ವೃಕ್ಷಥಾನ್ ಹೆರಿಟೇಜ್ ರನ್ ಗೆ ಈಗಿನಿಂದಲೆ ಸಿದ್ಧತೆ..!
ವಿಜಯಪುರ: ಡಿಸೆಂಬರ್ ನಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಗೆ ಈಗಿನಿಂದಲೆ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಸಚಿವ ಎಂ. ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ-2025 ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಈ ಬಾರಿ ಸರಿಪಡಿಸಬೇಕು. ನೋಂದಣಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣಗೊಳಿಸಬೇಕು. ಸಾರ್ವಜನಿಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಾಲ್ಗೋಳ್ಳಲು ಈಗಿನಿಂದಲೇ ಪರಿಸರದ ಜಾಗೃತಿ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಲು ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.
ಈ ಬಾರಿ ಟಿ-ಶರ್ಟ್ ವಿತರಣೆಯನ್ನು ಸುಗಮವಾಗಿ ನಡೆಸಬೇಕು. ಸಾಂಸ್ಕೃತಿಕ ಕಮಿಟಿಯವರು ಕಾರ್ಯಕ್ರಮಗಳನ್ನು ಮತ್ತಷ್ಟು ಆಕರ್ಷಣೀಯವಾಗಿರುವಂತೆ ಕ್ರಮ ಕೈಗೊಳ್ಳಬೇಕು. ರೂಟ್ ಕಮಿಟಿ, ರೇಸ್ ಕಮಿಟಿ ಮತ್ತು ಹೈಡ್ರೇಷನ್ ಕಮೀಟಿ, ಸ್ವಯಂ ಸೇವಕರ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿಯವರೂ ಈ ಬಾರಿಯ ಮ್ಯಾರಾಥಾನ್ ನಲ್ಲಿ ಎಲ್ಲ ಕ್ಷೇತ್ರಗಳ ಜನರು ಮತ್ತು ಯುವಕರು ಪಾಲ್ಗೋಳ್ಳಲು ಈಗಿನಿಂದಲೇ ಯೋಜನೆ ರೂಪಿಸಬೇಕು ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಅವಘಡದಲ್ಲಿ ಸಾವಿಗೀಡಾದ ಕ್ರಿಕೆಟ್ ಅಭಿಮಾನಿಗಳು ಮತ್ತು ಜೂ. 8 ರಂದು ನಿಧನರಾದ ಶತಾಯುಷಿ ಸಂಗವ್ವ ಮಲಕಯ್ಯ ಸ್ವಾಮಿ ಗೌರವಾರ್ಥ ಸಭೆಯ ಪ್ರಾರಂಭದಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಈ ಸಭೆಯಲ್ಲಿ ಶುಭಶ್ರೀ ಗ್ರುಪ್ಸ್ ವ್ಯವಸ್ಥಾಪಕ ನಿರ್ದೇಶಕ ಶಾಂತೇಶ ಕಳಸಗೊಂಡ, ಕೋರ್ ಕಮಿಟಿ ಮುಖಂಡರಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಔರಸಂಗ, ಶಂಭು ಕರ್ಪೂರಮಠ, ಸುರೇಶ ಘೊಣಸಗಿ, ಡಾ.ರಾಜು ಯಲಗೊಂಡ, ಅಪ್ಪು ಭೈರಗೊಂಡ, ಡಾ. ಪ್ರವೀಣ ಚೌರ, ಅಶ್ಪಾಕ ಮನಗೂಳಿ, ಸಮೀರ ಬಳಗಾರ, ಡಿ.ಕೆ.ತಾವಸೆ, ಗುರುಶಾಂತ ಕಾಪಸೆ, ಶಿವಾನಂದ ಯರನಾಳ, ಗಜಾನನ ಮಂದೋಲಿ, ಸಚೀನ ಪಾಟೀಲ, ಜಗದೀಶ ಪಾಟೀಲ, ಸಂದೀಪ ಮಡಗೊಂಡ, ನವೀದ ನಾಗಠಾಣ, ವೀಣಾ ದೇಶಪಾಂಡೆ, ಎಂ.ಪಿ.ಕುಪ್ಪಿ, ಪ್ರದೀಪ ಕುಂಬಾರ ಮುಂತಾದವರು ಉಪಸ್ಥಿತರಿದ್ದರು.
*Vrukshathon Heritage Run Meeting*: ವಿಜಯಪುರ ನಗರದಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ-2025 ಪೂರ್ವ ತಯಾರಿ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಅವಘಡದಲ್ಲಿ ಸಾವಿಗೀಡಾದರವ ಗೌರವಾರ್ಥ ಸಮಿತಿ ಸದಸ್ಯರು ಮೌನ ಆಚರಿಸಿದರು. ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ, ಶಾಂತೇಶ ಕಳಸಗೊಂಡ, ಡಾ. ಮುರುಗೇಶ ಪಟ್ಟಣಶೆಟ್ಟಿ, ಸಂತೋಷ ಔರಸಂಗ ಮುಂತಾವರು ಉಪಸ್ಥಿತರಿದ್ದರು.