ಮುದ್ದೇಬಿಹಾಳ:ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಹೊಸಜೀವನಕ್ಕೆ ಕಾಲಿಟ್ಟಿರುವ ನವದಂಪತಿಗಳ ಸಂಸಾರ ಸುಂದರವಾಗಿ ಮುನ್ನಡೆಯಲಿ. ಇನ್ನು ಮುಂದೆ ಅವರಿಗೆ ಸುಖಕ್ಕಿಂತ ಕಷ್ಟಗಳನ್ನೇ ಜಾಸ್ತಿ ಎದುರಾಗಬಹುದು. ಎಂಥದ್ದೇ ಕಷ್ಟ ಬಂದರೂ ಮೆಟ್ಟಿ ನಿಂತು ಸುಖದ ಜೀವನ ನಡೆಸಲು ಸತಿ, ಪತಿ ಪರಸ್ಪರ ಹೊಂದಾಣಿಕೆಯಿAದ ಸಾಮರಸ್ಯದ ಬದುಕು ನಡೆಸಬೇಕು ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಯವರು ನುಡಿದರು.
ಇಲ್ಲಿನ ಅಭ್ಯುದಯ ಪಿಯು ಸೈನ್ಸ್ ಕಾಲೇಜು ಆವರಣದಲ್ಲಿ ಅಹಿಲ್ಯಾದೇವಿ ಹೋಳ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಅವರು ತಮ್ಮ ಜೇಷ್ಠ ಪುತ್ರ ಕಿರಣ್ ಜೊತೆ ಶ್ರೀಶ್ರದ್ಧಾ ಅವರ ಮದುವೆಯೊಂದಿಗೆ ರವಿವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳಿಗೆ ಅಕ್ಷತೆ ಹಾಕಿ ಅವರು ಆಶೀರ್ವಚನ ನೀಡಿದರು.
ಮದರಿಯವರು ಸಾಕಷ್ಟು ಬಡ ಕುಟುಂಬಗಳಿಗೆ ಸಾಮೂಹಿಕ ಲಗ್ನ ಮಾಡಿಕೊಡುವ ಮೂಲಕ ಅವರ ಏಳಿಗೆಗೆ ಸಹಕರಿಸಿ ಅವರ ಸಂಕಷ್ಟಕ್ಕೆ ನೆರವಾಗಿರುವುದು ಸಂತಸ ತರುವಂಥದ್ದು. ಸಾಮೂಹಿಕ ವಿವಾಹ ಸಂಘಟಿಸುವ ಮೂಲಕ ಅವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಮುಂದೆಯೂ ಸಹಿತ ಅವರಿಂದ ಇಂಥ ಅನೇಕ ಚಟುವಟಿಕೆಗಳು ನೆರವೇರಲಿ. ಅವರಿಂದ ಸಮಾಜಕ್ಕೆ ಒಳ್ಳೇಯದಾಗಲಿ ಎಂದು ಹರಸಿದರು.
ತಿಂಥಣಿಯ ಸಿದ್ಧರಮಾನಂಪುರಿ, ಅಗತೀರ್ಥದ ಶಾಂತಮಯ ಸ್ವಾಮೀಜಿ, ಸರೂರ ಹಾಲುಮತ ಮೂಲಗುರುಪೀಠದ ಶಿವಯ್ಯ ಗುರುವಿನ್, ಗೊಳಸಾರಮಠದ ಅಭಿನವ ಪುಂಡಲಿಕ ಸ್ವಾಮೀಜಿ, ಅಂಕಲಿಮಠದ ಶ್ರೀಗಳು, ಹುಲಜಂತಿಯ ಸೋಮಲಿಂಗ ಸ್ವಾಮೀಜಿ, ಯರಝರಿಯ ಮಲ್ಲಾಲಿಂಗ ಮಹಾರಾಜರು, ಖಿಲಾರಹಟ್ಟಿಯ ಕಾಡಸಿದ್ದೇಶ್ವರ ಸ್ವಾಮೀಜಿ, ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಬಾಗಲಕೋಟೆಯ ಶಾಸಕ ಹುಲ್ಲಪ್ಪ ಮೇಟಿ, ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ, ಎಂಎಲ್ಸಿ ಸುನೀಲಗೌಡ ಪಾಟೀಲ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಚಡಚಣದ ಮಹಾದೇವಸಾಹುಕಾರ ಭೈರಗೊಂಡ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ವಿವಿಧ ಮಠಗಳ ಸ್ವಾಮೀಜಿಗಳು, ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು, ಗ್ರಾಪಂಗಳ ಸದಸ್ಯರು ಸೇರಿ ಹಲವರು ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದರು.
