ಸರ್ಕಾರಿ ನೌಕರರ ವರ್ಗಾವಣೆ ಖಂಡಿಸಿ ಪ್ರತಿಭಟನೆ..
ಇಂಡಿ : ಆಡಳಿತದ ಚುರುಕಿನಗೊಸ್ಕರ ನೌಕರರನ್ನು ವರ್ಗಾವಣೆ ಮಾಡೊದ ಸರ್ವ್ಯ ಸಾಮಾನ್ಯ, ಆದರೆ ಇಂಡಿಯಲ್ಲಿ ಸುಮಾರು 50 ಸರಕಾರಿ ನೌಕರರನ್ನು ವರ್ಗಾವಣೆ ಮಾಡಿದ್ದು ಸೇಡಿನ ರಾಜಕಾರಣ ಎಂದು ಜೆಡಿಎಸ್ ಪರಾಭವ ಅಭ್ಯರ್ಥಿ ಬಿ.ಡಿ. ಪಾಟೀಲ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧದಲ್ಲಿ ನೌಕರ ವರ್ಗಾವಣೆ ಖಂಡಿಸಿ ಉಪವಿಭಾಗ ಅಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಯ ಮಾಡಿ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿಯ ಅಧಿಕಾರಿ ಮುಜಗೋಂಡ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತಾನಾಡಿ ಹೇಳಿದರು. ಇಂಡಿ ಮತಕ್ಷೇತ್ರದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಮಾಡಿ ಸೇಡಿನ ರಾಜಕಾರಣ ಮಾಡಿದ್ದು ಇದರಲ್ಲಿ ಉಪವಿಭಾಗ ಅಧಿಕಾರಿ, ಮೂವರು ಪಿ ಎಸ್ ಐ, ಕಂದಾಯ, ಕೃಷಿ, ಕೆಇಬಿ , ಗೃಹ ಹಾಗೂ ಮುಂತಾದ ಇಲಾಖೆಯಲ್ಲಿ ಸೇವೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಆದರೆ ಕೇವಲ ಕೆಲವೊಂದು ಸರ್ಕಾರಿ ನೌಕರನ್ನು ಗುರಿಯಾಗಿಸಿ ಕೋಂಡು ವರ್ಗಾವಣೆ ಮಾಡಿದ್ದು ಖಂಡನಾರ್ಹ. ಚುನಾವಣೆನಂತರ ಹೂಸ ಸರ್ಕಾರಗಳು ತಮ್ಮ ಆಡಳಿತದ ಅನುಕೂಲಕ್ಕಾಗಿ ವರ್ಗಾವಣೆ ಸರ್ವೇ ಸಾಮಾನ್ಯ.ಆದರೆ ದುರುದ್ದೇಶದಿಂದ ಕೂಡಿದ ವರ್ಗಾವಣೆಯಲ್ಲಿ ಅಮಾಯಕ ಸಾಮಾನ್ಯ ನೌಕರರ ವರ್ಗಾವಣೆ ಹೂಂದಿರುವುದು ದುಃಖಕರವಾಗಿದೆ. ಜೂನ್ ತಿಂಗಳಲ್ಲಿ ಮಕ್ಕಳ ಅಡ್ಮಿಶನ ಮಾಡಿ ಪೀ ಬರ್ತಿ ಮಾಡಿ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಶಿಕ್ಷಣ ಅತಂತ್ರವಾಗಿದೆ. ಅದರಲ್ಲಿ ವೃದ ತಂದೆ ತಾಯಿ ಯೋಗಕ್ಷೇಮ ಇವರದಾಗಿದೆ. ಏಕಾಏಕಿ ವರ್ಗಾವಣೆ ಯಿಂದ ದಿಕ್ಕು ಕಾಣದಂತಾಗಿದೆ. ಕೂಡಲೇ ಸರ್ಕಾರ ಈ ವರ್ಗಾವಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡರಾದ ಅಯೋಬ ನಾಟೀಕರ ಮಾತನಾಡಿದ ಅವರು, ಶಾಸಕರು ಅಭಿನಂದನಾ ಸಮಾರಂಭದಲ್ಲಿ ಸರ್ವರನು ವಿಶೇಷವಾಗಿ ವಿರೋಧಿಗಳನ್ನು ಕೂಡಾ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಕಾಣುವುದಾಗಿ ಹೇಳಿದ್ದು, ನೋಡಿದರೆ ನಾಲಿಗೆ ಮೇಲೆ ಒಂದು, ಕೃತಿಯಲ್ಲಿ ಒಂದು ಎಂಬುದು ಕಂಡು ಬರುತ್ತದೆ. ಕೂಡಲೆ ಸರ್ಕಾರ ಅಮಾಯಕ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಶ್ರೀಶೈಲಗೌಡ ಪಾಟೀಲ, ರೇವಣಸಿದ್ದ ಗೋಡಕೆ, ಮಹಿಬೂಬ ಬೇವನೂರ, ಇಸ್ಮಾಯಿಲ್ ಕುಣಬಿ, ಮಾತನಾಡಿದರು,
ಈ ಸಂದರ್ಭದಲ್ಲಿ ಸಿದ್ದು ಡಂಗಾ, ರಾಜು ಮುಲ್ಲಾ, ಬಸುಗೌಡ ಬಿರಾದಾರ, ದುಂಡು ಬಿರಾದಾರ, ವಿ ಜಿ ಬಿರಾದಾರ, ಇರ್ಫಾನ್ ಅಗರಖೇಡ, ನಿಯಾಝ್ ಅಗರಖೇಡ, ಶರಣಪ್ಪ ಹೂಸೂರ, ಸುರೇಶ್ ಪೂಜಾರಿ, ಬಸವರಾಜ ಯಾಡಗಿ, ಮಾಳಪ್ಪ ಪೂಜಾರಿ, ಫಜಲು ಮುಲ್ಲಾ, ಸುದರ್ಶನ್ ಉಪಾಧ್ಯಾಯ,ಲಕ್ಕಿ ಲಚ್ಚ್ಯಾಣ,ಶಿವಾ ಟೆಂಗಳೆ , ಸದ್ದಾಂ ಕೋಟ್ನಾಳ ,ಭಾಷಾ ಇಂಡಿಕರ,ಮುಂತಾದ ನಾಯಕರು ಉಪಸ್ಥಿತರಿದ್ದರು