ರೈತರಲ್ಲಿ ಬೆಳೆ ವಿಮೆ ಅರಿವು ಮೂಡಿಸಿ
ಇಂಡಿ :ಕೃಷಿ ಅಧಿಕಾರಿಗಳು ಪ್ರತಿ ಹಳ್ಳಿಗೂ ತೆರಳಿ ಎಲ್ಲ ರೈತರ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸಿ ಅತಿ ಹೆಚ್ಚು ರೈತರನ್ನು ನೊಂದಣ ಮಾಡಿಸಬೇಕು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಕಾAತ ಪವಾರ ಹೇಳಿದರು.
ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯಡಿ ತಾಲೂಕಿನ ರೈತರಿಗೆ ಬೆಳೆ ವಿಮೆ ಬಗ್ಗೆ ಅರಿವು ಮೂಡಿಸಲು ಚಾಲನೆ ನೀಡಿ ಮಾತನಾಡಿದರು.
ಈ ಬಾರಿ ಮುಂಗಾರು ಕೆಲವು ಕಡೆ ಚೆನ್ನಾಗಿ ಆಗಿದ್ದರೆ ಕೆಲವು ಕಡೆ ಕಡಿಮೆ ಮಳೆಯಾಗುತ್ತಿದೆ. ಇದರ ಆಧಾರದ ಮೇಲೆ ಇಲಾಖೆಯವರು ಸರ್ವೇ ಮಾಡಿ ಯಾವ ಬೆಳೆಗೆ ವಿಮೆ ಮಾಡಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಬೆಳೆ ಸಾಲ ಪಡೆಯುವ ರೈತರಿಗೆ ನಾವು ಕಡ್ಡಾಯವಾಗಿ ಬೆಳೆ ವಿಮೆ ಮಾಡಿರುತ್ತೇವೆ. ಬೆಳೆ ಸಾಲ ಪಡೆಯದ ರೈತರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಿ ವಿಮೆ ಕಂತು ಪಾವತಿಸುವಂತೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ವಿತರಣೆ ಹಾಗೂ ಯಾವ ಬೆಳೆಗೆ ಯಾವ ಗೊಬ್ಬರ ಹಾಕಬೇಕು ಎಂಬುದನ್ನು ಕೃಷಿ ವಿಜ್ಞಾನ ಕೇಂದ್ರಗಳಿAದ ಕೃಷಿ ಇಲಾಖೆಯಿಂದ ತಿಳಿವಳಿಕೆ ನೀಡಲಾಗುವದು ಎಂದರು.
ಹೆಸರು, ಉದ್ದು, ತೊಗರಿ, ಹತ್ತಿ, ಸೂಯಾ, ಮುಸುಕಿನ ಜೋಳ, ಜೋಳ, ಎಳ್ಳಿ ನೊಂದಣ ಮಾಡಲು ಜುಲೈ ೩೧ ಕೊನೆಯ ದಿನ, ಸೂರ್ಯಕಾಂತಿಗೆ ೧೬ ಅಗಸ್ಟ ಕೊನೆಯ ದಿನ ವಾಗಿರುತ್ತದೆ ಎಂದರು.
ರೈತರ ವಂತಿಕೆ ಪ್ರತಿ ಎಕರೆಗೆ ಹೆಸರು ೨೬೯ ರೂ, ಉದ್ದು ೨೬೫ ರೂ, ತೊಗರಿ ೩೮೮, ಹತ್ತಿ ೮೬೫ ಮುಸುಕಿನಜೋಳ ೪೫೭ , ಸೂರ್ಯಕಾಂತಿ ೩೨೯ ರೂ ಪಾವತಿಸಬೇಕಾಗುತ್ತದೆ ಎಂದರು.
ಓರಿಯಂಟಲ್ ತಾಲೂಕು ಬೆಳೆ ವಿಮೆ ಇಂಡಿ ಪ್ರತಿನಿಧಿ ಚನಬಸಪ್ಪ ಝಳಕಿ, ಚಡಚಣ ಪ್ರತಿನಿಧಿ ಚಂದ್ರು ಮೇತ್ರಿ ಬೆಳೆ ವಿಮೆ ಕುರಿತು ಮಾತನಾಡಿದರು.
ಇಂಗಳಗಿ ಗ್ರಾಮದ ಶರಣಪ್ಪ ಶಂಕರೆಪ್ಪ ತೆಗ್ಗೆಳ್ಳಿ, ಸಾತಪ್ಪ ಮಲ್ಲಪ್ಪ ನಿವಾಳಶೆಟ್ಟಿ,ನಿಂಗಪ್ಪ ಶಿವಪ್ಪ ಶಿರನಾಳ, ಜಗದೇವ ಚನಬಸಪ್ಪ ಬಳಬಟ್ಟಿ, ಶರಣು ಕುಂಬಾರ ಮತ್ತಿತರಿದ್ದರು.
ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬೆಳೆ ವಿಮೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಮಾತನಾಡಿದರು.