ಜ-17 ರಂದು ಗೋಳಸಾರದಲ್ಲಿ ಸಾಮೂಹಿಕ ವಿವಾಹ
ಇಂಡಿ : ಶ್ರೀ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ೩೧ ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ತಾಲೂಕಿನ ಸುಕ್ಷೇತ್ರ ಗೋಳಸಾದಲ್ಲಿ ಜ ೧೩ ರಿಂದ ೧೭ ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜ. ೧೩ ರಂದು ರಾತ್ರಿ ೬ ಗಂಟೆಗೆ ದೀಪೋತ್ಸವ, ನಂತರ ಆದ್ಯಾತ್ಮ ಪ್ರವಚನ, ಜ ೧೪ ರಂದು ತುಲಾಭಾರ ನಾಟಕ, ಜ ೧೫ ರಂದು ಬಂಗಾರದ ಮನುಷ್ಯ ನಾಟಕ, ಜ. ೧೬ ರಂದು ಕೋಳುರು ಕೊಡಗುಸು ನಾಟಕ, ಮತ್ತು ಡಾ|| ಮಂಜುನಾಥ ಕೊಟೆನ್ನವರ ಸರ್ಜನ ಇವರ ನೇತೃತ್ವದಲ್ಲಿ ಬಿ.ಎಲ್.ಡಿ.ಈ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ, ಶ್ರೀ ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿ ಪ್ರಧಾನ, ಜ ೧೭ ರಂದು ಮುಂಜಾನೆ ಸುಮಂಗಲೆಯರಿAದ ಕುಂಭ ಮೆರವಣೆಗೆ ಶ್ರೀ ಪ್ರಭು ಸಿದ್ದರಾಯ ದೇವರ ಪಲ್ಲಕ್ಕಿ ಉತ್ಸವ, ನಂತರ ೧೧ ಗಂಟೆಗೆ ಧರ್ಮಸಭೆ, ಸಾಮುಹಿಕ ವಿವಾಹ ದಿವ್ಯ ಸಾನಿಧ್ಯ ಶ್ರೀ ೧೦೦೮ ಜಗದ್ಗುರು ಡಾ|| ಚನ್ನಸಿದ್ದರಾಮ ಪಂಡಿತಾರಾಧ್ಯಶಿವಾಚಾರ್ಯ ಭಗವತ್ಪಾದರು ಶ್ರೀಶೈಲಪೀಠ, ಸಾಮೂಹಿಕ ವಿವಾಹಕ್ಕಾಗಿ ೯೪೮೨೬೩೦೪೪೧, ೯೯೦೧೬೫೮೮೬೬ ಗೆ ಸಂಪರ್ಕಿಸಲು ಅದಲ್ಲದೆ ಶಿವ ಭಜನಾ ಸ್ಪರ್ದೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ೨೧೦೦೧ ರೂ,ದ್ವೀತಿಯ ಬಹುಮಾನ ೧೫೦೦೧, ಮತ್ತು ತೃತೀಯ ಬಹುಮಾನ ೮೦೦೧ ರೂ ಹೆಚ್ಚಿನ ಮಾಹಿತಿಗಾಗಿ ೯೭೪೧೩ ೬೦೧೪೨, ೭೯೭೫೬ ೭೨೮೫೫, ೯೯೦೧೫೭೩೫೪೭ ಗೆ ಸಂಪರ್ಕಿಸಲು ಕೋರಿದ್ದಾರೆ.
ತ್ರಿಮೂರ್ತಿ ಮಹಾರಾಜರು ಗೋಳಸಾರ



















