ಮಹಿಳಾ ಆಯೋಗದ ಅಧ್ಯಕ್ಷೆ ಬಗ್ಗೆ ಹಗುರವಾಗಿ ಮಾತಾಡಿರುವ ಅಯೋಗ್ಯ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ರಾಜ್ಯದ ಮಹಿಳೆಯರಿಗೆ ಮಾಡಿರುವ ಅಪಮಾನ
ಮುದ್ದೇಬಿಹಾಳ:ಮಹಿಳೆಯರ ಕಷ್ಟ ಏಳಿಗೆಗಾಗಿ ರಾಜ್ಯದ ತುಂಬಾ ಹಗಲಿರುಳು ಶ್ರಮಿಸುತ್ತಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅವರ ಬಗ್ಗೆ ಹಗುರುವಾಗಿ ಮಾತನಾಡುತ್ತಿರುವ ಆಯೋಗ್ಯ ಬಿಗ್ ಬಾಸ್ ಸ್ಪರ್ದಿ ಜಗದೀಶ ಕರ್ನಾಟಕದ ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ. ಎಂದು ನಾಗಲಕ್ಷ್ಮೀ ಚೌಧರಿ ಅಭಿಮಾನಿ ಮಾದಿಗ ದಂಡೂರ ಸಮಿತಿಯ ಅಧ್ಯಕ್ಷ ತಿಪ್ಪಣ್ಣ ದೊಡಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅಭಿಮಾನಿಗಳಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ
ಅವರು ಮಾತನಾಡಿದರು. ಆತ ಕೂಡಲೇ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಯೋಜನೆ ನೀಡಿ ಗೌರವಿಸುತ್ತೆ. ಆದರೆ ಆತ ಮಾಡಿದನ್ನು ಖಂಡಿಸುತ್ತೇವೆ. ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ನಾಗಲಕ್ಷ್ಮೀ ಚೌಧರಿ ಅಭಿಮಾನಿ ಮುತ್ತು ಟಕ್ಕಳಕಿ ಮಾತನಾಡಿ: ಹತ್ತು ಹಲವಾರು ಜನಪರ ಕೆಲಸ ಮಾಡಿರುವ ನಾಗಲಕ್ಷ್ಮೀ ಚೌಧರಿ ಅವರ ಬಗ್ಗೆ ಹಗುರುವಾಗಿ ಮಾತನಾಡಿ ನಾಲಿಗೆ ಹರಿ ಬಿಟ್ಟಿರುವ ಜಗದೀಶ ಲಾಯರ್ ಆತನ ನಾಲಿಗೆಗೆ ಹಿಡಿತವಿರಲಿ. ೧೯೯೬ ರಿಂದ ಮಹಿಳಾ ಆಯೋಗದ ಅಧ್ಯಕ್ಷರು ಯಾರು ಚೌಧರಿ ಅವರ ತರ ಕೆಲಸ ಮಾಡಿಲ್ಲ, ಕೇವಲ ಒಂದು ವರ್ಷ ನಾಲ್ಕು ತಿಂಗಳಲ್ಲಿ ೨೪ ಜಿಲ್ಲೆ ಪ್ರವಾಸ ಮಾಡಿ ಮಹಿಳೆಯರ ತೊಂದರೆ ಮತ್ತು ತೊಂದರೆ ಒಳಗಿದ್ದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಲು ತಿಳಿಸಿದ್ದಾರೆ. ಅಂತವರ ವಿರುದ್ಧ ಮಾತನಾಡಿದರೆ ಅವರ ಅಭಿಮಾನಿಗಳು ನಾವು ಸುಮ್ಮ ನಿರಲ್ಲ ಮಹಿಳೆಯರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಮತ್ತು ಈಗ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಜಗದೀಶನ ವಿರುದ್ಧ ಪ್ರಕರಣ ದಾಖಲೆ ಮಾಡುತ್ತೇವೆ. ಎಂದರು.
ಶಿವಲೀಲಾ ಬಸರಕೋಡ ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳದ ರಾಜ್ಯ ಕಾರ್ಯದರ್ಶಿ ಮಾತನಾಡಿ: ನೊಂದವರ ಕಣ್ಣಿರ ಒರೆಸುವ ಕೆಲಸವನ್ನು ನಾಗಲಕ್ಷ್ಮೀ ಚೌಧರಿ ಅವರು ಮಾಡುತ್ತಿದ್ದಾರೆ. ಅವರಿಗೆ ದೇವತೆ ಎಂದರು ತಪ್ಪಾಗಲಾರದು. ಇತ ಜಗದೀಶ ಎನ್ನುವವ ಲಾಯರ್ ಎಂದು ಕೊಂಡು ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವದನ್ನು ಬಿಟ್ಟು ಈ ರೀತಿ ಅಸಭ್ಯವಾಗಿ ಮಾತನಾಡುವುದು ಆತ ಕೂಡಲೇ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಆತನನ್ನು ಹುಡಕಾಡಿ ಮಹಿಳೆಯರು ಸೇರಿ ಹೊಡಿಯುವ ಕೆಲಸ ಮಾಡುತ್ತೇವೆ. ತಾಲ್ಲೂಕು ನಿಂದ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತವೆ. ಎಂದರು.
ಈ ವೇಳೆ ಭೀಮಬಾಯಿ ಹತ್ತೂರ, ರಜೀಯಾ ನಧಾಪ್ ಮಾತನಾಡಿ: ಜವಾಬ್ದಾರಿ ಸ್ಥಾನದಲ್ಲಿ ಇರುವ ಮಹಿಳೆಯರ ಬಗ್ಗೆ ಹಗುರುವಾಗಿ ಮಾತನಾಡಿದ ಜಗದೀಶನ ಮೇಲೆ ಕ್ರಮ ಕೈಗೊಳ್ಳಿ, ಇಲ್ಲವಾದಲ್ಲಿ ಮಹಿಳೆಯರು ಸೇರಿ ರಾಜ್ಯಾದ್ಯಂತ ಮಾಡಬೇಕಾಗುತ್ತದೆ. ಎಚ್ಚರಿಸಿದರು. ಹೋರಾಟ ಎಂದು
ಈ ಸಂದರ್ಭದಲ್ಲಿ ಅನ್ನಪೂರ್ಣ ಅಂತ್ರಕಾಳ, ಗಂಗಮ್ಮ ಬಿರಾದಾರ, ಗೌರಮ್ಮ ಭೋವಿ, ಸಾವಿತ್ರಿ ಸನಾದ, ಲಕ್ಷ್ಮೀಬಾಯಿ ಇಂಗಳಗೇರಿ, ಅಮೀನಾ, ಗೌರಮ್ಮ ದೊಡಮನಿ, ರೇಣುಕಾ ಏಳೂರ, ನಾಗಮ್ಮ ಚಲವಾದಿ, ರೇಣುಕಾ ಚಲವಾದಿ, ಸುಮಿತ್ರಾ ತಳವಾರ, ಸವಿತಾ ತಳವಾರ, ಲಕ್ಷ್ಮೀಬಾಯಿ ಚಲವಾದಿ, ಭವ್ಯ ಹಿಪ್ಪರಗಿ, ಶರಣಮ್ಮ ಚಲವಾದಿ, ಕಾಳಿಂಗರಾಯ ಯರಝರಿ.ಹಣಮಗೌಡ ಬಿರಾದಾರ, ಸೇರಿದಂತೆ ಭಾಗವಹಿಸಿದ್ದರು.