ಇಂಡಿ: ಇಂಡಿ ಹಾಗೂ ಸಿಂದಗಿ ತಾಲೂಕಿನ ಜನರಿಗೆ ಹರ್ಷದ ವಿಷಯ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ತಿಳಿಸಿದ್ದಾರೆ.
ಇಂಡಿಯಲ್ಲಿ ಮಾತನಾಡಿದ ಅವರು, ಕೃಷ್ಣ ಭಾಗ್ಯ ಜಲ ನಿಗಮದ ಕಾಲುವೆಯ ಆಧುನಿಕರಣಕ್ಕೆ ಕೇಂದ್ರ ಸರ್ಕಾರದ (ಸಿ ಡಬ್ಲ್ಯೂ ಸಿ) ಸೆಂಟ್ರಲ್ ವಾಟರ್ ಕಮಿಷನ್ ಬೋರ್ಡ್ ನಿಂದ ಸುಮಾರು 2666 ಕೋಟಿ ರೂಪಾಯಿಗಳನ್ನು ಮಂಜೂರು ಪಡೆದಿದ್ದು ರಾಜ್ಯ ಸರ್ಕಾರದ ಡಿಪಿಆರ್ ಸಲ್ಲಿಕೆಗಾಗಿ ಕಾಯುತ್ತಿದೆ.
ಕೆಲ ದಿನಗಳಿಂದ ರೈತರ ಸಂಕಷ್ಟ ಗಮನಿಸಿ ಕಾಲುವೆಗಳ ನವೀಕರಣಕ್ಕೆ ಪ್ರಸ್ತಾಪಿಸಿದ್ದರು. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿದ್ದು, ಆದರೂ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಅಷ್ಟಲ್ಲದೆ ಕೆಲವು ತಿಂಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿದರು.
ಕೃಷ್ಣಭಾಗ್ಯ ಜಲನಿಗಮ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟದ್ದು ಇದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣ, ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಕೇಂದ್ರ ಸರ್ಕಾರ ಸ್ಪಂದನೆ ಪಡೆದಿದ್ದೆವೆ
ಅದಲ್ಲದೇ ಹಣವನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಡಿಪಿಆರ್ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಕ್ಕೆ, ಕೂಡಲೇ ರಾಜ್ಯ ಸರ್ಕಾರ ಡಿಪಿಆರ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡುತ್ತೆನೆ.
ಮತಕ್ಷೇತ್ರದ ಜನತೆಗೆ ಸಂತಸದ ವಿಷಯ ತಿಳಿಸಿರುವ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಮತಕ್ಷೇತ್ರದ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಹೇಳಿದರು.