ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿಯ ಸಭೆ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹೆಸ್ಕಾಂ ಮುದ್ದೇಬಿಹಾಳ ಇವರ ಅಧ್ಯಕ್ಷತೆಯಲ್ಲಿ ಈ ಕೇಳಗೆ ತಿಳಿಸಿರುವ ದಿನಾಂಕದಂದು ಹುಲ್ಲೂರು ಜೂನ್ 30-6-2025,ತಂಗಡಗಿ,ಜುಲೈ 01-7-2025,ನಾಲತವಾಡ ಜುಲೈ2-7-2025 ರಂದು ಕಚೇರಿಯಲ್ಲಿ ಸಲಹಾ ಸಮೀತಿಯ ಸಭೆಯನ್ನು ಆಯೋಜಿಸಿದ್ದು ಕಾರಣ ಸಲಹಾ ಸಮೀತಿಯ ಎಲ್ಲಾ ಸದಸ್ಯರು ಹಾಗೂ ರೈತರು, ಸಾರ್ವಜನಿಕರು ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿಯ ಸಭೆ ಬೆಳಗ್ಗೆ 11.00 ಘಂಟೆಗೆ ತಪ್ಪದೆ ಬರಲು ಈ ಮೂಲಕ ಕೋರಲಾಗಿದೆ ಎಂದು ಹೆಸ್ಕಾಂ ಅಧಿಕಾರಿ ಅರ್ ಎನ್ ಹಾದಿಮನಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.