ಅಫಜಲಪುರ: ನಿತ್ಯ ಸಂಸಾರದ ಜಂಜಾಟದಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಇದ್ದೆ ಇರುತ್ತವೆ, ನೆಮ್ಮದಿ ಹುಡುಕಿ ಮನುಷ್ಯ ಏನೆಲ್ಲಾ ಸಾಹಸ ಮಾಡುತ್ತಾನೆ. ಆದರೆ ಅದು ಫಲಿಸುವುದಿಲ್ಲ. ಆದರೆ ನಿಜಕ್ಕೂ ಮನಸ್ಸು ನಿರಾಳವಾಗಿ ನೆಮ್ಮದಿ ಸಿಗಬೇಕಾದರೆ ಜಾತ್ರೆ, ಉತ್ಸವಗಳಲ್ಲಿ ನಡೆಯುವ ಪುರಾಣ, ಪ್ರವಚನಗಳನ್ನು ಆಲಿಸಬೇಕೆಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ಅಫಜಲಪುರ ತಾಲೂಕಿನ ಆನೂರ ಗ್ರಾಮದ ಗ್ರಾಮ ದೇವತೆ ಚಂದ್ರಗಿರಿ ದೇವಿಯ ಜಾತ್ರೆಯ ಪ್ರಯುಕ್ತ ನಡೆದ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ನಿಮ್ಮ ಜಂಜಾಟದ ಜೀವನದ ಮಧ್ಯ ಎರಡು ಕೆಲಸಗಳನ್ನು ತಪ್ಪದೆ ಮಾಡಿ. ಪುಣ್ಯದ ಕೆಲಸ, ಜನಸೇವೆ, ಧರ್ಮದ ಕೆಲಸ ಮತ್ತು ದಾನವನ್ನು ಮಾಡುವಾಗ ಯೋಚಿಸದೆ ಮುಕ್ತ ಮನಸ್ಸಿನಿಂದ ಮಾಡಿ. ಕೆಟ್ಟದ್ದನ್ನು ಮಾಡುವಾಗ ಸಾವಿರ ಸಲ ಯೋಚಿಸಿ ಕೆಟ್ಟದ್ದನ್ನು ಮಾಡಲೇಬೇಡಿ, ಯುವ ಜನಾಂಗ ವ್ಯರ್ಥ ಸಮಯ ಹಾಳು ಮಾಡುವ ಬದಲು ಕಾಯಕ ತತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಿ. ದೇಹ ದಂಡಿಸಿ ಕಾಯಕ ತತ್ವದ ಮೂಲಕ ಬದುಕು ಹಸನಾಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚಿಂಚೋಳಿ ಮಠದ ಗದ್ದುಗೇಶ್ವರ ಶಿವಾಚಾರ್ಯರು ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಅನೇಖ ಸಣ್ಣ ಪುಟ್ಟ ಮಠ ಮಾನ್ಯಗಳು, ದೇವಸ್ಥಾನಗಳನ್ನು ಉಳಿಸಿ ಬೆಳೆಸುವಲ್ಲಿ ಬಡದಾಳ ಶ್ರೀಗಳ ಪಾತ್ರ ಬಹಳ ದೊಡ್ಡದಿದೆ. ಅವರ ಧರ್ಮದ ಕಾರ್ಯಕ್ಕೆ ಅವರೇ ಸಾಟಿ ಎಂದ ಅವರು ಆನೂರ ಗ್ರಾಮ ದೇವತೆ ಜಾತ್ರೆಗೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ೧೦೦೮ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಆಗಮಿಸುತ್ತಿದ್ದಾರೆ. ಅವರ ಅಡ್ಡಪಲ್ಲಕ್ಕಿ ಉತ್ಸವವನ್ನು ಎಲ್ಲರೂ ಕೂಡಿಕೊಂಡು ಅದ್ದೂರಿಯಾಗಿ ಆಚರಿಸೋಣ ಎಂದ ಅವರು ಆನೂರ ಗ್ರಾಮಸ್ಥರ ಭಕ್ತಿ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಅರ್ಚಕ ರಾಹುಲ್ ಭಂಡಾರಿ, ಗ್ರಾಮದ ಮುಖಂಡರದ ಗುಂಡುರಾವ್ ಮಾಳಗೆ, ಮಲ್ಲಿನಾಥ ಸಿ ಸೀತನೂರ, ನಿಂಗಣ್ಣ ಕಲಶೆಟ್ಟಿ, ದತ್ತು ಕಲಶೆಟ್ಟಿ, ಪಾವಡಯ್ಯ ಸ್ವಾಂಇ, ಮಹಾಂತಯ್ಯ ಸ್ಥಾವರಮಠ, ಸಿದ್ದು ರೂಗಿ, ರಾಜು ಜಿರೋಳಿ, ಮಹಾಂತಯ್ಯ ಮಲಘಾಣ, ಅಂಬರೀಷ ಪಟ್ಟಣ, ಚಂದ್ರಕಾಂತ ಸಿಂಗೆ, ಡಾ. ಸಂಗಣ್ಣ ಸಿಂಗೆ, ಶ್ರೀಮಂತ ಭಂಡಾರಿ, ವೈಜನಾಥ ಕಲಶೆಟ್ಟಿ, ಸೋಮಲಿಂಗ ಸೀತನೂರ, ಧೂಲಪ್ಪ ಪೂಜಾರಿ, ಕರೆಪ್ಪ ಪೂಜಾರಿ, ದತ್ತು ಗೌಂಡಿ, ಚಿನ್ನಪ್ಪ ಉಮ್ಮಾಗೋಳ, ಕಲ್ಲಣ್ಣ ಉಮ್ಮಾಗೋಳ ಸೇರಿದಂತೆ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.