ಕಿರಣ್, ಶ್ರೀಶ್ರದ್ಧಾ ಅವರೊಂದಿಗೆ ಹಿಂದುಳಿದ ಸಮಾಜಗಳ ೪೬ ವಧು ವರರು ಮಾಂಗಲ್ಯ ಧರಿಸಿ ಸತಿಪತಿಗಳಾಗುವ ಮೂಲಕ ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರೆಲ್ಲರಿಗೂ ಮದರಿ ಅವರಿಂದ ಎರಡು ಜೊತೆ ತಾಳಿ, ಕಾಲುಂಗುರ, ಬಟ್ಟೆ ಸೇರಿ ಮದುವೆಯ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೀಲಕಂಠಪ್ಪ ಮದರಿ, ಮಲ್ಲಮ್ಮ ಮದರಿ, ಮಲ್ಲಿಕಾರ್ಜುನ ಮದರಿ, ಶ್ರೀದೇವಿ ಮದರಿ, ಬೀರಪ್ಪ ಮದರಿ, ಯಲ್ಲಮ್ಮ ಮದರಿ, ಅಮರೇಶ ಮದರಿ, ರಿತಮ್ಮ ಮದರಿ, ಪಲ್ಲವಿ, ಅಶ್ವಿನಿ, ನಿಖಿತಾ, ಸೌಮ್ಯಾ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ರವಿ ಜಗಲಿ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ, ಚಂದ್ರು ಜೋಗಿನ್, ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಅಭ್ಯುದಯ ಶಾಲೆ, ಕಾಲೇಜುಗಳ ಸಿಬ್ಬಂದಿ ವರ್ಗ, ಮದರಿಯವರ ಸ್ನೇಹಿತರು, ಗುತ್ತಿಗೆದಾರರು ಸೇರಿ ಹಲವರು ಸಾಮೂಹಿಕ ವಿವಾಹಕ್ಕೆ ಆಗಮಿಸಿದ್ದ ನಲವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಅಂದಾಜು ಮೂರು ಎಕರೆ ಜಮೀನಿನಲ್ಲಿ ಹಾಕಿದ್ದ ತಿರುಪತಿಯ ಶ್ರೀ ಬಾಲಾಜಿ ಮಂದಿರ ಮಾದರಿಯ ಕಲ್ಯಾಣ ಮಂಟಪ, ಸಾಮೂಹಿಕ ವಿವಾಹದ ಸಮಾನಾಂತರ ಉತ್ತರಮುಖಿ ವೇದಿಕೆ, ತಿರುಪತಿ ಲಾಡು, ಹಲ್ವಾ ಒಳಗೊಂಡಿದ್ದ ಭೂರಿ ಭೋಜನ, ವಿಐಪಿ ಮತ್ತು ಜನಸಾಮಾನ್ಯರಿಗೆ ಊಟದ ಪ್ರತ್ಯೇಕ ಕೌಂಟರ್ಗಳು, ಶ್ರೀಶೈಲ ಹೂಗಾರ ನೇತೃತ್ವದ ಕಲಾಸಿಂಚನ ಮೆಲೋಡಿಸ್ ತಂಡದ ಜನಪದ ಶೈಲಿಯ ರಸಮಂಜರಿ, ಅಚ್ಚುಕಟ್ಟಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಜನದಟ್ಟಣೆ ನಿಯಂತ್ರಿಸಲು ಭದ್ರತೆಗೆ ನಿಯೋಜಿಸಿದ್ದ ಮಹಾರಾಷ್ಟ್ರದ ಪುರುಷ, ಮಹಿಳಾ ಬೌನ್ಸರ್ಗಳ ತಂಡ ವಿಶೇಷವಾಗಿ ಗಮನ ಸೆಳೆದವು.