ವಕೀಲರ ವೃತ್ತಿ ಬಗ್ಗೆ ಎಸಿ ಅಬೀದ್ ಗದ್ಯಾಳ ಮಾತು ಏನು ಗೊತ್ತಾ..? ವಿಡಿಯೋ ಸಮೇತ ವಿಕ್ಷಿಸಿ
ಇಂಡಿ : ವಕೀಲರ ವೃತ್ತಿ ಪವಿತ್ರ ವೃತ್ತಿಯಾಗಿದ್ದು, ನಮ್ಮ ದೇಶ ಸ್ವತಂತ್ರವಾಗುವಲ್ಲಿ ವಕೀಲರ ಪಾತ್ರ ಬಹಳ ಮಹತ್ವದಾಗಿದ್ದು, ಅವರ ಕೊಡುಗೆ ಅಪಾರ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಹಿಬೂಬ್ ಮಕಾಶಿ ಏರ್ಪಡಿಸಿದ್ದ “ಮಕಾಶಿ ಲಾ ಪಿರ್ಮ ದ 2ನೇ ವರ್ಷದ” ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯಶಸ್ವಿ ವಕೀಲರಾಗಲು ಶಿಸ್ತು, ಕಠಿಣ ಪರಿಶ್ರಮ ಮತ್ತು ಸತತ ಅಧ್ಯಯನ ಅವಶ್ಯವಾಗಿದೆ. ಹತ್ತು ಪುಸ್ತಕಗಳ ಓದುವ ಬದಲು ಒಂದೇ ಪುಸ್ತಕವನ್ನು ಹತ್ತು ಬಾರಿ ಓದಿದಾಗ ವಿಷಯದ ಪಾಂಡಿತ್ಯ ಸಾಧಿಸಲು ಹಾಗೂ ವಿಶೇಷ ವಕೀಲರಾಗಲು ಸಾಧ್ಯ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಗುರಿ ಮುಖ್ಯ. ಗುರಿ ಮುಟ್ಟುವ ಸಾಧನಗಳು ಬಹಳ ಮುಖ್ಯವಾಗುತ್ತವೆ. ಪ್ರತಿಯೊಬ್ಬ ರಲ್ಲೂ ಒಂದು ವಿಶೇಷ ಶಕ್ತಿ ಇದ್ದು, ಅದನ್ನು ಸರಿಯಾಗಿ ಉಪಯೋಗಿಸಿ ಗೊಳ್ಳಬೇಕು. ಸಮಾಜದಲ್ಲಿ ಯಶಸ್ವಿಯಾದವರ ಜೀವನವನ್ನು ಉದಾಹರಣೆಯಾಗಿ ಇಟ್ಟು ಕೊಳ್ಳಬೇಕೆ ವಿನಃ ಯಶಸ್ವಿಯಾಗದೇ ಇರುವವರನ್ನಲ್ಲ ಎಂದರು. ಪದವಿ ಪಡೆದುಕೊಳ್ಳುವ ಸಲುವಾಗಿ. ವಿಷಯವನ್ನು ಸಮಗ್ರ ವಾಗಿ ತಿಳಿದುಕೊಳ್ಳುವುದಕ್ಕಾಗಿ ಓದ ಬೇಕು. ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಅಧ್ಯಯನದಿಂದ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ, ಜಹಾಂಗೀರ್ ಸೌದಾಗರ, ಪುರಸಭೆ ನಾಮ ನಿರ್ದೇಶಿತ ಸದಸ್ಯ ರಶೀದ್ ಅರಬ್,ನ್ಯಾಯವಾದಿ ಎಸ್ ಜೆ ವಾಲಿಕಾರ, ಕಮಲುದ್ದಿನ ಅಹಮದ, ಮಲ್ಲೇಶಿ ಎಂಬತ್ನಾಳ, ರಾಖಿ ಕಟ್ಟಿಮನಿ,ಸಿದ್ದು ಬಂಗಾರತಾಳ, ಎಮ್ ಬಿ ಮಾಣಿಕ, ರತಿಕಾಂತ ತಮಶೆಟ್ಟಿ, ಉಸ್ಮನ ಹಾಗೂ ಜಮಾದಾರ ವಕೀಲರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















