250 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಹೋರಾಟಕ್ಕೆ ಕರ್ನಾಟಕ ಭೀಮಸೇನೆಗೆ ಸಿಕ್ಕ ಜಯ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪಟ್ಟಣದ ಉಡುಕೋ ಕಾಲೋನಿ – ಯಲ್ಲಿರುವ ಸಂಗೀತ ನಾಡಗೌಡ ಅವರ ವಸತಿ ನಿಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು . ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚುವ ಮೂಲಕ ಎಲ್ಲಾ ಕರ್ನಾಟಕ ಭೀಮಸೇನೆ ಪದಾಧಿಕಾರಿಗಳು ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದರು ಈ ಸಂದರ್ಭದಲ್ಲಿ ಮಹಿಳಾ ರಾಜ್ಯ ಉಪಾಧ್ಯಕ್ಷರಾದ ಸಂಗೀತ ನಾಡಗೌಡ ಮಾತನಾಡಿ ನಮ್ಮ ಸಂಘಟನೆ ಸುಮಾರು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದಿವೆ ಹಾಗೂ ಎಲ್ಲಾ ಶಾಸಕರಿಗೆ ಮನವಿ ಕೂಡ ಕೊಟ್ಟಿದ್ದೇವೆ ಮನವಿಗೆ ಸ್ಪಂದಿಸಿದ ಸರ್ಕಾರಕ್ಕೆ ಹಾಗೂ ಎಲ್ಲಾ ಶಾಸಕರುಗಳಿಗೆ ಧನ್ಯವಾದಗಳು ತಿಳಿಸುತ್ತೇವೆ ಎಂದರು.
ಆಡಳಿತ ಸರ್ಕಾರಕ್ಕೆ ನೀಡಿದ ಮನವಿಗೆ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾನಿಲಯ ಆವರಣದಲ್ಲಿ 250 ಅಡಿ ಅಂಬೇಡ್ಕರ ಪ್ರತಿಮೆ ನಿರ್ಮಾಣ ಮಾಡಲು ಸ್ಥಳ ಸೂಚಿಸಿರುವುದಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮನವಿ ಕೊಟ್ಟಿರುವ ಮುಖಂಡರುಗಳಿಗೆ ಕೃತಜ್ಞತೆಗಳು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರ ಗಿರಿಯಪ್ಪ ತಳವಾರ, ಕಾರ್ಯಧ್ಯಕ್ಷರಾದ ಪರಶುರಾಮ್ ಚಲವಾದಿ, ತಾಲೂಕು ಮಹಿಳಾ ಅಧ್ಯಕ್ಷರಾದ ದೀಪಾ ರತ್ನ ಮಾತನಾಡಿದರು,
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಭೀಮಸೇನೆ ಪದಾಧಿಕಾರಿಗಳಾದ ನಿಡಗುಂದಿ ತಾಲೂಕ ಗೌರವಾಧ್ಯಕ್ಷ ದ್ಯಾಮಣ್ಣ ಚಲವಾದಿ, ಉಪಾಧ್ಯಕ್ಷ ನಿಡಗುಂದಿ ತಾಲೂಕು
ಶೇಕಪ್ಪ ಚಲವಾದಿ,ಬಾಗೇವಾಡಿ ತಾಲೂಕ್ ಅಧ್ಯಕ್ಷ
ನಿಂಗಪ್ಪ ಕಟ್ಟಿಮನಿ,ಹಣಮಂತ ಜಟ್ಟಗಿ, ಪರಶುರಾಮ್ ಮಾದರ,ಅವ್ವಪ್ಪ ಮಾದರ ಬೆಳ್ಳೆಪ್ಪ ಮಾದರ,ಉಮೇಶ್ ಮಾದರ ಮಂಜು ಮಾದರ,ಬಸಪ್ಪ ಮಾದರ
ಭೀಮಪ್ಪ ಮಾದರ,ಯಲ್ಲಪ್ಪ ಮಾದರ ಅನೇಕ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.