ಸಂಗನಗೌಡ ಶಿಕ್ಷಕನಿಗೆ ಕರ್ನಾಟಕ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ
ಇಂಡಿ : ಚೇತನ ಪೌಂಡೇಶನ್ ರವರು ಅಖಿಲ ಕರ್ನಾಟಕ ಏಳನೇ ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸರಕಾರಿ ಪ್ರೌಢ ಶಾಲೆ ನಾದ ಕೆ ಡಿ .ಇಂಡಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಸಂಗನಗೌಡ ಎಸ್ ಹಚಡದ ಇವರಿಗೆ ಕರ್ನಾಟಕ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.
ಶ್ರೀರಾಜೇಂದ್ರ ಚಿಂತನ ಮಂಟಪ ಜಯನಗರ ಬೆಂಗಳೂರುನಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಡಾ.ಗಂಗಾಧರ ವ.ಮ ಸಾಹಿತಿಗಳು ಉದ್ಘಾಟಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಂಡಿತ ಅವಜಿ ಸಾಹಿತಿಗಳು ಉಪಸ್ಥಿತರಿದ್ದರು. ಸುವರ್ಣ ಕರ್ನಾಟಕ ಪತ್ರಕರ್ತ ಸಂಘದ ರಾಜ್ಯ ಅಧ್ಯಕ್ಷರು ಡಾ.ಶಿವಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಪಿರಸಾಬ ನಧಾಪ್ ಚೆತನ ಪೌಂಡೇಶನ್ ಗೌರವಾಧ್ಯಕ್ಷ ಅಧ್ಯಕ್ಷತೆ ವಹಿಸಿದ್ದರು. ಡಾ.ಬಾಲರಾಜ ಜಾನಪದ ರಾಜ್ಯ ಅಧ್ಯಕ್ಷರು ಉಪನ್ಯಾಸ ನೀಡಿದರು ಮಂಜುಳಾ ಪಾವಗಡ ಡಾ.ಶ್ರುತಿ ಮಧುಸುಧನ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಚಂದ್ರಶೇಖರ್ ಮಾಡಲಗೇರಿ ಸಂಗಮನಾಥ ಸಜ್ಜನ ನಿರೂಪಿಸಿದರು.