ಮುದ್ದೇಬಿಹಾಳ:ತಾಲೂಕಿನ ಚವನಭಾವಿ ಗ್ರಾಮದಲ್ಲಿ ಬುಧುವಾರ ಸಂಜೆ ರೈತರು ಕಾರುಣ್ಣಿಮೆ ನಿಮಿತ್ತವಾಗಿ ಎತ್ತುಗಳನ್ನು ಕರಿ ಹರಿಯಲಾಯಿತು.
ಗ್ರಾಮದ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ರಾಸುಗಳನ್ನು ಮೈತೊಳೆದು ಪೂಜೆ ನೆರವೇರಿಸಿ, ಶೃಂಗಾರಗೊಂಡ ಎತ್ತುಗಳ ಮದುವಣಗಿತ್ತಿಯಂತೆ ಸಿದ್ದಗೊಳಿಸಿ ಜನರು ಕರಿ ಬಿಟ್ಟು ಸಂಭ್ರಮಿಸಿದರು.
ಗ್ರಾಮದಲ್ಲಿ ಸಂಜೆ 6 ಗಂಟೆಗೆ ದ್ಯಾಮವ್ವಗುಡಿಯಿಂದ ಗ್ರಾಮದೇವತೆ ಗದ್ದಮ್ಮದೇವಿ ದೇವಸ್ಥಾನ ಗುಡಿಯಿಂದ ಎತ್ತುಗಳನ್ನು ಕರಿ ಹರಿಯಲಾಯಿತು. ನಂತರ ಹಗಸಿಯಲ್ಲಿ ಕಟ್ಟಿರುವ ಬೇವಿನ ಸೊಪ್ಪನ್ನು ಜಿಗಿದು ಆ ಸೊಪ್ಪುಗಳನ್ನು ಹರಿದು ಎಲ್ಲಾ ಗ್ರಾಮಸ್ಥರು ಕೂಡಿ
ದೇವಾಲಯಕ್ಕೆ ತೆರಳಿ ಸಾರ್ವಜನಿಕ ವಿಶೇಷ ಪೂಜೆ ಸಲ್ಲಿಸಿದರು.
ಎತ್ತುಗಳನ್ನು ಸಿಂಗರಿಸಲು ಎರಡು ದಿನಗಳ ಹಿಂದೆಯೇ ಮಾರುಕಟ್ಟೆಯಲ್ಲಿ ಕೊರಳ ಗೆಜ್ಜೆ ಮೂಗುದಾರ, ಕೋಡಣಸು, ಹಣೆ ಹಗ್ಗ, ಜತ್ತಿಗಿ, ಬಾರಿಕೋಲು, ಜೂಲ, ವಿವಿಧ ಬಣ್ಣದ ಗೊಂಡೆಗಳು, ವಾರನೀಸ, ಸುನೇರಿ(ಮಿಂಚು) ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳ ಖರೀದಿಸಿಟ್ಟುಕೊಂಡಿದ್ದಾರೆ.
ಕೆಲವು ಗ್ರಾಮಗಳಲ್ಲಿ ಈ ಕ್ರೀಡೆ ದೇಶಗತ್ತಿ ಮನೆತನದ ಸಾಂಪ್ರದಾಯ ಜೀವಂತವಾಗಿರುವಲ್ಲಿ ಮಹತ್ವದ ಪಾತ್ರವಹಿದೆ. ಪ್ರತಿವರ್ಷ ಕರಿ ಹರಿಯುವ ಎತ್ತುಗಳು ಇಂಥದೇ ಮನೆಯಿಂದ ಓಟಕ್ಕೆ ಆಯ್ಕೆಗೊಳಿಸಬೇಕು ಎಂಬ ಸಂಪ್ರದಾಯ ಈಗಲೂ ರೂಢಿಯಲ್ಲದೆ.
ಶೃಂಗರಿಸಿದ ಎತ್ತುಗಳನ್ನು ನಿಗಧಿತ ಸ್ಥಳಗಳಿಂದ ಆಗಸಿ ದ್ವಾರದವರೆಗೆ ಸ್ಪರ್ಧೆಗಿಳಿಸಲಾಗುತ್ತದೆ. ಒಂದು ವೇಳೆ ಸ್ಪರ್ಧೆಯಲ್ಲಿದ್ದ ಎತ್ತು ಸದರಿ ಎತ್ತಿನ ಮಾಲೀಕನ ಕೈಗೆ ಸಿಗದೇ ಪಕ್ಕದ ಊರಿನ ಸೀಮೆ ಪ್ರವೇಶಿಸಿದರೆ ಎತ್ತು ಪ್ರವೇಶಿಸಿದ ಗ್ರಾಮದ ಕಾರ ಹುಣ್ಣಿಮೆಯ ಆಚರಣೆಯ ಅಧಿಕೃತ ಸೊತ್ತನ್ನು ಪಡೆದುಕೊಳ್ಳುವ ಸಂಪ್ರದಾಯ ಈ ಭಾಗದ ಹಲವು ಹಳ್ಳಿಗಳಲ್ಲಿ ಚಾಲ್ತಿಯಲ್ಲಿದೆ. ತಪ್ಪಿಸಿಕೊಂಡ ಎತ್ತಿನ ಮೂಲ ಗ್ರಾಮವು ಅಂದಿನಿಂದ ಕಾರ ಹುಣ್ಣಿಮೆ ಆಚರಣೆ ಸ್ಥಗಿತಗೊಳ್ಳುತ್ತದೆ.
ಇದೇ ಸಂದರ್ಭದಲ್ಲಿ ರೈತರು ಕೂಡ ಕಂಬಳಿ ಹಾಸಿ ಅದರ ಮೇಲೆ ಕೊಬ್ಬರಿ ಗಿಟುಕ ಇಟ್ಟು ಓಟದ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ ಗೆದ್ದವರನ್ನು ಉತ್ಸಾಹದಿಂದ ಮೇಲೆತ್ತಿಕೊಂಡು ಸಂಭ್ರಮ ಪಡುತ್ತಾರೆ.
ಇದಲ್ಲದೇ ಗ್ರಾಮ ದೇವತೆಯ ದೇವಸ್ಥಾನದ ಆವರಣದಲ್ಲಿರುವ ಬಹು ತೂಕದ ಕಲ್ಲು ಗುಂಡುಗಳನ್ನು ಎತ್ತುವ ಸ್ಪರ್ಧೆಯೂ ಇರುತ್ತದೆ. ಆ ಮೂಲಕ ಹಲವರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಾರೆ. ಜೊತೆಗೆ ಎತ್ತಿದ ಕಲ್ಲಿನ ಭಾರದ ಅಂದಾಜಿನ ಮೇಲೆ ಮಳೆಯ ಭವಿಷ್ಯವನ್ನು ತಿಳಿದುಕೊಳ್ಳುವುದು ಇಲ್ಲಿನ ಬಹುತೇಕ ರೈತಾಪಿ ಜನರ ನಂಬಿಕೆಯಾಗಿದೆ.
ಅದರಂತೆ ಕಾರ ಹುಣ್ಣಿಮೆ ಮರು ದಿನ ಸ್ತ್ರೀಯರು, ಮಕ್ಕಳು ಹದಿನೈದು ದಿನಗಳ ಮುಂಚೆಯೇ ಬೆಳೆಸಿಟ್ಟ ಸಸಿ ಕುಂಡಗಳನ್ನು ಆಯಾ ಗ್ರಾಮಗಳಲ್ಲಿರುವ ಹಳ್ಳದ ದಂಡೆ, ನದಿ ತೀರ. ಪ್ರಕ್ಷೇಣಿಯ ಸ್ಥಳಗಳಲ್ಲಿಟ್ಟು ಪೂಜೆ ಸಲ್ಲಿಸಿ ಉತ್ತಮ ಮಳೆಗೆ ಆಹ್ವಾನಿಸಿ ನಂತರ ಅಲ್ಲಿಯೇ ಸಿಹಿ ಊಟ ಮಾಡಿ ಆಟವಾಡಿ ಮನೆಗೆ ಹಿಂದಿರುಗುತ್ತಾರೆ.
ಇಂಥ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಕಾರ ಹುಣ್ಣಿಮೆ ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಚವನಭಾವಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.