಂಗ್ರಹವಾಗಿದೆ. ರಾಜಿ ಮೂಲಕ ನ್ಯಾಯ ಇತ್ಯರ್ಥದಿಂದ ನ್ಯಾಯಾಲಯಗಳಿಗೆ ಅಲೆದಾಟ ತಪ್ಪುತ್ತದೆ ಪರಸ್ಪರ ಸೌಹಾರ್ಧತೆ ಬೆಳೆಯುತ್ತದೆ ಎಂದರು.
ರಾಜಿ ಮೂಲಕ ಇತ್ಯರ್ಥಕ್ಕೆ ವಕೀಲರು ಸಹಕಾರ ನೀಡುತ್ತಿದ್ದು ಅವರಿಗೆ ಧನ್ಯವಾದ ಎಂದ ಅವರು ಸಾರ್ವಜನಿಕರು ಸಹ ರಾಜಿ ಸಂಧಾನಕ್ಕೆ ಆದ್ಯತೆ ನೀಡಿ ಪ್ರಕರಣ ಇತ್ಯರ್ಥದ ಮೂಲಕ ನೆಮ್ಮದಿಯ ಜೀವನ ನಡೆಸಲು ಮುಂದೆ ಬರಬೇಕು ಎಂದರು.
ಇದೇ ಸಂದರ್ಭದಲ್ಲಿ ಸುಮಾರು ಹತ್ತು ವರ್ಷಗಳಿಂದ ವೈವಾಹಿಕ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ ದಂಪತಿಗಳು ಇಂದು ಇಬ್ಬರು ಜೋಡಿಗಳು ಒಂದಾದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಕ್ರಿಮಿನಲ್ ವಿಮಾ ಪರಿಹಾರ ಪ್ರಕರಣ ರಾಜಿ ಮೂಲಕ ಮುಕ್ತಾಯ ಗೊಂಡಿವೆ ಎಂದರು.
ಅದರಲ್ಲಿ ವ್ಯಾಜ್ಯ ಪೂರ್ವ ಬ್ಯಾಂಕ ಟ್ರಾಫಿಕ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಲಕ್ತತಾ ಪ್ರಕರಣ ಸೇರಿವೆ ಎಂದರು.
ಕ್ರಿಮಿನಲ್, ಚೆಕ್ ಬೌನ್ಸ, ಕೌಟುಂಬಿಕ ವ್ಯಾಜ್ಯ ವಿಭಾಗದ ದಾವೆ ಸಿವಿಲ್ ಪ್ರಕರಣ ಮೋಟಾರು ವಾಹನ ಅಪಘಾತ ಪ್ರಕರಂ ಸೇರಿವೆ ಎಂದರು.
ದಿವಾನಿ ನ್ಯಾಯಾಧೀಶ ಸುನೀಲ ಕುಮಾರ ಎಂ.ಎಸ್, ಹೆಚ್ಚುವರಿ ದಿವಾಣಿ ನ್ಯಾಯಧೀಶ ವಿಕಾಸ್ ಧಳವಾಯಿ, ಜೆ.ಬಿ.ಬೇನೂರ, ಎಸ್.ಪಿ.ಪಾಟೀಲ, ಟಿ.ವಿ.ಸಿಂದಗಿ, ಎಸ್.ಬಿ.ಪಾಟೀಲ, ಸರಕಾರಿ ಅಭಿಯೋಜಕ ರಾಖಿ ಕಟ್ಟಿಮನಿ, ಜೆ.ಸ್.ನವಮಿ, ಮಲ್ಲೆಶಿ ಯಂಬತನಾಳ, ನ್ಯಾಯಲಯದ ಸಿಬ್ಬಂದಿಗಳಾದ ಬಾಪುರಶೇನ್ ಹವಾಲ್ದಾರ್, ಸಿದ್ದು ಹಾವಳಗಿ ಮತ್ತಿತರಿದ್ದರು.
ಇಂಡಿ ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತನಲ್ಲಿ ಗಂಡ-ಹೆAಡತಿಯರು ಒಂದಾದರು.



















